AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದೃಷ್ಟ ಅಂದ್ರೆ ಇದಪ್ಪಾ! ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಾಧೀಶನಾದ ಮಹಾರಾಷ್ಟ್ರದ ಮೀನುಗಾರ

ನೀರಿನಿಂದ ಬಲೆಯನ್ನು ಹೊರತೆಗೆಯುತ್ತಿದ್ದಂತೆಯೇ ಸುಮಾರು 150 ಘೋಲ್ ಮೀನುಗಳ ಗುಂಪು ಬಲೆಯಲ್ಲಿ ಸಿಕ್ಕಿವೆ. ಇದನ್ನು ನೋಡಿದ ಚಂದ್ರಕಾಂತ್ ಒಮ್ಮೆಲೆ ಆಶ್ಚರ್ಯಗೊಂಡಿದ್ದಾರೆ.

ಅದೃಷ್ಟ ಅಂದ್ರೆ ಇದಪ್ಪಾ! ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಾಧೀಶನಾದ ಮಹಾರಾಷ್ಟ್ರದ ಮೀನುಗಾರ
ಅದೃಷ್ಟ ಅಂದ್ರೆ ಇದಪ್ಪಾ! ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಾಧೀಶನಾದ ಮಹಾರಾಷ್ಟ್ರದ ಮೀನುಗಾರ
TV9 Web
| Updated By: shruti hegde|

Updated on:Sep 03, 2021 | 8:48 AM

Share

ಮಹಾರಾಷ್ಟ್ರದ ಮೀನುಗಾರನಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸಿದೆ. ಮೀನು ಹಿಡಿಯುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮೀನುಗಾರ ಚಂದ್ರಕಾಂತ್ ತಾರೆಗೆ ಸಮುದ್ರ ಸ್ವರ್ಣ ಎಂಬ ಖ್ಯಾತಿಗೆ ಹೆಸರಾಗಿರುವ ಘೋಲ್ ಮೀನುಗಳು ಸಿಕ್ಕಿವೆ. ಬೆಲೆಬಾಳುವ ಈ ಮೀನುಗಳ ಮಾರಾಟದಿಂದ ಚಂದ್ರಕಾಂತ್ ಕೋಟ್ಯಾಧೀಶನಾಗಿರುವ ಸುದ್ದಿ ವೈರಲ್ ಆಗಿದೆ.

ಚಂದ್ರಕಾಂತ್ ತಾರೆ ಪಾಲ್ಘರ್ ಜಿಲ್ಲೆಯ ಮುರ್ಬೆ ಗ್ರಾಮದ ಸಾಮಾನ್ಯ ಮೀನುಗಾರ. ಸಮುದ್ರಕ್ಕೆ ಬಲೆ ಬೀಸಿ ಮೀನು ಹಿಡಿಯುತ್ತ ತನ್ನ ಜೀವನವನ್ನು ಸಾಗಿಸುತ್ತಿದ್ದ. ಕೊವಿಡ್​19 ನಿರ್ಬಂಧಗಳಿಂದಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗದೇ ಇರುವುದರಿಂದ ಇಷ್ಟು ದಿನದ ಬಳಿಕ ಆಗಸ್ಟ್ 28ರಂದು ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದಾನೆ. ಬಲೆ ಬೀಸಿ ವಾಪಾಸ್ ಮನೆಗೆ ಹಿಂತಿರುಗಿದ್ದಾನೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಶಿಗಟ್ಟಲೇ ಘೋಲ್ ಮೀನುಗಳು ಬಲೆಯಲ್ಲಿ ಸಿಕ್ಕಿವೆ.

ಚಮದ್ರಕಾಂತ್​ ಸಮುದ್ರದಿಂದ ಬಲೆ ತೆಗೆಯುವಾಗ ತುಂಬಾ ಭಾರವೆನಿಸಿತು. ನೀರಿನಿಂದ ಬಲೆಯನ್ನು ಹೊರತೆಗೆಯುತ್ತಿದ್ದಂತೆಯೇ ಸುಮಾರು 150 ಘೋಲ್ ಮೀನುಗಳ ಗುಂಪು ಬಲೆಯಲ್ಲಿ ಸಿಕ್ಕಿವೆ. ಇದನ್ನು ನೋಡಿದ ಚಂದ್ರಕಾಂತ್ ಒಮ್ಮೆಲೆ ಆಶ್ಚರ್ಯಗೊಂಡಿದ್ದಾನೆ.

ಘೋಲ್ ಮೀನು ಕೇವಲ ರುಚಿ ಮಾತ್ರವಲ್ಲ. ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿದೇಶದಲ್ಲಿ ಇದಕ್ಕೆ ಭಯಂಕದ ದುಡ್ಡು. ಈ ಮೀನನ್ನು ಔಷಧಿಗೆ ಜತೆಗೆ ಬೆಲೆ ಬಾಳುವ ಉತ್ಪನ್ನ ತಯಾರಿಕೆಗಳಲ್ಲಿ ಬಳಸಲಾಗುತ್ತದೆ.

ಈ ಮೀನನ್ನು ಚಿನ್ನದ ಹೃದಯವಿರುವ ಮೀನು, ಸಮುದ್ರ ಸ್ವರ್ಣ ಎಂದೂ ಕರೆಯುವುದುಂಟು. ಘೋಲ್ ಮೀನುಗಳನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿದ ಮೀನುಗಾರನಿಗೆ ಸಂತೋಷ ತಡೆಯಲಾಗಲಿಲ್ಲ. ಆ ದೃಶ್ಯಗಳನ್ನು ಅವರಲ್ಲಿದ್ದ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಮೀನುಗಳನ್ನು ಹಿಡಿದು ಹರಾಜು ಮಾಡಲಾಯಿತು. ಒಟ್ಟು 1.33 ಕೋಟಿ ರೂಪಾಯಿ ಲಭಿಸಿದೆ.

ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಈ ಘೋಲ್ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಉತ್ತರ ಪ್ರದೇಶದ ಹಾಗೂ ಬಿಹಾರ್ ಮೂಲದ ಉದ್ಯಮಿಗಳು ಹರಾಜಿನಲ್ಲಿ ಈ ಮೀನುಗಳನ್ನು ಖರೀದಿಸಿದ್ದಾರೆ. ಚಂದ್ರಕಾಂತ್ ಹಿಡಿದ ಮೀನುಗಳು ಇದೀಗ ವಿದೇಶಕ್ಕೆ ರಫ್ತಾಗಲಿದೆ.

ಇದರಿಂದ ನನ್ನ ಅದೃಷ್ಟ ಬದಲಾಯಿತು. ಇಷ್ಟು ದಿನ ಸಮುದ್ರಕ್ಕೆ ಹೋಗಲು ನಿಷೇಧ ಹೇರಲಾಗಿತ್ತು. ಬಳಿಕ ಮೊದಲನೇ ಬಾರಿಗೆ ಆಗಸ್ಟ್ 28ರಂದು ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದೆ. ಮೊದಲನೇ ದಿನವೇ ಇಷ್ಟು ದೊಡ್ಡ ಮೊತ್ತ ನನಗೆ ಲಭಿಸಿದೆ. ನನ್ನ ಸಮಸ್ಯೆಗಳೆಲ್ಲ ಈ ಹಣದಿಂದ ಬಗೆಹರಿಯಲಿದೆ ಎಂದು ಮೀನುಗಾರ ಚಂದ್ರಕಾಂತ್ ತಾರೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಉಡುಪಿಯಲ್ಲಿ ಐದು ದಿನ ಆರೆಂಜ್ ಅಲರ್ಟ್; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಸೂಚನೆ

ನದಿಯಾಗಿ ಬದಲಾಗುತ್ತಿದೆ ರೈತರ ನೂರಾರು ಎಕರೆ ಕೃಷಿ ಭೂಮಿ; ಇಂದು ಇದ್ದ ಜಮೀನು ನಾಳೆ ಇರುವುದೇ ಅನುಮಾನ

Published On - 8:37 am, Fri, 3 September 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!