AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ರುಚಿಗೆ ದೋಷವಿಲ್ಲ; ಪುಣೆಯಲ್ಲಿ ಹೀಗೊಂದು ಸ್ಪೆಷಲ್ ಹೋಟೆಲ್

Pune : ಇಲ್ಲಿಯ ಸಿಬ್ಬಂದಿ ಎಲ್ಲರೂ ವಾಕ್​ಶ್ರವಣದೋಷವುಳ್ಳವರೇ. ಅವರೊಂದಿಗೆ ಹೇಗೆ ಸಂಭಾಷಣೆ ನಡೆಸಬೇಕು ಎನ್ನುವುದನ್ನು ಮೆನುವಿನಲ್ಲಿ ಸೂಚಿಸಲಾಗಿದೆ. ನೆಟ್ಟಿಗರು ಖಂಡಿತ ಇಲ್ಲೊಮ್ಮೆ ಭೇಟಿ ನೀಡಬೇಕು ಎಂದು ಕಾತರಿಸುತ್ತಿದ್ದಾರೆ.

ಇಲ್ಲಿ ರುಚಿಗೆ ದೋಷವಿಲ್ಲ; ಪುಣೆಯಲ್ಲಿ ಹೀಗೊಂದು ಸ್ಪೆಷಲ್ ಹೋಟೆಲ್
This Pune eatery is operated by speech and hearing impaired employees
TV9 Web
| Edited By: |

Updated on:Oct 29, 2022 | 12:37 PM

Share

Viral Video : ಟೇಬಲ್ ಕ್ಲೀನ್ ಮಾಡು, ಎಷ್ಟೊತ್ತದು ಒಂದು ಸಲ ಹೇಳಿದರೆ ಗೊತ್ತಾಗಲ್ವಾ? ಬೇಗ ಪಾರ್ಸೆಲ್​ ಕೊಡು, ಈ ಕಸ್ಟಮರ್ ಅಟೆಂಡ್​ ಮಾಡು ಹೀಗೆ.. ಕೆಲಸ ಮಾಡಿಸುವ ನೆಪದಲ್ಲಿ ಒಬ್ಬರಮೇಲೊಬ್ಬರು ದಬ್ಬಾಳಿಕೆಯನ್ನೂ ಮಾಡುವುದಿಲ್ಲ. ಗ್ರಾಹಕರೂ ಇಲ್ಲಿ ಸನ್ನೆಯಲ್ಲಿಯೇ ಸಿಬ್ಬಂದಿಯೊಂದಿಗೆ ವ್ಯವಹರಿಸುವುದು. ಇಲ್ಲಿ ಎಲ್ಲವೂ ವಿನಮ್ರತೆಯಲ್ಲಿ, ಶಾಂತತೆಯಲ್ಲಿ, ಶ್ರದ್ಧೆಯಲ್ಲಿ, ನಗುಮುಖದಲ್ಲಿ ಮತ್ತು ಸಂತೃಪ್ತಿಯ ನಿರೀಕ್ಷೆಯಲ್ಲಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಪುಣೆಯಲ್ಲಿರುವ ಈ ರೆಸ್ಟೋರೆಂಟ್​ನಲ್ಲಿ ನಿಮ್ಮನ್ನು ಸ್ವಾಗತಿಸುವವರು, ಸರ್ವ್​ ಮಾಡುವವರು, ಅಡುಗೆ ಮಾಡುವವರು ಎಲ್ಲರೂ ವಾಕ್​ ಶ್ರವಣದೋಷವುಳ್ಳ ವ್ಯಕ್ತಿಗಳೇ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇನ್​ಸ್ಟಾಗ್ರಾಂನ ಪುಣೆ ಫುಡೀಸ್​ ಎಂಬ ಫುಡ್​ ಬ್ಲಾಗಿಂಗ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗಿದೆ. ಇನ್​ಸ್ಟಾಗ್ರಾಂನಲ್ಲಿ ಈ ರೆಸ್ಟೋರೆಂಟ್​ನ ಪುಟವಿದೆ; @terrasinne. ಇಲ್ಲಿ ಕೆಲಸ ಮಾಡುವವರೆಲ್ಲರೂ ಮೂಕರು, ಕಿವುಡರು. ಇವರೊಂದಿಗೆ ಹೇಗೆ ಸಂಭಾಷಣೆ ನಡೆಸಬೇಕು ಎಂಬುದನ್ನು ಮೆನುವಿನ ಮೂಲಕ ತಿಳಿದುಕೊಳ್ಳಬಹುದು. ಬಂದ ಗ್ರಾಹಕರನ್ನೆಲ್ಲ ಇಲ್ಲಿಯ ಸಿಬ್ಬಂದಿ ಶಾಂತಚಿತ್ತದಿಂದ ಸಮಾಧಾನದಿಂದ ರುಚಿರುಚಿಯಾದ ಭಕ್ಷ್ಯಗಳನ್ನು ಬಡಿಸಿ ಉಪಚರಿಸುತ್ತದೆ.

ವಾಕ್​, ಶ್ರವಣ ದೋಷ ಮತ್ತು ಬಹುಅಂಗವೈಕಲ್ಯ ಉಳ್ಳವರನ್ನು ನೇಮಿಸಿಕೊಳ್ಳುವ ಭಾರತದ ಏಕೈಕ ರೆಸ್ಟೋರೆಂಟ್​ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಲಂಡನ್​ನ ಇಂಟರ್ನ್ಯಾಷನಲ್​ ಹಾಸ್ಪಿಟ್ಯಾಲಿಟಿ ಕೌನ್ಸಿಲ್​ ‘ಉತ್ತಮ ಆತಿಥ್ಯ’ ಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಿದೆ.

ಏಳು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಮೆಚ್ಚಿದ್ದಾರೆ. ‘ಈ ರೆಸ್ಟೋರೆಂಟ್​ಗೆ ಒಮ್ಮೆ ಹೋಗಬೇಕು. ಬಹಳ ವಿಶಿಷ್ಟವಾಗಿದೆ’ ಎಂದಿದ್ದಾರೆ ನೆಟ್ಟಿಗರು. ನೀವೂ ಪುಣೆಗೆ ಹೋದರೆ ಈ ರೆಸ್ಟೋರೆಂಟ್​ಗೆ ಒಮ್ಮೆ ಭೇಟಿನೀಡಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:37 pm, Sat, 29 October 22

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ