Viral Video: ಬೆನ್ನಿಗೆ ನಿಲ್ಲುವುದು ಎಂದರೆ ಇದೇ; ಇವರಿಬ್ಬರ ಬದುಕೀಗ ಮತ್ತೆ ಮೊದಲಿನಂತೆ

Love : ಹಕ್ಕಿಯಂತೆ ಹಾರಾಡಿಕೊಂಡಿದ್ದ ಈ ಪ್ರೇಮಿಗಳು ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಇವರ ಬದುಕಿನಲ್ಲಿ ಅನಿರೀಕ್ಷಿತವಾದದ್ದೊಂದು ಘಟಿಸಿತು. ಕನ್ನಡ ಕಿರುತೆರೆ ನಟಿಯಾದ ಈಕೆ ತೀವ್ರತರವಾದ ಅನಾರೋಗ್ಯಕ್ಕೆ ತುತ್ತಾದರು. ಶೇ. 50 ಮಾತ್ರ ಬದುಕುಳಿಯುವ ಸಾಧ್ಯತೆ ಇತ್ತು. ಬೇರೆ ಮದುವೆ ಮಾಡಿಕೋ ಎಂದು ಈಕೆ ಪ್ರಿಯಕರನಿಗೆ ಹೇಳಿದರು. ಮುಂದೆ?

Viral Video: ಬೆನ್ನಿಗೆ ನಿಲ್ಲುವುದು ಎಂದರೆ ಇದೇ; ಇವರಿಬ್ಬರ ಬದುಕೀಗ ಮತ್ತೆ ಮೊದಲಿನಂತೆ
ಪ್ರಿಯಾಂಕಾ ಕಾಮತ್ ಮತ್ತು ಅಮಿತ ನಾಯಕ
Follow us
|

Updated on:Aug 14, 2023 | 11:16 AM

Bonding : ಅವನು ಎಂದೂ ಐ ಲವ್​ ಯೂ ಎಂದು ಈತನಕ ಮಾತಿನಲ್ಲಿ ಹೇಳಲೇ ಇಲ್ಲ. ಆದರೆ ಪ್ರೀತಿ ಎಂದರೇನು ಎನ್ನುವುದನ್ನು ಕೃತಿಯಲ್ಲಿ ವ್ಯಕ್ತಪಡಿಸುತ್ತಾ ಹೋದ; ಇವರಿಬ್ಬರೂ ಪರಸ್ಪರ ಪ್ರೀತಿಸಿದರು. ನಂತರ ಮನೆಯಲ್ಲಿ ತಿಳಿಸಿದರು. ನಿಶ್ಚಿತಾರ್ಥವೂ ನಿಗದಿಯಾಯಿತು. ಆದರೆ ದೊಡ್ಡ ಆಘಾತವೊಂದು ಈಕೆಯ ಜೀವನದಲ್ಲಿ ಕಾದು ಕುಳಿತಿತ್ತು. ಇದ್ದಕ್ಕಿದ್ದ ಹಾಗೆ ನಡೆಯಲು ಕುಳಿತುಕೊಳ್ಳಲು ಕಷ್ಟವಾಗತೊಡಗಿತು. ನಂತರ ವೈದ್ಯರ ಬಳಿ ಹೋದಾಗ ಡಿಸ್ಕ್​ ಬಲ್ಜ್ (Disk Bulge) ಎಂದು ತಿಳಿಯಿತು. ಬೆನ್ನಿನ ಮೂಳೆಗೆ ಶೇ 70 ರಷ್ಡು ಸೋಂಕು ತಗಲಿತ್ತು. ಬದುಕುಳಿಯುವ ಸಾಧ್ಯತೆ ಶೇ 50 ಇತ್ತು. ಆಗ ಈಕೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವಾಯಿತು. ಈ ಮಧ್ಯೆ ನೀನು ಬೇರೆ ಮದುವೆ ಮಾಡಿಕೋ ಎಂದು ಆಕೆ ಅವನಿಗೆ ಹೇಳಿದೆ. ಆದರೆ… ಅಕ್ಷರಶಃ ಅವನು ಈಕೆಯ ಬೆನ್ನಿಗೆ ನಿಂತ.

ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈಕೆ ಮಜಾ ಟಾಕೀಸ್​, ಗಿಚ್ಚಿ ಗಿಲಿಗಿಲಿ ಮತ್ತು ಕಿರುತೆರೆಯಲ್ಲಿ ನಟಿಸಿದ ಪ್ರಿಯಾಂಕಾ ಕಾಮತ್.  ಆತ ಕುಂದಾಪುರ ಮೂಲದ ಎಂಜಿನಿಯರ್ ಅಮಿತ ನಾಯಕ. ಇವರಿಬ್ಬರೂ ಪ್ರೇಮಿಗಳು. ಇವರ ಪ್ರೇಮಕ್ಕೆ ಎರಡೂ ಕುಟುಂಬದವರ ಒಪ್ಪಿಗೆಯೂ ದೊರೆತು ಇನ್ನೇನು ನಿಶ್ಚಿತಾರ್ಥಕ್ಕೆ ತಯಾರಿ ಮಾಡಿಕೊಳ್ಳಬೇಕೆನ್ನುವ ಹೊತ್ತಿಗೆ ಪ್ರಿಯಾಂಕಾ ತೀವ್ರತರವಾದ ಬೆನ್ನುಮೂಳೆ ಸಮಸ್ಯೆಗೆ ಈಡಾದರು. ಬದುಕುವ ಭರವಸೆಯನ್ನೇ ಕಳೆದುಕೊಂಡರು. ಆದರೆ ಅಮಿತ…

ಪ್ರಿಯಾಂಕಾ ಆರೈಕೆಯಲ್ಲಿದ್ದಾಗಿನ ವಿಡಿಯೋ

ಆದರೆ ಅಮಿತ ಒಂದು ಕ್ಷಣವೂ ವಿಚಲಿತನಾಗದೆ ಪ್ರಿಯಾಂಕಾರನ್ನು ಮತ್ತಷ್ಟು ಕಾಳಜಿಯಿಂದ ನೋಡಿಕೊಳ್ಳತೊಡಗಿದರು. ಆಕೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರು. ರಾಡ್​ ಮತ್ತು ಸ್ಕ್ರ್ಯೂಗಳು ಬೆನ್ನನ್ನು ಒಳಸೇರಿದ ನಂತರ ತಾನು ಬದುಕಿಡೀ ಹಾಸಿಗೆಯ ಮೇಲೆಯೇ ಉಳಿಯುತ್ತೇನೇನೋ ಎಂದುಕೊಂಡರು ಆಕೆ. ಆದರೆ ಅಮಿತ ಇಡೀದಿನ ಪ್ರಿಯಾಂಕಾರ ಬಟ್ಟೆಯಿಂದ ಹಿಡಿದು ಡೈಪರ್​ ಬದಲಾಯಿಸುವವರೆಗೂ ಒಳಗೊಳ್ಳುತ್ತಿದ್ದರು. ಪ್ರಿಯಾಂಕಾ ಅಮ್ಮನಂತೂ ಮತ್ತೆ ಮಗುವಿನಂತೆ ನೋಡಿಕೊಂಡರು. 8 ತಿಂಗಳ ನಂತರ ಮನೆಮಂದಿಯೆಲ್ಲರ ಆರೈಕೆಯಿಂದ ಆಕೆ ಎದ್ದು ಓಡಾಡಲು ಕಲಿತರು. ಬದುಕು ಮತ್ತೆ ಮೊದಲಿನಂತಾಯಿತು. ನಿಶ್ಚಿತಾರ್ಥವೂ ನಡೆಯಿತು.

ಈ ವಿಡಿಯೋಗಳನ್ನು ನೋಡಿದ ಕೆಲ ನೆಟ್ಟಿಗರು, ಹೌದು ಇಂಥ ಕಥೆಗಳು ನಿಜಕ್ಕೂ ಜಗತ್ತಿನಲ್ಲಿ ಪ್ರೀತಿ ಜೀವಂತವಾಗಿದೆ ಎಂಬುದನ್ನು ಸಾಕ್ಷೀಕರಿಸುತ್ತವೆ ಎಂದಿದ್ದಾರೆ. ಅಕಸ್ಮಾತ್​ ಹುಡುಗಿಯ ಬದಲಾಗಿ ಹುಡುಗನಿಗೆ ಈ ಸ್ಥಿತಿ ಒದಗಿದ್ದರೆ ಏನಾಗುತ್ತಿತ್ತು? ಎಂದು ಕೆಲವರು ಕೇಳಿದ್ದಾರೆ. ಇದೆಲ್ಲಾ ಸರಿ, ಆದರೆ ಇದೆಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿದ್ದು ಯಾಕೆ? ಏಕೆಂದರೆ ಯಾರಾದರೂ ಬದುಕುಳಿಯುವ ಸಾಧ್ಯತೆ ಶೇ 50 ಇದೆ ಎಂದಾಗ ಯಾರಿಗಾದರೂ ಹೀಗೆ ರೆಕಾರ್ಡ್​ ಮಾಡಲು ಮನಸ್ಸಾಗುತ್ತದೆಯೇ? ಅಚ್ಚರಿಯಿಂದ ಕೇಳಿದ್ದಾರೆ. ಆಕೆ ನಟಿಯಾಗಿರುವುದರಿಂದ ರೆಕಾರ್ಡ್ ಮಾಡಿರುವ ಸಾಧ್ಯತೆ ಇದೆ ಎಂದು ಮತ್ತೆ ಕೆಲವರು ಬೆಂಬಲಿಸಿದ್ದಾರೆ.

ಈ ವಿಡಿಯೋಗಳನ್ನು ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. ಅನೇಕರು ಇವರಿಬ್ಬರ ಪ್ರೀತಿ ಚಿರಾಯುವಾಗಿರಲಿ ಎಂದು ಹಾರೈಸಿದ್ದಾರೆ. ಪ್ರೀತಿ ಗಟ್ಟಿಯಾಗಿದ್ದಲ್ಲಿ ಎಂಥ ಆರೋಗ್ಯ ಸಮಸ್ಯೆಯನ್ನೂ ಮೆಟ್ಟಿ ನಿಲ್ಲಬಹುದು ಎಂದಿದ್ದಾರೆ ಸಾವಿರಾರು ಜನ.

ಈ ವಿಷಯವಾಗಿ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:09 am, Mon, 14 August 23

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು