AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮೋಸಾದಲ್ಲಿ ಹಳದಿ ಪ್ಲಾಸ್ಟಿಕ್ ಚೂರು ಪತ್ತೆ, ಟ್ವೀಟ್​ಗೆ ಪ್ರತಿಕ್ರಿಯಿಸಿದ ಐಆರ್​ಸಿಟಿಸಿ

IRCTC : ‘ಎಂಥ ಶುಚಿಯಾದ ಆಹಾರವನ್ನು ವಿತರಿಸುತ್ತಿದ್ದೀರಿ ಐಆರ್​ಸಿಟಿಸಿಯಿಂದ’ ಪ್ರಯಾಣಿಕರ ವ್ಯಂಗ್ಯದ ಟ್ವೀಟ್​ಗೆ ಐಆರ್​ಸಿಟಿಸಿ ಪ್ರತಿಕ್ರಿಯಿಸಿ ವಿಷಾದ ವ್ಯಕ್ತಪಡಿಸಿದೆ. ನೆಟ್ಟಿಗರಂತೂ ಐಆರ್​ಸಿಟಿಸಿಯ ಕಳಪೆ ಸೇವೆಗಳ ಬಗ್ಗೆ ಕಿಡಿ ಕಾರಿದ್ದಾರೆ.

ಸಮೋಸಾದಲ್ಲಿ ಹಳದಿ ಪ್ಲಾಸ್ಟಿಕ್ ಚೂರು ಪತ್ತೆ, ಟ್ವೀಟ್​ಗೆ ಪ್ರತಿಕ್ರಿಯಿಸಿದ ಐಆರ್​ಸಿಟಿಸಿ
yellow plastic paper found inside samosa
TV9 Web
| Edited By: ಶ್ರೀದೇವಿ ಕಳಸದ|

Updated on:Oct 10, 2022 | 5:15 PM

Share

Viral : ರೈಲು ಪ್ರಯಾಣಿಕರು ಸಾಮಾನ್ಯವಾಗಿ ಭಾರತೀಯ ರೈಲುಗಳ  2 ಟಯೆರ್ ಮತ್ತು 3 ಟಯೆರ್ ಕಂಪಾರ್ಟ್​ಮೆಂಟುಗಳಲ್ಲಿ ಪೂರೈಸುವ ಆಹಾರದ ಗುಣಮಟ್ಟ, ಒದಗಿಸುವ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದು ಈಗ ಬಹಳಷ್ಟು ಸುಲಭವಾಗಿದೆ. ಟಿಕೆಟ್, ಆಹಾರ, ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುವ ಇಂಡಿಯನ್ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಗೆ ನೇರ ಟ್ಯಾಗ್ ಮಾಡಿ ಟ್ವೀಟ್ ಮಾಡಿಬಿಟ್ಟರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ (!?) ಬಾಂದ್ರಾಗೆ ಹೋಗುವ ಲಕ್ನೋ ವೀಕ್ಲಿ ಎಕ್ಸ್‌ಪ್ರೆಸ್‌ನಲ್ಲಿ ಇತ್ತೀಚೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಖರೀದಿಸಿದ ಸಮೋಸಾದಲ್ಲಿ ಹಳದಿ ಪ್ಲಾಸ್ಟಿಕ್​ ಚೂರು ಪತ್ತೆಯಾಗಿದೆ. ತಕ್ಷಣವೇ ಅವರು ಅದರ ಫೋಟೋ ತೆಗೆದು ಟ್ವಿಟರ್​ಗೆ ಅಪ್​ಲೋಡ್ ಮಾಡಿದ್ದಾರೆ. ಪ್ರತಿಯಾಗಿ ಐಆರ್​ಸಿಟಿಸಿ ಪ್ರತಿಕ್ರಿಯಿಸಿದೆ.

ಅಪ್​ಲೋಡ್ ಮಾಡಿರುವ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಆ ಹಳದಿ ತುಂಡು ಕೆಚಪ್​ ಅಥವಾ ಸಾಸ್​ನ ಪ್ಲಾಸ್ಟಿಕ್​ ಸ್ಯಾಚೆಟ್​ ತುಂಡಿನಂತೆ ಕಾಣುತ್ತದೆ. ‘ಲಕ್ನೋ ವೀಕ್ಲಿ ಎಕ್ಸ್​​ಪ್ರೆಸ್. ರೈಲು ಸಂಖ್ಯೆ 20921, ಬಾಂದ್ರಾದಿಂದ  ಅಕ್ಟೋಬರ್ 8, 2022ರಂದು ಪ್ರಯಾಣ ಆರಂಭಿಸಿದೆ. ಮರುದಿನ ಅಂದರೆ ಅಕ್ಟೋಬರ್ 9ರಂದು ಬೆಳಗ್ಗೆ 10.15ಕ್ಕೆ ಐಆರ್​ಸಿಟಿಸಿಯಿಂದ ಸಮೋಸಾ ಖರೀದಿಸಿದೆ. ಎಂಥ ಶುಚಿಯಾದ ತಿಂಡಿಯನ್ನು ವಿತರಿಸುತ್ತಿದ್ದೀರಿ ಐಆರ್​ಸಿಟಿಯಿಂದ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ ಈ ಪ್ರಯಾಣಿಕರು. ಈ ಪೋಸ್ಟ್​ ಅನ್ನು ಫಾಲೋಅಪ್​ ಮಾಡುತ್ತಿರುವ ಟ್ವಿಟರ್ ಖಾತೆದಾರರು ಐಆರ್​ಸಿಟಿಸಿಯನ್ನು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನು ಗಮನಿಸಿದ ಐಆರ್​ಸಿಟಿಸಿ, ‘ಸರ್, ಅನಾನುಕೂಲತೆಯಿಂದ ಹೀಗಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಪಿಎನ್​ಆರ್​ ಮತ್ತು ಮೊಬೈಲ್​ ನಂಬರನ್ನು ಮೆಸೇಜ್​ ಮಾಡಿ’ ಎಂದು ಪ್ರತಿಕ್ರಿಯಿಸಿದೆ.

ಭಾರತೀಯ ರೈಲುಗಳಲ್ಲಿ ಟಿಕೆಟ್​ ವ್ಯವಸ್ಥೆ, ಆಹಾರ ಪೂರೈಕೆ ಮತ್ತು ಇತರೇ ಸೇವೆಗಳ ಗುಣಮಟ್ಟದಲ್ಲಿ ಕುಸಿತ ಉಂಟಾಗುತ್ತಿರುವ ಬಗ್ಗೆ ನೆಟ್ಟಿಗರು ಈ ನೆಪದಲ್ಲಿ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಟಿಕೇಟ್​ ಕನ್ಫರ್ಮೇಷನ್​ ನಿಂದ ಹಿಡಿದು ಎಲ್ಲಾ ಸೇವೆಗಳೂ ದಿನದಿಂದ ದಿನಕ್ಕೆ ಹದಗೆಡುತ್ತಿವೆ. ಮುಖ್ಯವಾಗಿ ಎಲ್ಲದಕ್ಕೂ ಶುಲ್ಕ ಹೇರುತ್ತಿದ್ದಾರೆ. ಬಡವರ ಪರಿಸ್ಥಿತಿ ಸರ್ಕಾರಕ್ಕೆ ಅರ್ಥವಾಗುವುದಿಲ್ಲ. ಭಾರತವನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ಸುಲಿಗೆ ನಡೆಯುತ್ತಿದೆ’ ಎಂದಿದ್ದಾರೆ ಒಬ್ಬ ಖಾತೆದಾರರು.

‘ಇದೆಲ್ಲವೂ ತೋರಿಕೆಯ ಪ್ರದರ್ಶನ ಮತ್ತು ವ್ಯಾಪಾರ. ನಿಜಕ್ಕೂ ಐಆರ್​ಸಿಟಿಸಿಯ ಸೇವೆಗಳ ಗುಣಮಟ್ಟ ಕುಸಿದು ಹೋಗಿದೆ. ಪ್ರಯಾಣಿಕರು ಮಾತ್ರ ಈ ನೋವನ್ನು ಅನುಭವಿಸುತ್ತಲೇ ಇದ್ದಾರೆ’ ಎಂದು ಮತ್ತೊಬ್ಬ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:05 pm, Mon, 10 October 22

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​