AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಬು ಆರಿಸೋದಕ್ಕೇನೋ ಬಂದ್ವಿ ಆದರೆ ಚೀಲ! ಸ್ವಲ್ಪ ಕೊಡ್ತೀರಾ?

Apple Picking : ಮಕ್ಕಳ ಮತ್ತು ಸಾಕುಪ್ರಾಣಿಗಳ ಮುಗ್ಧತೆ ಒಂದೇ. ಒಮ್ಮೆ ನಂಬಿದರೆ ಮುಗಿಯಿತು. ಅದೇ ವಿಶ್ವಾಸ ಅದೇ ಪ್ರೀತಿ. ಈಗ ಈ ಅಣ್ಣನೊಂದಿಗೆ ತಂಗಿಬೆಕ್ಕು ಸೇಬುತೋಟಕ್ಕೆ ತಾನೂ ಸೈ! 2ಮಿಲಿಯನ್​ ಜನ ಮೆಚ್ಚಿದ್ದಾರೆ ಈ ವಿಡಿಯೋ.

ಸೇಬು ಆರಿಸೋದಕ್ಕೇನೋ ಬಂದ್ವಿ ಆದರೆ ಚೀಲ! ಸ್ವಲ್ಪ ಕೊಡ್ತೀರಾ?
Kid and cat go apple picking together
TV9 Web
| Edited By: |

Updated on:Oct 29, 2022 | 2:14 PM

Share

Viral Video : ಆಗಾಗ ಬೆಕ್ಕು ನಾಯಿಗಳ ವಿಡಿಯೋ ಅನ್ನು ನೀವು ನೋಡುತ್ತಿರುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಬಹಳ ಮುದ್ದಾಗಿದೆ. ಈ ಪುಟ್ಟ ಹುಡುಗ ಸೇಬು ಆರಿಸಲು ತೋಟಕ್ಕೆ ಹೋಗುತ್ತಿದ್ದಾನೆ. ನಾನೂ ಬರುವೆ ಎಂದು ಅವನೊಂದಿಗೆ ಹೊರಟೇ ಬಿಟ್ಟಿದೆ ಈ ಬೆಂಗಾಲಿ ಬೆಕ್ಕು. ಹದಬಿಸಿಲು ನೆರಳಿನ ತೋಟ ಎಂಥ ಮನೋಹರವಾಗಿದೆ. ಅಲ್ಲಲ್ಲಿ ಹಸಿರು ಕೆಂಪು ಸೇಬುಗಳು ಬೇರೆ. ನೋಡಿದ ಯಾರಿಗೂ ಹೋಗಬೇಕೆಂದು ಅನ್ನಿಸುವುದು ಸಹಜ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕಝುಕಿ ಇದು ಈ ಬೆಕ್ಕಿನ ಹೆಸರು. ಮಗು ಹೇಗೆ ಓಡುತ್ತದೋ ಹಾಗೆ ಓಡೋಡಿ ಹೋಗುತ್ತದೆ. ನಂತರ ಮರಕ್ಕೆ ಏಣಿ ಇಟ್ಟಾಗಲೂ ಏರುತ್ತದೆ. ಸೇಬು ಕೀಳಲು ಬಂದಿದ್ದರೆ ಅದನ್ನೂ ಮಾಡುತ್ತಿತ್ತೇನೋ! ಈತನಕ ಈ ವಿಡಿಯೋ ಅನ್ನು ಸುಮಾರು 2 ಮಿಲಿಯನ್ ಜನರು ನೋಡಿದ್ದಾರೆ. 32,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಈ ಬೆಂಗಾಲಿ ಬೆಕ್ಕು ಬಹಳ ಮುದ್ದಾಗಿದೆ. ನನ್ನ ಬಳಿಯೂ ಇದೆ ಎಂದು ಒಬ್ಬರು ಹೇಳಿದ್ದಾರೆ. ಇವರಿಬ್ಬರೂ ಅದೆಷ್ಟು ಅನ್ಯೋನ್ಯವಾಗಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಎಂಥ ಮುದ್ದಾದ ಜೋಡಿ ಇದು ಎಂದು ಮಗದೊಬ್ಬರು ಹೇಳಿದ್ದಾರೆ.

ಮಕ್ಕಳೇ ಹಾಗೇ. ಇದೇ ನಿನ್ನ ತಮ್ಮ ಅಥವಾ ತಂಗಿ ಎಂದು ಹೇಳಿಬಿಟ್ಟರೆ ಸ್ವೀಕರಿಸಿಬಿಡುತ್ತವೆ. ಈಗ ಹೀಗೆ ಈ ಪುಟ್ಟ ಹುಡುಗ ಬೆಕ್ಕಿನೊಂದಿಗೆ ಹೊಂದಿಕೊಂಡಂತೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:08 pm, Sat, 29 October 22

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್