AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್ ನಿಲ್ದಾಣದಲ್ಲಿ ಸೆರೆಸಿಕ್ಕಿ ಕೋಳಿ; ಅಧಿಕಾರಿಗಳಿಗೆ ಪ್ರಾಣಸಂಕಟ! ಯಾಕೆ?

ಕೋಳಿಯನ್ನು ಹೊತ್ತ ಪ್ರಯಾಣಿಕ ಕಂಡುಬಂದರೆ, ನಿಬಂಧನೆಗಳ ಪ್ರಕಾರ ಆತನಿಗೆ ದಂಡ ವಿಧಿಸಬಹುದು. ಆದರೆ ಆ ಕೋಳಿಗೆ ಸಂಬಂಧ ಪಟ್ಟವರು ಯಾರೂ ಇದುವರೆಗೂ ಪತ್ತೆಯಾಗದ ಕಾರಣ ಆರ್ ಟಿಸಿ ಆಡಳಿತದವರೇ ಇದರ ಎಲ್ಲ ನಿರ್ವಹಣೆ ಮಾಡಬೇಕಿದೆ.

ಬಸ್ ನಿಲ್ದಾಣದಲ್ಲಿ ಸೆರೆಸಿಕ್ಕಿ ಕೋಳಿ; ಅಧಿಕಾರಿಗಳಿಗೆ ಪ್ರಾಣಸಂಕಟ! ಯಾಕೆ?
ಬಸ್ ನಿಲ್ದಾಣದಲ್ಲಿ ಸೆರೆಸಿಕ್ಕಿ ಕೋಳಿ; ಅಧಿಕಾರಿಗಳಿಗೆ ಪ್ರಾಣಸಂಕಟ!
ಸಾಧು ಶ್ರೀನಾಥ್​
|

Updated on: Jan 11, 2024 | 4:08 PM

Share

ವೇಮುಲವಾಡ, ಜನವರಿ 11: ಆರ್‌ಟಿಸಿ ಬಸ್‌ಗಳು ಬಂದು ಹೋಗುವ ಆ ಬ್ಯುಸಿ ಡಿಪೋದಲ್ಲಿ ಕೋಳಿ ಕೂಡ ಆಶ್ರಯ ಪಡೆಯುತ್ತಿದೆ. ದೂರದ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ವಾಪಸ್ ಡಿಪೋಗೆ ಬರುವ ಬಸ್ ಗಳು ಅಲ್ಲಿಯೇ ನಿಲ್ಲುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಕೋಳಿಯೂ ಜೀವಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗುವುದಿಲ್ಲವೇ? ಇಲ್ಲಿಯವರೆಗೆ ಏನಾಗಿದೆ ಎಂದರೆ ವಾರಂಗಲ್ ನಿಂದ ವೇಮುಲವಾಡ ರಾಜಣ್ಣ ಕ್ಷೇತ್ರಕ್ಕೆ ಆರ್ ಟಿಸಿ ಬಸ್ ಹೊರಟಿತ್ತು.

ಬುಧವಾರ ಆರ್‌ಟಿಸಿ ಬಸ್ ಕರೀಂನಗರಕ್ಕೆ ಬಂದಾಗ ಬ್ಯಾಗ್‌ನಲ್ಲಿ ಕೋಳಿಯನ್ನು ಪ್ಯಾಕ್ ಮಾಡಿರುವುದು ಪ್ರಯಾಣಿಕರ ಗಮನಕ್ಕೆ ಬಂದಿದ್ದು ಕಂಡಕ್ಟರ್‌ಗೆ ಆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರೊಬ್ಬರು ಯಾರಿಗೂ ಗೊತ್ತಾಗಬಾರದೆಂದು ಎಚ್ಚರಿಕೆಯಿಂದ ಕೋಳಿಯನ್ನು ಬುಟ್ಟಿಯಲ್ಲಿ ಪ್ಯಾಕ್ ಮಾಡಿದ್ದಾನೆ. ಆದರೆ, ಬಸ್‌ನಿಂದ ಇಳಿಯುವಾಗ ಪ್ರಯಾಣಿಕರು ಕೋಳಿ ಇದ್ದ ಬ್ಯಾಗ್‌ ಅನ್ನು ಬಸ್‌ನಲ್ಲಿಯೇ ಮರೆತಿದ್ದಾರೆ.

ಕಂಡಕ್ಟರ್ ತಕ್ಷಣ ಕರೀಂನಗರ ಬಸ್ ನಿಲ್ದಾಣದ ನಿಯಂತ್ರಕರಿಗೆ ಮಾಹಿತಿ ನೀಡಿ ಕೋಳಿಯನ್ನು ಅವರಿಗೆ ಒಪ್ಪಿಸಿದರು. ನಿಯಂತ್ರಕರು ಕೋಳಿಯನ್ನು ತೆಗೆದುಕೊಂಡು ಹೋಗಿ ಕರೀಂನಗರ 2 ಡಿಪೋ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಕೋಳಿಯನ್ನು ಪಂಜರದಲ್ಲಿ ಇಟ್ಟು ಅದಕ್ಕೆ ಮೇವು ಮತ್ತು ನೀರು ಕೊಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆರ್ ಟಿಸಿ ಅಧಿಕಾರಿಗಳು ಬಸ್ ಗಳ ಜತೆಗೆ ಕೋಳಿಯನ್ನೂ ನೋಡಿಕೊಳ್ಳುತಿದ್ದಾರೆ ಎಂದು ಕೆಲ ಪ್ರಯಾಣಿಕರು ಪ್ರತಿಕ್ರಿಯಿಸುತ್ತಿದ್ದಾರೆ.

ಇಲ್ಲಿ ಆ ಕೋಳಿಯನ್ನು ಹೊತ್ತ ಪ್ರಯಾಣಿಕ ಕಂಡುಬಂದರೆ, ನಿಬಂಧನೆಗಳ ಪ್ರಕಾರ ಆತನಿಗೆ ದಂಡ ವಿಧಿಸಬಹುದು. ಆದರೆ ಆ ಕೋಳಿಗೆ ಸಂಬಂಧ ಪಟ್ಟವರು ಯಾರೂ ಇದುವರೆಗೂ ಪತ್ತೆಯಾಗದ ಕಾರಣ ಆರ್ ಟಿಸಿ ಆಡಳಿತದವರೇ ಇದರ ಎಲ್ಲ ನಿರ್ವಹಣೆ ಮಾಡಬೇಕಿದೆ.

ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ