AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ನೊಬೆಲ್​ ಬಂದಿದೆ!’ ಸಹೋದ್ಯೋಗಿಗಳು ತಿಳಿಸಿದಾಗ ಮಾರ್ಟೆನ್​ ಮೆಲ್ಡಾಲ್​ರ ಪ್ರತಿಕ್ರಿಯೆ ಹೇಗಿತ್ತು?

Nobel Prize : ಪ್ರಶಸ್ತಿ ಘೋಷಣೆಯಾದ ದಿನ ವಿಜ್ಞಾನಿ ಮಾರ್ಟೆನ್​ ಮೆಲ್ಡಾಲ್ ಅವರ ಸಹೋದ್ಯೋಗಿಗಳೆಲ್ಲ ಅಭಿನಂದಿಸಲು ಧಾವಿಸಿ ಬಂದಾಗ, ವರ್ಣಿಸಲಸಾಧ್ಯವಾದ ಪ್ರತಿಕ್ರಿಯೆ ಮಾರ್ಟೆನ್​ ಅವರಿಂದ ಹೊಮ್ಮಿತ್ತು. ನೋಡಿ ವಿಡಿಯೋ.

‘ನಿಮಗೆ ನೊಬೆಲ್​ ಬಂದಿದೆ!’ ಸಹೋದ್ಯೋಗಿಗಳು ತಿಳಿಸಿದಾಗ ಮಾರ್ಟೆನ್​ ಮೆಲ್ಡಾಲ್​ರ ಪ್ರತಿಕ್ರಿಯೆ ಹೇಗಿತ್ತು?
Nobel Prize winner Morten Meldal
TV9 Web
| Edited By: |

Updated on: Oct 06, 2022 | 5:41 PM

Share

Trending : ವಿಜ್ಞಾನಿ ಮಾರ್ಟೆನ್ ಮೆಲ್ಡಾಲ್ ಅವರು ರಸಾಯನಶಾಸ್ತ್ರದಲ್ಲಿ 2022ನೇ ಸಾಲಿನ ನೊಬೆಲ್ ಪುರಸ್ಕೃತರು. ಆ ದಿನ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅವರ ಸಹೋದ್ಯೋಗಿಗಳು ಅವರಿದ್ದಲ್ಲಿ ಧಾವಿಸಿ ವಿಷಯವನ್ನು ತಿಳಿಸಿದರು. ಆಗ ಮಾರ್ಟೆನ್  ಪ್ರತಿಕ್ರಿಯಿಸಿದ ಅಪೂರ್ವ ಕ್ಷಣಗಳ ವಿಡಿಯೋ ಈಗ ವೈರಲ್ ಆಗುತ್ತಿದೆ. ಮಾತು ಸೋತು ಮೌನ ಮತ್ತು ಖುಷಿ ಅಲೆಅಲೆಯಾಗಿ ಹರಡಿದ ಆ ಸಮಯ ಮಾತ್ರ ದಿವ್ಯ. ನೆಟ್ಟಿಗರು ಈ ವಿಡಿಯೋ ನೋಡಿ ಮೂಕವಿಸ್ಮಿತರಾಗಿದ್ದಾರೆ. ನೊಬೆಲ್ ಎಂಬ ಅತ್ಯುನ್ನತ ಪ್ರಶಸ್ತಿ ಮುಡಿಗೇರುವುದೆಂದರೆ ಸಾಮಾನ್ಯವೆ? ಇದರ ಹಿಂದಿನ ಶ್ರಮವನ್ನು ಊಹಿಸಲೂ ಅಸಾಧ್ಯ. ಹೀಗೆ ಸಾಧನೆಯು ತುತ್ತತುದಿ ತಲುಪಿದಾಗ ಸುತ್ತಮುತ್ತಲಿನ ಜನ ಹೆಮ್ಮೆಪಟ್ಟಾಗಲೇ ಅದು ಪ್ರಶಸ್ತಿಯ ಮತ್ತು ಪುರಸ್ಕೃತರ ಸಾರ್ಥಕತೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by NowThis (@nowthisnews)

ಡ್ಯಾನಿಶ್ ರಸಾಯನಶಾಸ್ತ್ರಜ್ಞ ಮಾರ್ಟೆನ್ ಮೆಲ್ಡಾಲ್ ಅವರನ್ನು ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ಅಭಿನಂದಿಸುವತ್ತಿರುವ ಈ ವಿಡಿಯೋ ಚಿತ್ರೀಕರಿಸಿದ್ದು ಅಕ್ಟೋಬರ್ 5ರಂದು ಡೆನ್ಮಾರ್ಕಿನ ಕೋಪನ್​ಹೆಗನ್​ನಲ್ಲಿ. ರಸಾಯನಶಾಸ್ತ್ರದಲ್ಲಿ ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಅವರಿಗೆ ಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿ ಅಭಿವೃದ್ಧಿಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಅಪರೂಪದ ವಿಡಿಯೋ ನೋಡಿದ ನೆಟ್ಟಿಗರಂತೂ ಕರಗಿಹೋಗಿದ್ದಾರೆ. ‘ಎಂಥ ಅದ್ಭುತ ಇದು. ವೈದ್ಯಕೀಯ ಸಂಶೋಧನೆಯೊಂದಿಗೆ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಎಲ್ಲರಿಗೂ ಕೃತಜ್ಞತೆ’ ಎಂದಿದ್ದಾರೆ ನೆಟ್ಟಿಗರೊಬ್ಬರು.

ಟ್ರೆಂಡಿಂಗ್ ನ್ಯೂಸ್ ಓದಲು ಕ್ಲಿಕ್ ಮಾಡಿ

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?