AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾತರಗಿತ್ತಿ ಪಕ್ಕಾ ನಿನ್ ಹಿಡಿಯಾಕ್​ ಬಂದಾರಕ್ಕಾ, ಪೆಂಗ್ವಿನಪ್ಪಾ ಪೆಂಗ್ವಿನವ್ವಾ…

Penguins : ಎದ್ದೇಳಿ, ಎಚ್ಚರಗೊಳ್ಳಿ! ಅದೇ ಚಳಿ, ಅದೇ ನೆಗಡಿ, ಅದೇ ಕೆಮ್ಮು ಸಾಕಿನ್ನು. ಝಳಝಳ ಬಿಸಿಲಿಗೆ ಮೈಯ್ಯೊಡ್ಡಿ. ನಮ್ಮಂತೆ ಚಿಟ್ಟೆಯ ಬೆನ್ನಟ್ಟಿ ಎನ್ನುತ್ತಿವೆ ಪೆಂಗ್ವಿನ್​ಗಳು. 11.9 ಮಿಲಿಯನ್​ ಜನ ಪೆಂಗ್ವಿನ್​ಗಳ​ ಮಾತಿಗೆ ಸೈ ಎಂದಿದ್ದಾರೆ. ನೀವು?

ಪಾತರಗಿತ್ತಿ ಪಕ್ಕಾ ನಿನ್ ಹಿಡಿಯಾಕ್​ ಬಂದಾರಕ್ಕಾ, ಪೆಂಗ್ವಿನಪ್ಪಾ ಪೆಂಗ್ವಿನವ್ವಾ...
ಪಾತರಗಿತ್ತಿ ಹಿಡಿಯಲು ಜಿಗಿಯುತ್ತಿರುವ ಪೆಂಗ್ವಿನ್​
TV9 Web
| Edited By: ಶ್ರೀದೇವಿ ಕಳಸದ|

Updated on:Jan 02, 2023 | 12:07 PM

Share

Viral Video : ಚಳಿಗೆ ಮುದುರಿಕೊಂಡು ಕುಸುಕುಸು ಕೆಮ್ಮುತ್ತ, ಸೊರಸೊರ ಮೂಗೇರಿಸುತ್ತ, ಬಿಸಿಬಿಸಿ ಕಾಫೀ ಕುಡಿಯುತ್ತ ಕೆಲಸದಲ್ಲಿ ನೀವೆಲ್ಲ ಮುಳುಗಿರಬಹುದು. ಆದರೆ ಹೊಸ ವರ್ಷಕ್ಕೆ ಹೊಸ ಸೂತ್ಯ ಬಂದಿದ್ದಾನೆ ಒಮ್ಮೆ ಅವನನ್ನು ಕಂಡರೆ ಚಳಿಯೂ ಜ್ವರೂ ಕೆಮ್ಮೂ ನೆಗಡಿಯೂ ಎಲ್ಲವೂ ಓಡಿಹೋಗತ್ತದೆ ಎನ್ನುವ ಸಂದೇಶವನ್ನು ಈ ಪೆಂಗ್ವಿನ್​ಗಳ ಹಿಂಡು ನೀಡುತ್ತಿದೆ. ಯಾಕೆ ಇವು ಹೀಗೆ ಒಂದೇ ಸಮ ಜಿಗಿಯುತ್ತಿವೆ? ಇವರ ಪಿಟಿ ಮಾಸ್ಟರ್ ಎಲ್ಲಿ ಕಾಣ್ತಿಲ್ವಲ್ಲ? ಎಂದು ಯೋಚಿಸ್ತಿದೀರಾ? ಅವರ ಪಿಟಿ ಮಾಸ್ಟರ್ ಹೇಳಿದಂತೆ ಅವರು ಕೇಳುತ್ತಿದ್ದಾರೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಹೌದು ಪಿಟಿ ಮಾಸ್ಟರ್​ ಪಾತರಗಿತ್ತಿಯವರನ್ನು ಇವರೆಲ್ಲರೂ ಹಿಂಬಾಲಿಸುತ್ತಿದ್ದಾರೆ.

ಮನಸ್ಸನ್ನು ಅರಳಿಸುವಂಥ ಈ ವಿಡಿಯೋ ಅನ್ನು ಡಿಸೆಂಬರ್ 31ರಂದು ಪೋಸ್ಟ್ ಮಾಡಲಾಗಿದೆ. ಈತನಕ ಈ ವಿಡಿಯೋ 11.9 ಮಿಲಿಯನ್​ ಜನರನ್ನು ಮೋಡಿ ಮಾಡಿದೆ. ಎರಡೇ ಸೆಕೆಂಡುಗಳ ಈ ಪುಟ್ಟ ವಿಡಿಯೋದಲ್ಲಿ ಚಿಟ್ಟೆಯನ್ನು ಹೀಗೆ ಬೆನ್ನಟ್ಟುತ್ತಿರುವ ಈ ಪೆಂಗ್ವಿನ್​ ಜಂಪ್​ ನೋಡಿದ ನೂರಾರು ಜನರು ಮರುಳಾಗಿದ್ದಾರೆ.

ಇದನ್ನೂ ನೋಡಿ : ಕಾವ್ಯಾತ್ಮಕ ಶೈಲಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ ಪೈಲಟ್ ವಿಡಿಯೊ ವೈರಲ್

ನಾನಂತೂ ಮುಂದಿನ ಜನ್ಮದಲ್ಲಿ ಪೆಂಗ್ವಿನ್ ಆಗಿ ಹುಟ್ಟುತ್ತೇನೆ ಎಂದಿದ್ದಾರೆ ಒಬ್ಬರು. ಕುಂಟಾಬಿಲ್ಲೆ ಹುಟ್ಟಿದ್ದು ಇಲ್ಲಿಯೇ ಅನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು. ಚಿಟ್ಟೆ ನೀನು ಇನ್ನಷ್ಟು ಎತ್ತರಕ್ಕೆ ಹಾರು ಆಕಾಶವನ್ನು ಮುಟ್ಟು ಎನ್ನುತ್ತಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಹೊಸ ವರ್ಷಕ್ಕೆ ನೀವು ಹೀಗೆ ಇದೇ ಉತ್ಸಾಹದಿಂದ ಕುಣಿದು ಕುಪ್ಪಳಿಸಬೇಕೆನ್ನುವುದು ನಮ್ಮ ಆಶಯ. ಸಣ್ಣಪುಟ್ಟ ಕನಸು ಆಸೆಗಳೆಂಬ ಚಿಟ್ಟೆಗಳನ್ನು ಹೀಗೆ ಪ್ರಯತ್ನಪೂರ್ವಕವಾಗಿ ಬೆನ್ನಟ್ಟಿ ಖುಷಿ ನಿಮ್ಮದಾಗಿಸಿಕೊಳ್ಳಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:05 pm, Mon, 2 January 23

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು