Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿಂಪಾಂಜಿಯು ಈತನ ಬೊಗಸೆಯಿಂದ ನೀರು ಕುಡಿದದ್ದಲ್ಲದೆ ತೊಳೆಯುವುದು ಬೇರೆ!

Animals : ಮುಂದಿನ ದಿನಗಳಲ್ಲಿ ಮನುಷ್ಯರು ಕಾಡಿಗೆ ಹೋಗಿ, ಪ್ರಾಣಿಗಳು ನಾಡಿಗೆ ಬಂದು ನಾಗರಿಕತೆ ರೂಢಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಈ ಆಪ್ತವಾದ ವಿಡಿಯೋ ಲಕ್ಷಾಂತರ ಜನರ ಮನಸ್ಸನ್ನು ಹಿಡಿದಿಡುತ್ತಿದೆ.

Viral Video: ಚಿಂಪಾಂಜಿಯು ಈತನ ಬೊಗಸೆಯಿಂದ ನೀರು ಕುಡಿದದ್ದಲ್ಲದೆ ತೊಳೆಯುವುದು ಬೇರೆ!
ಚಿಂಪಾಜಿಯು ಈತನ ಬೊಗಸೆಯಿಂದ ನೀರು ಕುಡಿದ ನಂತರ ಈತನ ಕೈ ತೊಳೆಯುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Jul 26, 2023 | 1:43 PM

Chimpanzee : ಪ್ರಾಣಿಸಂಗ್ರಹಾಲಯದಲ್ಲಿ ಚಿಂಪಾಂಜಿಯೊಂದನ್ನು ನೋಡಲು ಬಂದ ಮಹಿಳೆಗೆ, ಆಕೆಯ ಮಗುವನ್ನು ಹತ್ತಿರ ತಂದು ತೋರಿಸುವಂತೆ ಸನ್ನೆ ಮಾಡುತ್ತದೆ. ಮಗುವನ್ನು ಹತ್ತಿರದಿಂದ ತೋರಿಸಿದಾಗ, ಗಾಜಿನಗೋಡೆಯಿಂದಲೇ ಅದರ ಗಲ್ಲಕ್ಕೆ ಅದು ಮುತ್ತಿಡಲು (Kiss) ಪ್ರಯತ್ನಿಸುತ್ತದೆ. ಈ ಆಪ್ತವಾದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದನ್ನು ನೋಡಿದ್ದಿರಿ. ಇದೀಗ ಈ ವಿಡಿಯೋದಲ್ಲಿರುವ ಚಿಂಪಾಂಜಿಯು ತನ್ನ ಬಳಿ ಬಂದ ಮನುಷ್ಯನೊಂದಿಗೆ ನಡೆದುಕೊಂಡ ರೀತಿ ಎಷ್ಟು ಆಪ್ತವಾಗಿದೆ ನೋಡಿ.

ಈ ಚಿಂಪಾಂಜಿಯ ಬಳಿ ಹೋಗಿ ಈತ ಕುಳಿತುಕೊಳ್ಳುತ್ತಾನೆ. ಈತನ ಎರಡೂ ಕೈಗಳನ್ನು ಹಿಡಿದು ನೀರಿನೊಳಗೆ ಮುಳುಗಿಸುತ್ತದೆ. ನಂತರ ಈತನ ಬೊಗಸೆಯೊಳಗಿನ ನೀರನ್ನು ಕುಡಿಯುತ್ತದೆ. ನೀರು ಸಾಕೆನ್ನಿಸುತ್ತಿದ್ದಂತೆ ಈತನ ಕೈಗಳನ್ನು ಅದೇ ನೀರಿನಿಂದ ತೊಳೆಯುತ್ತದೆ. ಚಿಂಪಾಂಜಿಯ ಈ ವಿಶೇಷ ವರ್ತನೆ ನೆಟ್ಟಿಗರ ಗಮನ ಸೆಳೆದಿದೆ. ಅದು ಯಾಕೆ ತನ್ನ ಬೊಗಸೆಯಿಂದ ನೀರು ಕುಡಿಯುವುದಿಲ್ಲ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಕುಡಿದ ಮೇಲೆ ಅದು ಕೈಯನ್ನು ತೊಳೆಯುತ್ತದೆಯಲ್ಲ ಎಂದು ಅಚ್ಚರಿಯನ್ನೂ ಉಂಟು ಮಾಡಿದೆ.

ಇದನ್ನೂ ಓದಿ : Viral Video: ‘ಅಪ್ಪಾ ನಾ ಡಿಪ್ರೆಷನ್​ಗೆ ಹೋಗ್ತಿದೀನಿ’ ಮನೆಬಿಟ್ಟು ಎಲ್ಲಿಯೂ ಹೋಗಕೂಡದು!

ಛಾಯಾಗ್ರಾಹಕ ಜೆ ಸಿ ಪಿಯರಿ (JC Pieri) ಎನ್ನುವವರು ಕ್ಯಾಮರೂನ್​ನಲ್ಲಿ ಅಪರೂಪದ ವಿಡಿಯೋ ಅನ್ನು ಸೆರೆಹಿಡಿದಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 160 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ನೋಡಿ : Viral Video: ಪಾಕಿಸ್ತಾನ; 103 ವರ್ಷದ ‘ಮಾಯೀ ಧಾಯೀ’ ಕೋಕ್​ ಸ್ಟುಡಿಯೋದಲ್ಲಿ ಇದನ್ನು ಹಾಡಿದ್ದು 96ರ ಹರೆಯದಲ್ಲಿ

ನಾವು ಯಾರು? ನಮ್ಮ ಮೂಲ ಏನು? ಜಗತ್ತಿನೊಂದಿಗೆ ನಮ್ಮ ಸ್ಪಂದನೆ ಹೇಗಿರಬೇಕು ಎನ್ನುವುದನ್ನು ನಾವು ಆಗಾಗ ನೆನಪಿಸಿಕೊಳ್ಳಲು ಸಹಾಯ ಮಾಡುತ್ತವೆ ಇಂಥ ವಿಡಿಯೋಗಳು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್