AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ವರ್ಷ ಬೆಂಗಳೂರಲ್ಲಿದ್ದು ಕನ್ನಡ ಬರಲ್ವಾ? ದಿಲ್ಲಿಗೆ ಬನ್ನಿ ಎಂದ ಕಾರ್ಸ್24 ಸಿಇಒ; ಆನ್​ಲೈನ್​ನಲ್ಲಿ ಸಖತ್ ಚರ್ಚೆ

Cars24 CEO Vikram Chopra: ಯೂಸ್ಡ್ ಕಾರುಗಳ ಆನ್​ಲೈನ್ ಪ್ಲಾಟ್​ಫಾರ್ಮ್ ಆದ ಕಾರ್ಸ್24 ಕಂಪನಿಯ ಸಿಇಒ ವಿಕ್ರಮ್ ಚೋಪ್ರಾ ಅವರು ಬೆಂಗಳೂರು ವರ್ಸಸ್ ದಿಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಬೆಂಗಳೂರಿಗಿಂತ ದಿಲ್ಲಿ ಚಂದ ಅನ್ನೋದು ಸತ್ಯದ ಸಂಗತಿ ಎಂದಿದ್ದಾರೆ. ಅವರ ಈ ಪೋಸ್ಟ್​ಗೆ ಆನ್​ಲೈನ್​ನಲ್ಲಿ ಪರ ವಿರೋಧ ಚರ್ಚೆಗಳು ಸಾಕಷ್ಟಾಗುತ್ತಿವೆ. ಅವರ ಅಭಿಪ್ರಾಯ ವಿರೋಧಿಸಿ ಹಲವು ಕಾಮೆಂಟಿಸಿದ್ದಾರೆ.

ಇಷ್ಟು ವರ್ಷ ಬೆಂಗಳೂರಲ್ಲಿದ್ದು ಕನ್ನಡ ಬರಲ್ವಾ? ದಿಲ್ಲಿಗೆ ಬನ್ನಿ ಎಂದ ಕಾರ್ಸ್24 ಸಿಇಒ; ಆನ್​ಲೈನ್​ನಲ್ಲಿ ಸಖತ್ ಚರ್ಚೆ
ವಿಕ್ರಮ ಚೋಪ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2024 | 3:56 PM

Share

ನವದೆಹಲಿ, ಡಿಸೆಂಬರ್ 20: ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಆನ್​ಲೈನ್ ಪ್ಲಾಟ್​ಫಾರ್ಮ್ ಆದ ಕಾರ್ಸ್24 ಕಂಪನಿಯ ಸಿಇಒ ವಿಕ್ರಮ್ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಹಾಕಿದ ಪೋಸ್ಟ್​ವೊಂದು ವೈರಲ್ ಆಗುತ್ತಿದೆ. ಬೆಂಗಳೂರಿಗಿಂತ ದಿಲ್ಲಿ ಚಂದ ಅನ್ನೋದು ಸತ್ಯ ಎಂದು ಹೇಳಿ ದಿಲ್ಲ ವರ್ಸಸ್ ಬೆಂಗಳೂರು; ಹಾಗೂ ಹಿಂದಿ ವರ್ಸಸ್ ಕನ್ನಡದ ಡಿಬೇಟ್​ಗೆ ಮತ್ತೆ ನಾಂದಿ ಹಾಡಿದ್ದಾರೆ.

‘ದೆಹಲಿ ಎನ್​ಸಿಆರ್ ಉತ್ತಮ ಎಂದು ನಾವು ಹೇಳುತ್ತಿಲ್ಲ. ನಿಜವಾಗಿಯೂ ಅದು ಉತ್ತಮವೇ,’ ಎಂದು ವಿಕ್ರಮ್ ಚೋಪ್ರಾ ತಮ್ಮ ಪೋಸ್ಟ್​ನ ಆರಂಭದಲ್ಲೇ ತಿಳಿಸಿ ಕಿಡಿ ಹಚ್ಚಿದ್ದಾರೆ. ನೀವು ದಿಲ್ಲಿಗೆ ಮರಳಲು ಬಯಸುವುದಾದರೆ ‘ದೆಹಲಿ ಮೇರಿ ಜಾನ್’ ಎನ್ನುವ ವಿಷಯದೊಂದಿಗೆ ನನಗೆ ಬರೆಯಿರಿ ಎಂದು ಅವರು ತಮ್ಮ ಇಮೇಲ್ ವಿಳಾಸ ನೀಡಿದ್ಧಾರೆ ಈ ಪೋಸ್ಟ್​ನಲ್ಲಿ ಅವರು ಗ್ರಾಫಿಕ್ಸ್​ವೊಂದನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಗಂಡನನ್ನು ಬದುಕುಳಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಪತ್ನಿ; ಫಲಿಸಲಿಲ್ಲ ಪ್ರಾರ್ಥನೆ

ಬೆಂಗಳೂರಲ್ಲಿದ್ದೂ ಕನ್ನಡ ಬರುತ್ತಿಲ್ಲವಾ?

‘ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದು ಇನ್ನೂ ಕೂಡ ಕನ್ನಡ ಮಾತನಾಡಲು ಬರುವುದಿಲ್ಲವಾ? ಪರವಾಗಿಲ್ಲ, ದಿಲ್ಲಿಗೆ ಬನ್ನಿರಿ. ಮನೆಯ ಸಮೀಪ ಉಳಿಯಲು ಬಯಸುವ ಎಂಜಿನಿಯರುಗಳು ನಮಗೆ ಬೇಕಾಗಿದ್ದಾರೆ’ ಎಂದು ಕಾರ್ಸ್24 ಕಂಪನಿಯ ಸಿಇಒ ತಮ್ಮ ಪೋಸ್ಟ್​ಗೆ ಲಗತ್ತಿಸಿರುವ ಗ್ರಾಫಿಕ್ ಫೋಟೋದಲ್ಲಿ ಬರೆಯಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್​ನಿಂದ ಸಾಕಷ್ಟು ಪರ ವಿರೋಧ ಚರ್ಚೆಗಳಾಗಿವೆ. ದೆಹಲಿ ಚೆನ್ನಾಗಿದೆ. ಆದರೆ, ಬೆಂಗಳೂರಿಗಿಂತ ಉತ್ತಮ ಎಂದು ಕರೆಯುವುದಾದರೆ ಕ್ರೈಮ್ ಇತ್ಯಾದಿ ವಾಸ್ತವ ಸಂಗತಿಯನ್ನೂ ಪರಿಗಣಿಸಿ ಎಂದು ಕೆಲವರು ಹೇಳೀದ್ದಾರೆ.

ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ, ಕೇವಲ ಐದು ತಾಸು 87 ಕೋಟಿಯ ಒಡೆಯನಾಗಿದ್ದ 9ನೇ ತರಗತಿ ಬಾಲಕ

ಈ ಪೋಸ್ಟ್ ಸಮಂಜಸ ಎನಿಸುತ್ತಿಲ್ಲ. ಕಂಪನಿಯ ಗುಣಗಳನ್ನು ಇದಕ್ಕಿಂತ ಉತ್ತಮ ರೀತಿಯಲ್ಲಿ ಎತ್ತಿ ಹೇಳಬಹುದಿತ್ತು ಎಂದು ಒಬ್ಬರು ಕಾಮೆಂಟಿಸಿದ್ಧಾರೆ.

ಪ್ರಾದೇಶಿಕ ಮತ್ತು ಭಾಷಾ ಒಡಕು ಸೃಷ್ಟಿಸುವುದು ಸರಿಯಾಗಿ ಕಾಣುತ್ತಿಲ್ಲ. ಒಗ್ಗೂಡಿ ಇರಬೇಕಾದ ಸಂದರ್ಭದಲ್ಲಿ ಇದು ಬೇಕಾಗಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇನ್ನಷ್ಟು ಟ್ರೆಂಡ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ