Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕಾಂಡೋಮ್ ಮಾರಿ ಭರ್ಜರಿ ಲಾಭ ಗಳಿಸಿದ ಬ್ರದರ್ಸ್​​​​​

ಕಾಂಡೋಮ್‌ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಡ್ಯೂರೆಕ್ಸ್, ರೇಮಂಡ್ ಕನ್ಸ್ಯೂಮರ್ ಮತ್ತು ಸ್ಕೋರ್‌ನಂತಹ ಅನೇಕ ಕಂಪನಿಗಳಿವೆ. ಆದಾಗ್ಯೂ, ಈ ಎಲ್ಲದರ ನಡುವೆ,ಮ್ಯಾನ್‌ಫೋರ್ಸ್ ಕಂಪೆನಿ ಕಾಂಡೋಮ್‌ಗಳ ಮಾರಾಟದಲ್ಲಿ ಅತಿದೊಡ್ಡ ಪಾಲನ್ನು ಪಡೆದುಕೊಂಡಿದೆ.

Viral News: ಕಾಂಡೋಮ್ ಮಾರಿ ಭರ್ಜರಿ ಲಾಭ ಗಳಿಸಿದ ಬ್ರದರ್ಸ್​​​​​
Mankind
Follow us
ಅಕ್ಷತಾ ವರ್ಕಾಡಿ
|

Updated on:Mar 28, 2024 | 11:32 AM

ಸುರಕ್ಷಿತ ಲೈಂಗಿಕತೆ, ಲೈಂಗಿಕವಾಗಿ ಹರಡುವ ಸೋಂಕುಗಳ ಅಪಾಯ ಕಡಿಮೆ ಮಾಡಲು ಮತ್ತು ಜನನ ನಿಯಂತ್ರಣಕ್ಕಾಗಿ ಇಂದು ಬಹುತೇಕರು ಕಾಂಡೋಮ್ ಬಳಕೆ ಮಾಡುತ್ತಾರೆ. ಭಾರತದಲ್ಲಿ ರಿಕೆಟ್ ಬೆಂಗ್ಕಿಸ್ಸರ್ (ಡ್ಯೂರೆಕ್ಸ್), ರೇಮಂಡ್ ಕನ್ಸ್ಯೂಮರ್ ಮತ್ತು ಸ್ಕೋರ್‌ನಂತಹ ಅನೇಕ ಕಾಂಡೋಮ್ ಮಾರಾಟ ಕಂಪನಿಗಳಿವೆ. ಆದಾಗ್ಯೂ, ಈ ಎಲ್ಲದರ ನಡುವೆ, ಕಾಂಡೋಮ್‌ಗಳ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿರುವ ಕಂಪನಿ ಮ್ಯಾನ್‌ಫೋರ್ಸ್, ಈ ಕಂಪೆನಿ ಮಾರುಕಟ್ಟೆಯಲ್ಲಿ ಶೇ 32ರಷ್ಟು ಪಾಲು ಪಡೆದುಕೊಂಡಿದೆ.

ರಮೇಶ್ ಜುನೇಜಾ ಮತ್ತು ರಾಜೇಶ್ ಜುನೇಜಾ 1995 ರಲ್ಲಿ ಮ್ಯಾನ್‌ಕೈಂಡ್ ಕಂಪೆನಿಯನ್ನು ಪ್ರಾರಂಭಿಸಿದರು. ಇಂದು ರಮೇಶ್ ಕಂಪನಿಯ ಅಧ್ಯಕ್ಷರಾಗಿದ್ದು, ರಾಜೇಶ್ ಎಂಡಿಯಾಗಿದ್ದಾರೆ. ಕಾಂಡೋಮ್‌ಗಳ ಹೊರತಾಗಿ, ಮ್ಯಾನ್‌ಕೈಂಡ್ ಅನೇಕ ರೀತಿಯ ಉತ್ಪನ್ನಗಳು ಮತ್ತು ಔಷಧಿಗಳನ್ನು ಸಹ ತಯಾರಿಸುತ್ತದೆ. ಇವುಗಳಲ್ಲಿ Prega News, Unwanted-72, Gas-O Fast ಮತ್ತು Acnestar Gel ನಂತಹ ಉತ್ಪನ್ನಗಳು ಸೇರಿವೆ.

ಇದನ್ನೂ ಓದಿ: ಕೋಳಿ, ಹಂದಿ ಇತ್ಯಾದಿ ಮಾಂಸಕ್ಕಿಂತ ಹೆಬ್ಬಾವಿನ ಮಾಂಸ ಬೆಸ್ಟ್; ಅಧ್ಯಯನ 

8749 ಕೋಟಿ ರೂ ಆದಾಯ:

ಮ್ಯಾನ್‌ಕೈಂಡ್ ಕಂಪೆನಿ ಭಾರತವನ್ನು ಹೊರತುಪಡಿಸಿ 34 ದೇಶಗಳಲ್ಲಿ ತನ್ನ ಉತ್ಪನ್ನಗಳ ವ್ಯಾಪಾರವನ್ನು ಮಾಡುತ್ತಿದೆ. 2023 ರ ಹಣಕಾಸು ವರ್ಷದಲ್ಲಿ, ಮ್ಯಾನ್‌ಕೈಂಡ್‌ನ ಆದಾಯವು 8749 ಕೋಟಿ ರೂಪಾಯಿಗಳಾಗಿದ್ದರೆ, ಕಂಪನಿಯು 1310 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ.

ಮ್ಯಾನ್‌ಫೋರ್ಸ್ ಕಾಂಡೋಮ್‌ಗಳು ವಿಭಿನ್ನ ಗಾತ್ರಗಳು ಮತ್ತು ಫ್ಲೇವರ್​​ಗಳಲ್ಲಿ ಲಭ್ಯವಿದೆ. ಇದರಲ್ಲಿ ಕಾಂಡೋಮ್ ಬೆಲೆ 8 ರಿಂದ 30 ರೂಗಳ ವರೆಗೆ ಇದೆ. ಇದು ತನ್ನ ಉತ್ತಮ ಗುಣಮಟ್ಟದಿಂದಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಮ್ಯಾನ್‌ಕೈಂಡ್ ದೇಶದಲ್ಲಿ 25 ಕಾರ್ಖಾನೆಗಳು ಮತ್ತು 6 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:29 am, Thu, 28 March 24

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್