AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​

ವ್ಯಕ್ತಿಯೊಬ್ಬನನ್ನು ಬುಲೆಟ್​ನಿಂದ ಇ-ಸಿಗರೇಟ್ ರಕ್ಷಿಸುವ ಕುರಿತು ವರದಿಯಾಗಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು ಕೊನೆಗೆ ಇ-ಸಿಗರೇಟ್​ನಿಂದ ಬದುಕುಳಿದಿದ್ದಾರೆ.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​
ಇ-ಸಿಗರೇಟ್​
ನಯನಾ ರಾಜೀವ್
|

Updated on: Sep 18, 2024 | 9:37 AM

Share

ಸಿಗರೇಟ್​ ಎಂದಾದರೂ ಮನುಷ್ಯನ ಜೀವ ಕಾಪಾಡಬಲ್ಲದೇ, ಧೂಮಪಾನದಿಂದ ಮನುಷ್ಯನ ಶ್ವಾಸಕೋಶಕ್ಕೆ ಪೆಟ್ಟಾಗುವುದೇ ವಿನಃ ಒಳ್ಳೆಯದಂತೂ ಇಲ್ಲ. ದೀವಾರ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಎದೆಗೆ ಗುಂಡು ಹಾರಿಸಿದರೂ ಜೇಬಿನಲ್ಲಿದ್ದ ಬ್ಯಾಡ್ಜ್​ ಅವರ ಜೀವ ಉಳಿಸಿದಂತೆ ನಿಜ ಜೀವನದಲ್ಲೂ ಅಂಥದ್ದೇ ಘಟನೆ ನಡೆದಿದೆ.

ಕೆಲವೊಮ್ಮೆ ನಾಣ್ಯಗಳು, ಕೆಲವೊಮ್ಮೆ ಐಫೋನ್ ವ್ಯಕ್ತಿಯ ಜೀವ ಉಳಿಸಿದಂತೆ ಈ ಬಾರಿ ಇ-ಸಿಗರೇಟ್​ ವ್ಯಕ್ತಿಯ ಜೀವ ಕಾಪಾಡಿದೆ. ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು.

ಹೇಗೋ ವ್ಯಕ್ತಿ ಕಾರನ್ನು ಓಡಿಸಿಕೊಂಡು ಬಂದು, ಸಹಾಯಕ್ಕಾಗಿ ಕಾರ್​ವಾಶ್​ ಮಾಡಿಸುವ ಸ್ಥಳದಲ್ಲಿ ನಿಲ್ಲಿಸಿದಾಗ ಬುಲೆಟ್​ ತನ್ನ ಕಾರಿನ ಬಾಗಿಲು ತೂರಿಕೊಂಡು ಒಳಗೆ ಬಂದಿತ್ತು. ಅದು ಬಂದು ಇ-ಸಿಗರೇಟ್​ ಡಬ್ಬಿಗೆ ತಗುಲಿತ್ತು.

ಮತ್ತಷ್ಟು ಓದಿ: ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್​ ಸಾವು

ಒಂದೊಮ್ಮೆ ಆ ಸಿಗರೇಟ್​ ಡಬ್ಬಿ ಮತ್ತೊಂದು ಪಾಕೆಟ್​ನಲ್ಲಿದ್ದರೆ ಅದು ಅವರ ಕಾಲಿಗೆ ಬೀಳುತ್ತಿತ್ತು. ಅದನ್ನು ಪೊಲೀಸರಿಗೆ ಕೊಟ್ಟಾಗ ಅವರೂ ಕೂಡ ಆಶ್ಚರ್ಯಗೊಂಡರು. ಪೊಲೀಸರು ಸಾಧನವನ್ನು ಮುರಿದು ನೋಡಿದಾಗ ಗುಂಡು ಇನ್ನೂ ಅದರೊಳಗಿತ್ತು.

ಸಿನೋಲಾ ಮೆಕ್ಸಿಕೋದ ಡ್ರಗ್ ಉದ್ಯಮವನ್ನು ನಡೆಸುತ್ತಿರುವ ಅತ್ಯಂತ ಹಿಂಸಾತ್ಮಕ ಡ್ರಗ್ ಕಾರ್ಟೆಲ್‌ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ವಿಶೇಷ ಪಡೆಗಳ ಸೈನಿಕರು, ವಿಮಾನಗಳು ಮತ್ತು ಭಾರೀ ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದರೂ, ಸ್ಥಳೀಯರಲ್ಲಿ ಭಯ ಮುಂದುವರೆದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ