AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?

ಸಿಂಹವನ್ನು ಕಾಡಿಸುತ್ತಾ ಆಮೆ ಸಂತೋಷಗೊಳ್ಳುತ್ತಿದೆ. ಸಿಂಹಕ್ಕೆ ನೀರು ಕುಡಿಯಲು ಬಿಡದೆ ಮತ್ತೆ ಮತ್ತೆ ಕಾಡಿಸತೊಡಗಿದೆ. ಇದರಿಂದ ಅಸಾಮಾಧಾನಗೊಂಡ ಸಿಂಹ ಏನೂ ಮಾಡಲು ತೋಚದೆ ಸುಮ್ಮನಾಗಿದೆ.

Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?
TV9 Web
| Updated By: shruti hegde|

Updated on: Jun 09, 2021 | 3:43 PM

Share

ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಕೆಲವು ತಮಾಷೆ ವಿಡಿಯೋಗಳಾಗಿದ್ದರೆ ಇನ್ನು ಕೆಲವು ರೋಮಾಂಚನಕಾರಿಯಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಪ್ರಾಣಿಗಳ ತುಂಟಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಪ್ರಾಣಿಗಳ ತುಂಟಾಟದ ವಿಡಿಯೋಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಇಲ್ಲೊಂದು ಆಮೆಯು ದೈತ್ಯಾಕಾರದ ಸಿಂಹವನ್ನೇ ನಡುಗಿಸುತ್ತದೆ. ಇದೀಗ ವೈರಲ್​ ಆಗುತ್ತಿರುವ ಸಿಂಹ ಮತ್ತು ಪುಟ್ಟ ಆಮೆಯ ವಿಡಿಯೋ ನೋಡಿದ ನೆಟ್ಟಿಗರು ಆಮೆಯ ಕೀಟಲೆಯನ್ನು ಮೆಚ್ಚಿಕೊಂಡಿದ್ದಾರೆ. 

ಸಿಂಹ ಕಾಡಿನ ರಾಜ. ಅದು ಹೇಳಿದಂತೆಯೇ ಇತರ ಪ್ರಾಣಿಗಳು ಕೇಳಬೇಕೆಂಬ ಹಠ. ಸಿಂಹ ಎದುರು ಬಂದರೆ ಸಾಕು! ಉಳಿದ ಪ್ರಾಣಿಗಳೆಲ್ಲಾ ಬಾಲ ಮುದುಡಿಕೊಂಡು ತಲೆಮರಿಸಿಕೊಳ್ಳುತ್ತವೆ. ಆದರೆ ಪುಟ್ಟ ಆಮೆ ಮರಿಯೊಂದು ದೈತ್ಯಾಕಾರದ ಸಿಂಹಕ್ಕೆ ಕಾಟ ಕೊಡುತ್ತಿದೆ. ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಿಂಹ ಸೋಲುತ್ತಿದೆ. ಈ ವೀಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚಿಕೊಂಡಿದ್ದು, ಉಳಿದೆಲ್ಲಾ ಪ್ರಾಣಿಗಳನ್ನು ಹತೋಟಿಯಲ್ಲಿಟ್ಟುಕೊಂಡ ಸಿಂಹಕ್ಕೆ ಆಮೆಗೆ ಮಾತುಕೇಳಿಸಲು ಆಗುತ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ.

ಬಾಯಾರಿದ ಸಿಂಹ ನೀರು ಕುಡಿಯಲೆಂದು ಕೆರೆ ಬಳಿ ಬಂದಿದೆ. ನೆಮ್ಮದಿಯಿಂದ ನೀರು ಕುಡಿಯುತ್ತಿದೆ. ಸದ್ದಿಲ್ಲದೇ ನೀರಿನೊಳಗಿಂದ ಬಂದ ಆಮೆಯು ಸಿಂಹದ ಮೀಸೆಯನ್ನು ಎಳೆಯುತ್ತಿದೆ. ಸಿಂಹವು ತಪ್ಪಿಸಿಕೊಂಡಂತೆ ಮತ್ತೆ ಕಾಡಿಸುತ್ತಿದೆ. ಇದರಿಂದ ಸಿಂಹ ಅಸಾಮಾಧಾನಗೊಂಡು ಎದ್ದು ಹೊರಟಿದೆ.

ಸಿಂಹವನ್ನು ಕಾಡಿಸುತ್ತಾ ಆಮೆ ಸಂತೋಷಗೊಳ್ಳುತ್ತಿದೆ. ಸಿಂಹಕ್ಕೆ ನೀರು ಕುಡಿಯಲು ಬಿಡದೆ ಮತ್ತೆ ಮತ್ತೆ ಕಾಡಿಸತೊಡಗಿದೆ. ಇದರಿಂದ ಅಸಾಮಾಧಾನಗೊಂಡ ಸಿಂಹ ಏನೂ ಮಾಡಲು ತೋಚದೆ ಸುಮ್ಮನಾಗಿದೆ.

ಇದನ್ನೂ ಓದಿ:

Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡು ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!