AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಒಂದೇ ಆಟೋ ಒಬ್ಬನೇ ಡ್ರೈವರ್​ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?

Auto Ride: ಬೆಂಗಳೂರಿನಲ್ಲಿ ಆಟೋ ​ ಬುಕ್ ಮಾಡಿದ ಪ್ರಯಾಣಿಕರೊಬ್ಬರ ಅನುಭವವಿದು. ಯಾಕೆ ಹೀಗಾಗಿದೆ, ನಿಮಗೇನಾದರೂ ಗೊತ್ತೆ? ದಶರಥನಿಗೆ ಬೇಗ ಶ್ರೀಮಂತನಾಗಬೇಕೆನ್ನಿಸಿದೆ ಎಂದು ನೆಟ್ಟಿಗರೇನೋ ತಮಾಷೆ ಮಾಡುತ್ತಿದ್ದಾರೆ...

Viral: ಒಂದೇ ಆಟೋ ಒಬ್ಬನೇ ಡ್ರೈವರ್​ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?
ಒಂದೇ ಸಮಯಕ್ಕೆ ಬೇರೆ ಬೇರೆ ಜಾಗಗಳಲ್ಲಿ ಒಬ್ಬನೇ ಡ್ರೈವರ್​ ಬೇರೆ ಬೇರೆ ಆ್ಯಪ್​​ಗಳಲ್ಲಿ ಒಂದೇ ಸಮಯಕ್ಕೆ ರೈಡ್​ ಸ್ವೀಕರಿಸಿರುವ ಸ್ಕ್ರೀನ್​ ಶಾಟ್.
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Aug 08, 2023 | 6:16 PM

Share

Bengaluru : ಆಟೋ, ಕ್ಯಾಬ್​ ಪ್ರಯಾಣಕ್ಕೆ ಸಂಬಂಧಿಸಿದ ಅನೇಕ ರೀತಿಯ ಘಟನೆಗಳನ್ನು ಓದುತ್ತಿರುತ್ತೀರಿ. ಕೆಲವೊಮ್ಮೆ ನಿಮ್ಮ ಹೃದಯ ಮಿಡಿಯುತ್ತದೆ. ಕೆಲವೊಮ್ಮೆ ಕೋಪ ಬರುತ್ತದೆ. ಇನ್ನೂ ಕೆಲವೊಮ್ಮೆ ಅಚ್ಚರಿಯೂ ಆಗುತ್ತದೆ. ಇದೀಗ ಹೇಳಹೊರಟಿರುವ ಈ ಘಟನೆಗೆ ನೀವು ಹೇಗೆ ಸ್ಪಂದಿಸುತ್ತೀರಿ ಎಂಬ ಕುತೂಹಲ ನಮ್ಮದು. Harsh.fig ಎಂಬ X (Twitter) ಖಾತೆದಾರರು, ಆಟೋ ಚಾಲಕರೊಬ್ಬರು ಒಂದೇ ಸಮಯಕ್ಕೆ ಎರಡು ವಿಭಿನ್ನ ಆ್ಯಪ್​​ಗಳಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಮತ್ತು ಎರಡು ಪ್ರತ್ಯೇಕ ಮೊಬೈಲ್​​ಗಳಲ್ಲಿ ಆಟೋರೈಡ್​ ಸ್ವೀಕರಿಸಿರುವ ಸ್ಕ್ರೀನ್ ಶಾಟ್​ ಹಂಚಿಕೊಂಡಿದ್ದಾರೆ. ನೆಟ್ಟಿಗರಿಗಿದು ಉಚಿತ ಮನರಂಜನೆಯ ಸರಕಾಗಬಹುದೇನೋ.

ಎರಡು ವಿಭಿನ್ನ ಸ್ಥಳಗಳಲ್ಲಿ, ಎರಡು ವಿಭಿನ್ನ ಅಪ್ಲಿಕೇಶನ್‌ಗಳಲ್ಲಿ, ಎರಡು ವಿಭಿನ್ನ ಫೋನ್‌ಗಳಲ್ಲಿ ಒಬ್ಬನೇ ಆಟೋ ಚಾಲಕ ಈ ರೈಡ್​ ಅನ್ನು ಸ್ವೀಕರಿಸಿದ್ದು ಹೇಗೆ? ಎನ್ನುವ ಅಚ್ಚರಿಯಲ್ಲಿ ನೆಟ್ಟಿಗರು ಬಿದ್ದಿದ್ದಾರೆ. ದಶರಥ ಎಂದು ರೈಡರ್​​ನ ಹೆಸರನ್ನು ಮತ್ತು ಒಂದೇ ಆಟೋ ನಂಬರ್​ ಅನ್ನು ಈ ಆ್ಯಪ್​ಗಳು ತೋರಿಸಿವೆ.

ಇದನ್ನೂ ಓದಿ : Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್

ಆ. 6ರಂದು ಹಂಚಿಕೊಂಡ ಈ ಪೋಸ್ಟ್​ ಅನ್ನು ಈತನಕ 380 ಜನರು ನೋಡಿದ್ದಾರೆ. ಹಾಗೆ ನೋಡಿದರೆ ಇದು ಸಾಕಷ್ಟು ಜನರ ಕಣ್ಣಿಗೆ ಬಿದ್ದಂತಿಲ್ಲ. ದಶರಥ ಬೇಗ ಶ್ರೀಮಂತನಾಗಲು ಹೊರಟಿರುವಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ಆಮೇಲೆ ಏನಾಯಿತು? ಈ ವಿಷಯವಾಗಿ ನೀವು ಅವರನ್ನು ವಿಚಾರಿಸಿದಿರೆ? ಅವರ ಆಟೋದಲ್ಲಿ ಪ್ರಯಾಣಿಸಿದಿರೆ? ಹಣವನ್ನು ಹೇಗೆ ಪಾವತಿ ಮಾಡಿದಿರಿ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್

ದಶರಥನ ಈ ಪ್ರಕರಣದ ಬಗ್ಗೆ ನಿಮಗೇನು ಅನ್ನಿಸುತ್ತದೆ? ಹೇಗೆ ಎರಡು ವಿಭಿನ್ನ ಆ್ಯಪ್​ಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ಸ್ಥಳದಲ್ಲಿ ರೈಡ್ ಸ್ವೀಕರಿಸಲು ಸಾಧ್ಯ? ಯೋಚಿಸಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:12 pm, Tue, 8 August 23

Follow Us
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು