AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್

Street Artist : 'ಯಾರೇ ಕೂಗಾಡಲಿ ಯಾರೇ ಹಾರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ' ಎಂದು ಹೊರಟಂತಿದೆ ಈ ಅಜ್ಜ. ಹಣ್ಣುಹಣ್ಣಾದ ಈ ಆಧುನಿಕ ಗಂಧರ್ವನ ಕಲಾಸಾಹಸಪಯಣದಲ್ಲಿ ನೀವೂ ಜೊತೆಯಾಗಬೇಕೆ? ನೋಡಿ ಈ ವಿಡಿಯೋ.

Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್
ನನ್ನ ದಾರಿಗೆ ಭಂಗವಿಲ್ಲ!
ಶ್ರೀದೇವಿ ಕಳಸದ
|

Updated on: Aug 08, 2023 | 5:29 PM

Share

Artist : ಕಲೆ ಎಂದರೆ ಹುಚ್ಚು, ಕಲೆ ಎಂದರೆ ಸಾಹಸ, ಕಲೆ ಎಂದರೆ ಪ್ರೀತಿ, ಕಲೆ ಎಂದರೆ ಬದುಕು, ಕಲೆ ಎಂದರೆ ಎದೆಗಂಟಿಕೊಂಡಂಥದ್ದು, ಅಂದರೆ ಕಲೆಯೇ ಉಸಿರು ಎನ್ನುವ ಅರ್ಥದಲ್ಲಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಣ್ಣುಹಣ್ಣಾದ ಈ ಅಜ್ಜ ದೊಡ್ಡದಾದ ಪಿಯಾನೋ ಅನ್ನು ತನ್ನ ಸೈಕಲ್ಲಿನಲ್ಲಿ ಅಳವಡಿಸಿಕೊಂಡು ಇತ್ತ ಪಿಯಾನೋ (Piano) ನುಡಿಸುತ್ತ ಮತ್ತು ಅಡ್ಡಡ್ಡವಾಗಿ ಸೈಕಲ್​ ತುಳಿಯುತ್ತ ಹೊರಟಿದ್ದಾನೆ.  ಹೊರಟಿರುವುದು ಯಾವುದೋ ಕಾಡಿನೊಳಗೆ ಅಲ್ಲ ಮತ್ತೆ ನಗರದ ಮುಖ್ಯ ರಸ್ತೆಯೊಳಗೆ! ಈ ವಯಸ್ಸಿನಲ್ಲಿಯೂ ಈತ ಈ ಬಹುಕೌಶಲವನ್ನು ಇಷ್ಟು ಜತನದಿಂದ ಕಾಪಾಡಿಕೊಂಡು ಬಂದಿದ್ದಾನೆಂದರೆ…

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Musicians Represent✊ (@musiciansrepresent)

ಸೈಕಲ್​ನ ಲಯ ತಪ್ಪದಂತೆ ಪಿಯಾನೋ ಬೇಸುರ್ ಆಗದಂತೆ ಈತ ಹೀಗೆ ನಿರಾಯಾಸವಾಗಿ ಚಲಿಸುವುದು ನಿಜಕ್ಕೂ ಬೆರಗು ಹುಟ್ಟಿಸುವಂತಿದೆ. ಎದುರಿಗೆ ನೋಡಿಕೊಂಡು ಗಾಡಿ ಓಡಿಸುವ ನಮಗೆ ಅದೆಷ್ಟೋ ಆತಂಕಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ತಲೆಯನ್ನು ಮೊಸರು ಗಡಿಗೆ ಮಾಡಿಕೊಂಡಿರುತ್ತೇವೆ. ಆದರೆ ಈ ಬೀದಿಕಲಾವಿದ ಮಾತ್ರ ಅಪ್ಪಟ ಸಾಹಸಿಗ. ಈಗಲೇ ಈತ ಹೀಗಿದ್ದಾನೆಂದರೆ ಇನ್ನು ವಯಸ್ಸಿನಲ್ಲಿ!

ಇದನ್ನೂ ಓದಿ : Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್

17 ವರ್ಷಗಳಿಂದ ನಾನು ಕುಳಿತುಕೊಂಡು ಪಿಯಾನೋ ನುಡಿಸಲು ಪ್ರಯತ್ನಿಸುತ್ತಿದ್ದೇನೆ, ಇನ್ನೂ ನನ್ನ ಕೈಗಳು ಕೂತಿಲ್ಲ. ಆದರೆ ಈ ಅಜ್ಜ, ಅದ್ಭುತ! ನಿಮ್ಮ ಈ ಸಾಹಸ ಮತ್ತು ಕಲಾಮನೋಭಾವ ಹೀಗೇ ವೃದ್ಧಿಸಲಿ. ಈಗಿನ ಯುವಪೀಳಿಗೆಗೆ ಮಾದರಿಯಾಗಿರಲಿ ಎಂದು ಹೇಳಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ‘ಜಿರಳೆದೇವೋಭವ’

ನೆಟ್ಟಿಗರ ಕಣ್ಣಿಗೆ ಈ ಅಜ್ಜ ಇನ್ನೂ ಅಷ್ಟಾಗಿ ಬಿದ್ದಂತಿಲ್ಲ ಈತನಕ ಈ ವಿಡಿಯೋ ಕೇವಲ 750 ಜನರ ಕಣ್ಣಿಗೆ ಬಿದ್ದಿದೆ. ಈ ಡಿಜಿಟಲ್ ಕಾಲದಲ್ಲಿ ತನ್ನ ಸಂಗೀತವನ್ನು ಯಾರು ಕೇಳುತ್ತಾರೆ, ತನ್ನ ಈ ಕಲಾಸಾಹಸವನ್ನು ಯಾರು ಶ್ಲಾಘಿಸುತ್ತಾರೆ ಅಂತೆಲ್ಲ ಎಣಿಸದೆ ತನ್ನ ಪಾಡಿಗೆ ತಾನು ವಿಹರಿಸುತ್ತಿದ್ದಾನೆ. ಈ ವಯಸ್ಸಿನಲ್ಲಿ ಕುಳಿತಲ್ಲಿಂದ ನಾಲ್ಕು ಹೆಜ್ಜೆ ನಡೆಯುವುದೇ ಅನೇಕರಿಗೆ ದುಸ್ತರ. ಆದರೆ ಈತನ ಈ ನಾದಪಯಣ ಎಷ್ಟೊಂದು ಶ್ರಮದಾಯಕವಾಗಿದೆ ನೋಡಿ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ