AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಏಸುವನ್ನು ಭೇಟಿಯಾದ ಗಣಪತಿ; ಸ್ಪೇನ್​ನಲ್ಲಿ ನಡೆದ ಈ ವಿಶೇಷ ದೃಶ್ಯ ನೋಡಿ

ಗಣೇಶನ ವಿಗ್ರಹ ಹೊತ್ತ ಭಾರತೀಯ ಗುಂಪು ಚರ್ಚ್​ನ ಧಾರ್ಮಿಕ ಸ್ಥಳದ ಆಡಳಿತ ಮಂಡಳಿಯಿಂದ ಒಳಕ್ಕೆ ಪ್ರವೇಶಿಸಲು ಮತ್ತು ಇದರಿಂದ ಇಬ್ಬರು ದೇವರು ಭೇಟಿಯಾಗಬಹುದು ಎಂದು ಪರವಾನಗಿ ಪಡೆಯಿತು.

Video: ಏಸುವನ್ನು ಭೇಟಿಯಾದ ಗಣಪತಿ; ಸ್ಪೇನ್​ನಲ್ಲಿ ನಡೆದ ಈ ವಿಶೇಷ ದೃಶ್ಯ ನೋಡಿ
ಏಸುವನ್ನು ಭೇಟಿಯಾದ ಗಣಪತಿ
TV9 Web
| Edited By: |

Updated on:Sep 09, 2021 | 3:58 PM

Share

ಸಾಮಾಜಿಕ ಜಾಲತಾಣದಲ್ಲಿ ಸಹೋದರತ್ವ ಸಾರುವ ವಿಡಿಯೋವೊಂದು ವೈರಲ್ ಆಗಿದೆ. ಸ್ಪೇನ್​ನಲ್ಲಿ ನಡೆದ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಭಾರತೀಯ ಗುಂಪು ಮತ್ತು ಚರ್ಚ್​ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಜನರು ಸಹೋದರತ್ವ ಮತ್ತು ಸಹಾನುಭೂತಿಯ ಬಲವಾದ ಸಂದೇಶವನ್ನು ಸಾರಿದ್ದಾರೆ. ಹಳೆಯ ವಿಡಿಯೋ ಗಣೇಶ ಚತುರ್ಥಿಯ ಪ್ರಯುಕ್ತ ಮತ್ತೆ ವೈರಲ್​ ಆಗಿದೆ.

ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸ್ಪೇನ್​ನಲ್ಲಿ ವಾಸಿಸುತ್ತಿರುವ ಭಾರತದ ಜನರ ಗುಂಪು ಗಣೇಶನ ಮೆರವಣಿಗೆ ಹೊತ್ತು ಹೊರಟಿತ್ತು. ಚರ್ಚ್ ದಾರಿಯಲ್ಲಿಯೇ ಅವರ ಮೆರಣವಣಿಗೆ ಸಾಗಬೇಕಿತ್ತು. ಗಣೇಶನ ವಿಗ್ರಹ ಹೊತ್ತ ಭಾರತೀಯ ಗುಂಪು ಚರ್ಚ್​ನ ಧಾರ್ಮಿಕ ಸ್ಥಳದ ಆಡಳಿತ ಮಂಡಳಿಯಿಂದ ಒಳಕ್ಕೆ ಪ್ರವೇಶಿಸಲು ಮತ್ತು ಇದರಿಂದ ಇಬ್ಬರು ದೇವರು ಭೇಟಿಯಾಗಬಹುದು ಎಂದು ಪರವಾನಗಿ ಪಡೆಯಿತು.

ಸ್ಪೇನ್​ನಲ್ಲಿ ಗಣೇಶ ಹಬ್ಬ ಆಯೋಜಿಸಿದ ಭಾರತೀಯ ಗುಂಪು, ಸ್ಥಳೀಯ​ ಆಡಳಿತ ಮಂಡಳಿಗೆ ಚರ್ಚ್ ಮಾರ್ಗವಾಗಿ ಗಣೇಶನನ್ನು ತೆಗೆದುಕೊಂಡು ಹೋಗಬಹುದೇ ಎಂದು ಕೇಳಿದೆ ಇದರಿಂದ ದೇವರು ಪರಸ್ಪರ ಭೇಟಿಯಾಗಬಹುದು ಎಂದು ಸಹ ಕೇಳಿದೆ ಎಂದು ಅಗ್ನಿಹೋತ್ರಿ ಟ್ವೀಟ್ ಮಾಡುವಾಗ ಬರೆದಿದ್ದಾರೆ.

ಗಣಪತಿ ಬಪ್ಪನನ್ನು ಚರ್ಚ್​ನ ಒಳಗೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಚರ್ಚ್ ಒಳಗಿದ್ದ ಜನರು ಹಾಡು ಹೇಳಲು ಪ್ರಾರಂಭಿಸಿದ್ದಾರೆ ಎಂದು ವಿಡಿಯೋ ತೋರಿಸಿದೆ. ನನ್ನ ಸ್ನೇಹಿತನಿಂದ ವಿಡಿಯೋವನ್ನು ತರಿಸಿಕೊಂಡಿದ್ದೇನೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

ಇದನ್ನೂ ಓದಿ:

Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ

Viral Video: ಭಾರೀ ಮಳೆಯಿಂದ ಕೊಚ್ಚಿ ಹೋಯ್ತು ಡೆಹ್ರಾಡೂನ್- ಹೃಷಿಕೇಶದ ರಸ್ತೆ; ವಿಡಿಯೋ ವೈರಲ್

(Lord Ganapati met jesus in spain video goes viral)

Published On - 3:57 pm, Thu, 9 September 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ