AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಷನ್​ ಶೋ ವೇಳೆ ಪ್ರೇಕ್ಷಕನಿಗೆ ಕೋಟ್​ನಿಂದ ಹೊಡೆದ ರೂಪದರ್ಶಿ; ವಿಡಿಯೋ ವೈರಲ್​

ಇಲ್ಲೊಂದು ರೂಪದರ್ಶಿ ಸ್ಟೇಜ್​ ಮೇಲೆ ನಡೆಯುವಾಗ ತನ್ನ ಕೋಟ್​ನಿಂದ ನೆರೆದಿದ್ದ ವ್ಯಕ್ತಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫ್ಯಾಷನ್​ ಶೋ ವೇಳೆ ಪ್ರೇಕ್ಷಕನಿಗೆ ಕೋಟ್​ನಿಂದ ಹೊಡೆದ ರೂಪದರ್ಶಿ; ವಿಡಿಯೋ ವೈರಲ್​
ರೂಪದರ್ಶಿ
TV9 Web
| Edited By: |

Updated on:Feb 01, 2022 | 9:54 AM

Share

ರೂಪದರ್ಶಿಗಳು (Model) ಸ್ಟೇಜ್​ ಮೇಲೆ ನಡೆದುಕೊಂಡು ಹೋಗುವಾಗ ನೆರೆದವರ ಗಮನ ಅವರ ಮೇಲೆಯೇ ಇರುತ್ತದೆ. ಹೀಗಿದ್ದಾಗ ಅವರ ವರ್ತನೆ, ಹಾವ, ಭಾವ ಎಲ್ಲವೂ ಪ್ರಕ್ಷಕರನ್ನು ಮನರಂಜಿಸುತ್ತವೆ. ಇಲ್ಲೊಂದು ರೂಪದರ್ಶಿ ಪ್ಯಾಷನ್​ ಶೋ (Fashion Show) ವೇಳೆ ಸ್ಟೇಜ್​ ಮೇಲೆ ನಡೆಯುವಾಗ ತನ್ನ ಕೋಟ್​ನಿಂದ ನೆರೆದಿದ್ದ ವ್ಯಕ್ತಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಈ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ.  ಡಿಸೈನರ್​ ಕ್ರಿಶ್ಚಿಯನ್ ಕೋವನ್ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೊದಲು ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದ  ವಿಡಿಯೋವನ್ನು ಕ್ರಿಶ್ಚಿಯನ್ ಕೋವನ್ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ 2 ಮಿಲಿಯನ್​ ವೀಕ್ಷಣೆ ಪಡೆದಿದೆ. ಕ್ರಿಶ್ಚಿಯನ್ ಕೋವನ್ ಅವರ Spring 2022 Ready-to-Wear runway ಎನ್ನುವ ಶೋದಲ್ಲಿ ಈ ಘಟನೆ ನಡೆದಿದ್ದು ಜಗತ್ತಿನಾದ್ಯಂತ ವಿಡಿಯೋ ವೈರಲ್​ ಆಗಿದೆ.

View this post on Instagram

A post shared by CHRISTIAN COWAN (@christiancowan)

ವಿಡಿಯೋದಲ್ಲಿ ನೇರಳೆ ಬಣ್ಣದ ಕ್ರಾಫ್​ಟಾಪ್ ಧರಿಸಿದ್ದ ರೂಪದರ್ಶಿಯೊಬ್ಬಳು ನಡೆದುಕೊಂಡು ಬರುತ್ತಿದ್ದಳು. ನಂತರ ತಕ್ಷಣ ಹಿಂದೆ ಹೋಗಿ ತನ್ನ ಕೈಲ್ಲಿದ್ದ ಕೋಟ್​ನಲ್ಲಿ ಸ್ಟೇಜಿನ ಕೆಳಗೆ ನಿಂತ ವ್ಯಕ್ತಿಗೆ ಹೊಡೆಯುತ್ತಾಳೆ. ನಂತರ ತಿರುಗಿ ಮತ್ತೆ ಮುಂದೆ ಕ್ಯಾಟ್​ಮಾಡುತ್ತಾ ನಡೆದುಕೊಂಡು ಬರುತ್ತಾಳೆ. ಇದರ ವಿಡಿಯೋ ನೋಡಿ ನೆಟ್ಟಿಗರು ಇದೊಂದು ಹೊಸ ಟ್ರೆಂಡ್​ ಸೃಷ್ಟಿ ಮಾಡಲಿದೆ ಎಂದಿದ್ದಾರೆ. ವಿಡಿಯೋದಲ್ಲಿರುವ ರೂಪದರ್ಶಿಯನ್ನು ಥಿಯೋಡೋರಾ ಕ್ವಿನ್ಲಿವಾನ್ ಎಂದು ಗುರುತಿಸಲಾಗಿದೆ.  ಟಿಕ್​ಟಾಕ್​ನಲ್ಲಿ ವೈರಲ್​ ಆದ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್​ನಲ್ಲಿಯೂ ಟ್ರೆಂಡ್​ ಸೆಟ್​ ಮಾಡಿದೆ.

ಇದನ್ನೂ ಓದಿ:

ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ವಿಶ್ವ ಗಿನ್ನಿಸ್ ದಾಖಲೆ ನಿರ್ಮಿಸಿದ ಒಡಿಶಾದ 28ರ ಯುವಕ

Published On - 9:52 am, Tue, 1 February 22

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಸರ್, ಈ ಬಸ್ ದುಬೈಗೆ ಹೋಗುತ್ತಾ?
ಸರ್, ಈ ಬಸ್ ದುಬೈಗೆ ಹೋಗುತ್ತಾ?