AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಜ್ಜಾ ಡೆಲಿವರಿ ಹುಡುಗಿಯ ಮೇಲೆ ನಾಲ್ವರು ಯುವತಿಯರ ಪ್ರತಾಪ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿತ, ಎಲ್ಲಿ?

ಮಧ್ಯ ಪ್ರದೇಶದ ಇಂದೋರ್​ ನಲ್ಲಿ ನಾಲ್ವರು ಯುವತಿಯರು ಪಿಜ್ಜಾ ಡೆಲಿವರಿ ಮಾಡಲು ಬಂದಿದ್ದ ಹುಡುಗಿಯ ಮೇಲೆ ತಮ್ಮ ಪ್ರತಾಪ ತೋರಿದ್ದಾರೆ. ಆ ಹುಡುಗಿಯನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಪಿಜ್ಜಾ ಡೆಲಿವರಿ ಹುಡುಗಿಯ ಮೇಲೆ ನಾಲ್ವರು ಯುವತಿಯರ ಪ್ರತಾಪ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿತ, ಎಲ್ಲಿ?
ಪಿಜ್ಜಾ ಡೆಲಿವರಿ ಹುಡುಗಿಯ ಮೇಲೆ ಯುವತಿಯರ ಪ್ರತಾಪ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿತ, ಎಲ್ಲಿ?
TV9 Web
| Edited By: |

Updated on:Jun 14, 2022 | 4:58 PM

Share

ಇಂದೋರ್​: ಮಧ್ಯ ಪ್ರದೇಶದ ಇಂದೋರ್​ ನಲ್ಲಿ ನಾಲ್ವರು ಯುವತಿಯರು ವಾರಾಂತ್ಯ ಎಂಜಾಯ್ಮೆಂಟ್​​ಗಾಗಿ ಪಿಜ್ಜಾ ಡೆಲಿವರಿ ಮಾಡಲು ಬಂದಿದ್ದ ಹುಡುಗಿಯ ಮೇಲೆ ತಮ್ಮ ಪ್ರತಾಪ ತೋರಿದ್ದಾರೆ. ಆ ಹುಡುಗಿಯನ್ನು ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದಿಷ್ಟೂ ಪ್ರಸಂಗ ವಿಡಿಯೋದಲ್ಲಿ ಸೆರೆಯಾಗಿದೆ. ಪಿಜ್ಜಾ ಹುಡುಗಿಯ ಬಗ್ಗೆ ಕನಿಕರ ತೋರಿ, ಆ ವಿಡಿಯೋ ವೈರಲ್ ಸಹ ಆಗಿದೆ.

ಆರೋಪಿತ ನಾಲ್ವರು ಯುವತಿಯರು ಡಾಮಿನೋಸ್ ಪಿಜ್ಜಾಗಾಗಿ ಆರ್ಡರ್​ ಮಾಡಿದ್ದರು. ಪಿಜ್ಜಾ ಡೆಲಿವರಿ ಮಾಡಿದ ಬಳಿಕ ಆ ನಾಲ್ವರೂ ಯುವತಿಯರು ಮನೆ ಮುಂದೆ ಬೀದಿಯಲ್ಲಿ ಪಿಜ್ಜಾ ಡೆಲಿವರಿ ಹುಡುಗಿಯನ್ನು ನೆಲಕ್ಕೆ ಕೆಡವಿಕೊಂಡು ಪ್ರಾಣಿಗಳಿಗೆ ಬಡಿಯುವಂತೆ ಬಡಿದಿದ್ದಾರೆ. ಆ ಪಿಜ್ಜಾ ಡೆಲಿವರಿ ಹುಡುಗಿ ದಮ್ಮಯ್ಯ ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದರೂ ಕೇಳದೆ, ಮತ್ತಷ್ಟು ರೋಷಾವೇಶಗೊಂಡು ಬಾರಿಸಿದ್ದಾರೆ. ಬರಿಗಯ್ಯಲ್ಲಷ್ಟೇ ಅಲ್ಲ; ಕೋಲು ತೆಗೆದುಕೊಂಡು ಸಹ ಬಾರಿಸಿದ್ದಾರೆ.

ಇದನ್ನು ಓದಿ: ರಾಹುಲ್​ ‘ಇಡಿ’ ಗಂಟು ಜಪ್ತಿ? ಇಡಿ ವಿಚಾರಣೆ ಖಂಡಿಸಿ ​ ಕಾಂಗ್ರೆಸ್ ಹೋರಾಟ ಮಾಡ್ತಿದ್ದರೆ, ಬಿಜೆಪಿ ಇದನ್ನು ಪ್ರಶ್ನಿಸಿದೆ: ಟಿವಿ9 ಚರ್ಚೆ

ಇದನ್ನು ಓದಿ: ನಾಗರಿಕತೆ ಅಂದರೆ ನಾವು ಏನು ಎಂದು ಅರ್ಥ, ಸಂಸ್ಕೃತಿ ಎಂದರೆ ನಮ್ಮ ಬಳಿ ಏನಿದೆ ಎಂಬುದು: ಸಿಎಂ ಬಸವರಾಜ ಬೊಮ್ಮಾಯಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಮಂದಿ, ಪಿಜ್ಜಾ ಡೆಲಿವರಿ ಹುಡುಗಿ ಬಗ್ಗೆ ಮರುಕ ವ್ಯಕ್ತಪಡಿಸಿ, ಅವಳು ಏನೇ ತಪ್ಪು ಮಾಡಿದ್ದರೂ ಹೀಗೆಲ್ಲಾ ನಡೆದುಕೊಳ್ಳಬಾರದಿತ್ತು. ಬುದ್ಧಿವಾದ ಹೇಳಬೇಕಿತ್ತು, ಅಥವಾ ಪೊಲೀಸರಿಗೆ ಒಪ್ಪಿಸಬೇಕಿತ್ತು. ದೌರ್ಜನ್ಯವೆಸಗಿದ ಆ ನಾಲ್ಕೂ ಯುವತಿಯರನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆ ಕಳೆದ ವಾರಾಂತ್ಯ ಶನಿವಾರ ಇಂದೋರ್​ನ ದ್ವಾರಕಾಪುರಿಯಲ್ಲಿ ನಡೆದಿರುವುದು ಎಂದು ತಿಳಿದುಬಂದಿದೆ.

ಪಿಜ್ಜಾ ಹುಡುಗಿಯ ಜುಟ್ಟು ಹಿಡಿದೆಳೆದು ಹಿಗ್ಗಾಮುಗ್ಗಾ ಥಳಿಸಿದ್ದು ಏಕೆ? ಆಘಾತಕಾರಿ ಸಂಗತಿ ಇಲ್ಲಿದೆ:

ಪಿಜ್ಜಾ ಹುಡುಗಿಯ ಜುಟ್ಟು ಹಿಡಿದೆಳೆದು ಹಿಗ್ಗಾಮುಗ್ಗಾ ಥಳಿಸಿದ್ದು ಏಕೆ ಎಂಬುದರ ಬೆನ್ನು ಹತ್ತಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಪಿತ ನಾಲ್ವರೂ ಯುವತಿಯರು ಸ್ಥಳೀಯ ಪರೋಡಿಗಳು. ಹವಾ ಮೈಂಟೇನ್ ಮಾಡಲು ಪಿಜ್ಜಾ ಹುಡುಗಿಗೆ ಬಾರಿಸಿದ್ದೂ ಅಲ್ಲದೆ, ಅದನ್ನೆಲ್ಲ ವಿಡಿಯೋ ಮಾಡಿಸಿ, ತಮ್ಮ ದಾದಾಗಿರಿ ತೋರಿಸಲು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ ಎಂದುತಿಳಿದುಬಂದಿದೆ.

ನಾಲ್ವರು ಯುವತಿಯರ ಬಗ್ಗೆ ಸ್ಥಳೀಯರಲ್ಲಿಯೂ ಭಯ ಮನೆ ಮಾಡಿದ್ದು, ಯಾರೊಬ್ಬರೂ ಪಿಜ್ಜಾ ಹುಡುಗಿಯ ನೆರವಿಗೆ ಬರುವುದಿಲ್ಲ. ಪೊಲೀಸರಿಗೆ ಕಂಪ್ಲೇಂಟ್ ಮಾಡ್ತೀವಿ ಎಂದರೂ ಆರೋಪಿ ಯುಬವತಿಯರು ಡೋಂಟ್ ಕೇರ್​ ಅಂದಿದ್ದಾರೆ. ಕೊನೆಗೆ ಸಂತ್ರಸ್ತೆ ನಂದಿನಿ ಮನೆಯೊಂದರ ಗೇಟ್ ತಳ್ಳಿಕೊಂಡು ಒಳನುಸುಳಿ, ಅಪಾಯದಿಂದ ಪಾರಾಗಿದ್ದಾರೆ.​

ಡಾಮಿನೋಸ್ ಪಿಜ್ಜಾ ಹುಡುಗಿ ಕೊನೆಗೆ ಧೈರ್ಯ ಮಾಡಿ, ಸೀದಾ ಸ್ಥಳೀಯ ಪೊಲೀಸ್ ಸ್ಟೇಷನ್ ತೆರಳಿ, ​ ಪರೋಡಿ ಯುವತಿಯರ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

To Read in Telugu Click Here

Published On - 4:33 pm, Tue, 14 June 22

Follow Us
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!