AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ಬೆರಳುಗಳಲ್ಲಿಯೇ ಪೆನ್ನು ಹಿಡಿದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿ; ಸ್ಪೂರ್ತಿ ತುಂಬುವ ಸುದ್ದಿ ಓದಲೇಬೇಕು

ಹುಟ್ಟಿದಾಗಿನಿಂದಲೂ ತನ್ನ ಕೈಗಳನ್ನು ಕಳೆದುಕೊಂಡ ವಿದ್ಯಾರ್ಥಿಗೆ ಓದು ಎಂದರೆ ಅಚ್ಚು- ಮೆಚ್ಚು. ದ್ವಿತೀಯ ಪರೀಕ್ಷೆಯಲ್ಲಿ ಕಾಲ್ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದು ಶೇ.70ರಷ್ಟು ಫಲಿತಾಂಶ ಪಡೆದಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾನೆ.

ಕಾಲ್ಬೆರಳುಗಳಲ್ಲಿಯೇ ಪೆನ್ನು ಹಿಡಿದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿ; ಸ್ಪೂರ್ತಿ ತುಂಬುವ ಸುದ್ದಿ ಓದಲೇಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Aug 02, 2021 | 12:00 PM

ಕಠಿಣ ಪರಿಶ್ರಮ ಮತ್ತು ಮನಸ್ಸಿನಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಹುಟ್ಟಿದಾಗಿನಿಂದಲೂ ತನ್ನ ಕೈಗಳನ್ನು ಕಳೆದುಕೊಂಡ ವಿದ್ಯಾರ್ಥಿಗೆ ಓದು ಎಂದರೆ ಅಚ್ಚು- ಮೆಚ್ಚು. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎಂಬ ಹುಮ್ಮಸ್ಸು. ಕಷ್ಟವಾದರೂ ಗುರಿಯನ್ನು ತಲುಪಲು ಇಷ್ಟಪಟ್ಟು ಕಾಲುಗಳ ಬೆರಳುಗಳಿಂದ ಬರೆಯುವ ಅಭ್ಯಾಸ ಮಾಡಿದ ಈ ವಿದ್ಯಾರ್ಥಿ. ದ್ವಿತೀಯ ಪರೀಕ್ಷೆಯಲ್ಲಿ ಕಾಲ್ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದು ಶೇ.70ರಷ್ಟು ಫಲಿತಾಂಶ ಪಡೆದಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಂತಿದ್ದಾನೆ.

ಲಕ್ನೋದ ತುಷಾರ್ ವಿಶ್ವಕರ್ಮ ತಮ್ಮ ಪಾದಗಳ ಸಹಾಯದಿಂದ ಪರೀಕ್ಷೆ ಬರೆದಿದ್ದಾರೆ. ಅವರ ಗುರಿಯನ್ನು ತಲುಪಲು ಸದಾ ಶ್ರಮಿಸುತ್ತಿದ್ದು ಒಳ್ಳೆಯ ಅಂಕ ಗಳಿಸುವ ಮೂಲಕ ಮೆಚ್ಚುಗೆಗೆ ಪಡೆದಿದ್ದಾನೆ.

ನಾನು ಹುಟ್ಟುವಾಗಲೇ ನನ್ನ ಕೈಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಇದು ನನ್ನ ನ್ಯೂನ್ಯತೆ ಎಂದು ನಾನು ಎಂದಿಗೂ ಭಾವಿಸಲಿಲ್ಲ. ನನ್ನ ಅಣ್ಣಂದಿರು ಶಾಲೆಗೆ ಹೋಗಲು ಪ್ರಾರಂಭಿಸಿದಾಗ, ನಾನೂ ಶಾಲೆಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹಠ ಮಾಡುತ್ತಿದ್ದೆ. ಆದರೆ ಬರೆಯುವ ಕಲೆಯನ್ನು ಹೇಗೆ ರೂಢಿಸಿಕೊಳ್ಳಲಿ ಎಂಬ ಚಿಂತೆ ಇತ್ತು. ಮನೆಯಲ್ಲಿ ಅಣ್ಣಂದಿರು ಅಭ್ಯಾಸ ಮಾಡುವಾಗಲೆಲ್ಲಾ ನನ್ನ ಕಾಲುಗಳ ಬೆರಳುಗಳ ಮೂಲಕ ಪೆನ್ನು ಹಿಡಿಯುವ ಅಭ್ಯಾಸ ಮಾಡಿಕೊಂಡೆ. ನನ್ನ ಎರಡು ಕಾಲುಗಳನ್ನೇ ಕೈಗಲಾಗಿ ಪರಿವರ್ತಿಸಿಕೊಂಡೆ ಎನ್ನುತ್ತಾರೆ ತುಷಾರ್.

ಪರೀಕ್ಷೆಯಲ್ಲಿ ಬರಹಗಾರರು ಸಲಹೆ ಅವಶ್ಯವೇ ಎಂದು ಕೇಳಿದಾಗ ತುಷಾರ್ ನಿರಾಕರಿಸಿದರು. ಆದರೆ ಸ್ವಲ್ಪ ಹೆಚ್ಚಿನ ಕಾಲಾವಕಾಶವನ್ನು ಕೇಳಿದರು. ಪರೀಕ್ಷೆಯಲ್ಲಿ ಕಾಲ್ಬೆರಳುಗಳಿಂದಲೇ ಉತ್ತರ ಬರೆದು ಶೇ. 70ರಷ್ಟು ಫಲಿತಾಂಶ ಪಡೆದಿದ್ದಾರೆ. ಕಠಿಣ ಪರಿಶ್ರಮಕ್ಕೆ ಒಳ್ಳೆಯ ಸಾಧನೆ ಎನ್ನುವ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ನನ್ನ ಉತ್ತರ ಪತ್ರಿಕೆ ಅಂದವಾಗಿ ಕಾಣಲು ನಾನು ಎರಡು ವಿಧದ ಪೆನ್ನಿನ ಬಳಕೆ ಮಾಡಿದ್ದೇನೆ. ನೀಲಿ ಹಾಗೂ ಕಪ್ಪು ಶಾಯಿಯ ಪೆನ್ನುನೊಂದಿಗೆ ಪರೀಕ್ಷೆ ಬರೆದಿದ್ದೇನೆ ಎಂದು ತುಷಾರ್ ಹೇಳಿದ್ದಾರೆ. ಸಣ್ಣ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ತುಷಾರ್ ತಂದೆ ಎಂದಿಗೂ ಮಗನನ್ನು ಬೆಂಬಲಿಸುತ್ತಾರೆ. ತುಷಾರ್, ಇಂಜಿನಿಯರ್ ಆಗುವ ಆಸೆ ಹೊಂದಿದ್ದು, ಸಾಧನೆಯತ್ತ ಸಾಗಲು ಪರಿಶ್ರಮ ಪಡುತ್ತಿದ್ದಾರೆ.

ನನ್ನನ್ನು ಶಾಲೆಗೆ ಸೇರಿಸಲು ತಂದೆ ರಾಕೇಶ್ ವಿಶ್ವಕರ್ಮ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಕೆಲೆಡೆ ನನ್ನ ಪರಿಸ್ಥಿತಿ ನೋಡಿ ಶಾಲೆಗೆ ಸೇರಿಸಿಕೊಳ್ಳಲು ತಯಾರಿರಲಿಲ್ಲ. ಬಳಿಕವೇ ನಾನು ಕಾಲ್ಬೆರಳುಗಳಿಂದ ಬರೆಯುವ ಅಭ್ಯಾಸ ಮಾಡಿದೆ ಆಗ ನನ್ನನ್ನು ಶಾಲೆಗೆ ಸೇರಿಸಿಕೊಂಡರು. ನನ್ನ ಕಾಲುಗಳ ಮೂಲಕ ಪುಸ್ತಕದ ಹಾಳೆಗಳನ್ನೂ ತಿರುಗಿಸಬಲ್ಲೆ ಎಂದು ತುಷಾರ್ ಹೇಳಿದ್ದಾರೆ. ಈ ಕುರಿತಂತೆ ಇಂಡಿಯಾ ಟು ಡೇ ಸುದ್ದಿ ಮಾಡಿದೆ.

ಪ್ರತಿನಿತ್ಯ ಸುಮಾರು 6 ಗಂಟೆಗಳವರೆಗೆ ಅಭ್ಯಾಸ ಮಾಡುತ್ತಿದ್ದೆ. ನನ್ನನ್ನು ಬೆಂಬಲಿಸಿದ ಶಿಕ್ಷಕರಿಗೆ ನನ್ನ ಧನ್ಯವಾದಗಳು. ಪರೀಕ್ಷೆ ಬರೆಯಲು ನೆಲದ ಮೇಲೆ ಅವಕಾಶ ಕಲ್ಪಿಸಿಕೊಟ್ಟರು. ನಾನು ಪಡೆದ ಅಂಕದ ಬಗ್ಗೆ ನನಗೆ ಖುಷಿ ಇದೆ. 10ನೇ ತರಗತಿಯಲ್ಲಿ ಶೇ.67ರಷ್ಟು ಫಲಿತಾಂಶ ಪಡೆದಿದ್ದೆ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಶೇ.70ರಷ್ಟು ಫಲಿತಾಂಶ ಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

72 ವರ್ಷ ವಯಸ್ಕರನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕೆ ಕೆಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋ ವೈರಲ್​

‘ನಾವೆಲ್ಲರೂ ಇವರಿಂದ ಕಲಿಯುವುದಿದೆ’ ಎಂದು ಸ್ಪೂರ್ತಿ ತುಂಬುವ ವಿಡಿಯೋ ಹಂಚಿಕೊಂಡ ಸಚಿನ್ ತೆಂಡೂಲ್ಕರ್

Published On - 11:57 am, Mon, 2 August 21

ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ