Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ

Resignation Letter : ಈ ಉದ್ಯೋಗಿ ಖಂಡಿತ ಪ್ರತಿಭಾವಂತರು ಮತ್ತು ಬೌದ್ಧಿಕ ಸಾಮರ್ಥ್ಯವುಳ್ಳವರು. ಬಹುಶಃ ಮೇಲಧಿಕಾರಿಗೆ ಅಭದ್ರತೆ ಮತ್ತು ಅರಿವಿನ ಕೊರತೆ ಇದ್ದಿರಬೇಕು. ಇಂಥವರನ್ನು ಕಂಪೆನಿ ಉಳಿಸಿಕೊಳ್ಳಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

Viral: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ
ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಉದ್ಯೋಗಿಯ ರಾಜೀನಾಮೆ ಪತ್ರ
Follow us
ಶ್ರೀದೇವಿ ಕಳಸದ
|

Updated on:Jul 26, 2023 | 10:55 AM

Swiggy Instamart : ರಾಜೀನಾಮೆ ಯಾಕೆ ನೀಡುತ್ತಾರೆ? ಆರೋಗ್ಯಕರ ಕೆಲಸದ ವಾತಾವರಣ, ತಕ್ಕಂಥ ಸಂಬಳ ಮತ್ತು ಸಾಮರ್ಥ್ಯ, ಕನಸುಗಳಿಗೆ ಪೂರಕವಾದ ಕೆಲಸ ಸಿಗದೇ ಇದ್ಧಾಗ. ಹೀಗಿದ್ದಾಗಲೂ ಕೆಲವರು ವೈಯಕ್ತಿಕ ಕಾರಣಗಳನ್ನು ಬರೆದು ರಾಜೀನಾಮೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ಕಚೇರಿಯಲ್ಲಿ ತಮಗಾದ ನೋವು ಬೇಸರವನ್ನು ವ್ಯಕ್ತಪಡಿಸಿ ರಾಜೀನಾಮೆ ಕೊಡುತ್ತಾರೆ. ಮತ್ತೂ ಕೆಲವರು ಕೊಡಬೇಕಾದುದನ್ನು ಶಾಲ್​ನಲ್ಲಿ ಸುತ್ತಿ ಕೊಟ್ಟು, ಅಲ್ಲಿಯೂ ತಮ್ಮ ಸೃಜಶೀಲತೆ ಮೆರೆಯುತ್ತಾರೆ. ಇದೀಗ ಟ್ವಿಟರ್​ನಲ್ಲಿ ವೈರಲ್ ಆಗುತ್ತಿರುವ ರಾಜೀನಾಮೆ ಪತ್ರ ಕೊನೆಯ ವರ್ಗಕ್ಕೆ ಸೇರಿದ್ದು.

ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಸ್ವತಃ ಈ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದೆ. ಸಾಮಾನ್ಯವಾಗಿ ಅನೇಕರು ರಾಜೀನಾಮೆ ಪತ್ರ ಬರೆಯಲು ಟೆಂಪ್ಲೆಟ್​ಗಾಗಿ ಗೂಗಲ್​ನ ಮೊರೆ ಹೋಗುವುದುಂಟು. ಆದರೆ ಪ್ರತಿಭೆ, ನಿಷ್ಠೆ, ಶ್ರದ್ಧೆಯುಳ್ಳ ಉದ್ಯೋಗಿ ಏನೇ ಮಾಡಿದರೂ ಅದಕ್ಕೆ ಸೃಜನಶೀಲ ಸ್ಪರ್ಶವಿದ್ದೆ ಇರುತ್ತದೆ. ಈ ಪತ್ರದಲ್ಲಿ ಇನ್​ಸ್ಟಾನಲ್ಲಿ ಸಿಗುವ ನಿತ್ಯಬಳಕೆಯ ವಸ್ತುಗಳನ್ನು ಉಪಯೋಗಿಸಿ ರೀಬಸ್​ ಸ್ಟೋರಿ ಮಾದರಿಯಲ್ಲಿ ಅರ್ಥಪೂರ್ಣವಾಗಿ ವಿನ್ಯಾಸ ಮಾಡಲಾಗಿದೆ. ಹೀಗಿದ್ದಮೇಲೆ ನೆಟ್ಟಿಗರಿಗೆ ಪ್ರತಿಕ್ರಿಯಿಸಲು ಉತ್ಸಾಹ ಉಕ್ಕದೇ ಇದ್ದೀತೇ?

ಇದನ್ನೂ ಓದಿ : Viral Video: ಪಾಕಿಸ್ತಾನ; ಇವರು ತಮ್ಮ ಹಳ್ಳಿಯನ್ನು ತಲುಪಲು ಈ ಅಪಾಯಕಾರಿ ಸೇತುವೆಯ ಮೇಲೆ ನಡೆಯಲೇಬೇಕು

ಎರಡು ದಿನಗಳ ಹಿಂದೆ ಇದನ್ನು ಟ್ವೀಟ್​ ಮಾಡಲಾಗಿದ್ದು, ಸುಮಾರು 90,000 ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. 240 ಜನರು ರೀಟ್ವೀಟ್ ಮಾಡಿದ್ದಾರೆ. ಈ ಸೃಜನಶೀಲತೆ ಔಟ್​ ಆಫ್​ ದಿ ಬಾಕ್ಸ್​ ಎಂದಿದ್ದಾರೆ ಒಬ್ಬರು. ಇದು ಬಹಳ ಮುದ್ದಾದ ಪತ್ರ ಎಂದು ಇನ್ನೊಬ್ಬರು. ಇವರ ರೆಸ್ಯೂಮ್​ ಹೇಗಿದ್ದಿರಬೇಡ!? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಅಣ್ಣತಂಗಿಯ ಜಬರ್​ದಸ್ತ್ ಡ್ಯಾನ್ಸ್​; ಉತ್ಸಾಹದಲ್ಲಿ ನೆಟ್ಟಿಗರು

ಹಾಗೆ ನೋಡಿದರೆ ಈ ಉದ್ಯೋಗಿಯನ್ನು ಕಂಪೆನಿಯು ಕಳೆದುಕೊಳ್ಳಬಾರದು, ಏಕೆಂದರೆ ರಾಜೀನಾಮೆ ಪತ್ರವನ್ನೇ ಇಷ್ಟು ಸೃಜನಶೀಲತೆಯಿಂದ ಬರೆದಿದ್ದಾರೆ ಎಂದರೆ ಅವರೊಳಗಿನ ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಗಮನಿಸಬೇಕು. ಅವರಿಗೆ ತಕ್ಕದಾದ ಹುದ್ದೆ ಮತ್ತು ಸಂಬಳ ನೀಡಿ ಗೌರವಿಸಬೇಕು. ಇದರಿಂದ ಪರಸ್ಪರ ಒಳ್ಳೆಯದಾಗುತ್ತದೆ. ಯಾರಿಂದ ಯಾವ ಕೆಲಸವನ್ನು ಹೇಗೆ ತೆಗೆಯಬೇಕು ಎನ್ನುವುದೂ ಕೂಡ ಸೃಜನಶೀಲತೆಗೆ ಸಂಬಂಧಿಸಿದ್ದು!

ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:48 am, Wed, 26 July 23

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ