AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಊರಿನ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ.ಮೌಲ್ಯದ ಆಸ್ತಿ !

ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್​ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ.

ಈ ಊರಿನ ಪಾರಿವಾಳಗಳ ಹೆಸರಿನಲ್ಲಿದೆ ಕೋಟ್ಯಾಂತರ ರೂ.ಮೌಲ್ಯದ ಆಸ್ತಿ !
ಪಾರಿವಾಳ
TV9 Web
| Updated By: Pavitra Bhat Jigalemane|

Updated on: Jan 10, 2022 | 3:22 PM

Share

ರಾಜಸ್ಥಾನ: ಮನುಷ್ಯರ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಮಾಡಿರುವುದನ್ನು ಕೇಳುತ್ತೇವೆ, ನೋಡುತ್ತೇವೆ. ಆದರೆ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಇದೆ ಎಂದರೆ ನಂಬುತ್ತೀರಾ? ಹೌದು. ನಂಬಲೇಬೇಕು. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಜಸನಗರ್  ಊರಿನಲ್ಲಿರುವ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಇದೆ. ಇಲ್ಲಿ ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್​ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ. ಇದೀಗ ಈ ವಿಚಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. 

ಪಾರಿವಾಳಗಳ ರಕ್ಷಣೆಗಾಗಿ  40 ವರ್ಷಗಳ ಹಿಂದೆ ಗುರು ಮುರುಧರ್​ ಕೇಸರಿ ಎನ್ನುವ ಗುರುವಿನಿಂದ ಪ್ರೇರಣೆ ಪಡೆದ ಮಾಜಿ ಸರಪಂಚ್ ರಾಮದಿನ್ ಚೋಟಿಯಾ  ಕಬುವಾನ್​ ಎನ್ನುವ ಟ್ರಸ್ಟ್​ ಅನ್ನು ಸ್ಥಾಪಿಸಿದರು. ಅದರ ಮೂಲಕ ಪಾರಿವಾಗಳಿಗೆ ಪ್ರತಿದಿನ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆ ಮಾಡಲಾಗಿತ್ತದೆ. ಟ್ರಸ್ಟ್​ ಮೂಲಕ 27 ಅಂಗಡಿಗಳನ್ನು ನಿರ್ಮಿಸಿ ಅದರಿಂದ ಬಂದ ಆದಾಯದ ಮೂಲಕ ಪಾರಿವಾಳಗಳಿಗೆ 3 ಚೀಲ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.  3 ಚೀಲ ಭತ್ತವನ್ನು 4 ಸಾವಿರ ರೂ ಖರ್ಚಿನಲ್ಲಿ ಪಾರಿವಾಳಗಳಿಗೆ ನೀಡಲಾಗುತ್ತದೆ ಇನ್ನು 470 ಹಸುಗಳಿರುವ ಗೋಶಾಲೆಗೂ ಆಹಾರ ಪೂರೈಸಲಾಗುತ್ತದೆ.  ಟ್ರಸ್ಟ್​ಗೆ ಅಂಗಡಿಗಳ ಬಾಡಿಗೆಯಿಂದ ತಿಂಗಳಿಗೆ 80 ಸಾವಿರ ರೂ. ಆದಾಯ ಬರುತ್ತದೆ. ಅಲ್ಲದೆ 126 ಬಿಘಾ ಭೂಮಿ ಸ್ಥಿರಾಸ್ತಿಯಾಗಿದೆ. ಎಲ್ಲ ಖರ್ಚಿನ ಬಳಿಕ ಪಾರಿವಾಳಗಳ ರಕ್ಷಣೆಗೆ ಉಳಿಸಿರುವ ಹಣ ಈಗ ಒಟ್ಟು 30 ಲಕ್ಷ ರೂ ಆಗಿದೆ ಎಂದು ಟ್ರಸ್ಟ್​​ ಮಾಹಿತಿ ನೀಡಿದೆ.

ಟ್ರಸ್ಟ್​ನ ಕಾರ್ಯದರ್ಶಿ ಮಾತನಾಡಿ, ಊರಿನ ಜನ ಪಾರಿವಾಳಗಳ ರಕ್ಷಣೆಗೆ ಬಹಿರಂಗವಾಗಿಯೇ ದಾನ ಮಾಡುತ್ತಿದ್ದಾರೆ. ಅದೆಲ್ಲ ಹಣವನ್ನು ಪಾರಿವಾಳಗಳಿಗೆ  ನೀರಿನ ಕೊರತೆಯಾಗದಂತೆ  ಮಾಡಲು ನಿರ್ಮಿಸಿದ ಅಂಗಡಿಗಳಿಗೆ ವಿನಿಯೋಗಿಸಲಾಗಿದೆ. ಇಂದು ಈ ಅಂಗಡಿಗಳಿಂದ ತಿಂಗಳಿಗೆ 9 ಲಕ್ಷ ರೂ ಆದಾಯ ದೊರೆಯುತ್ತದೆ. ಅದನ್ನು ಸ್ಥಳೀಯವಾಗಿರುವ ಪಾರಿವಾಳಗಳಿಗೆ ನೀರುಣಿಸಲು ವ್ಯಯಿಸಲಾಗುತ್ತದೆ. ಈ ಊರಿನಲ್ಲಿರುವ ಎಲ್ಲ ಅಂಗಡಿಗಳೂ ಪಾರಿವಾಳಗಳಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತವೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಜಸನಗರದ ಪಾರಿವಾಳಗಳು ಕೋಟ್ಯಾಂತರ ರೂ ಆಸ್ತಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:

ಸಖತ್​ ಸ್ಟೆಪ್​ ಮೂಲಕ ಮದುವೆ ಮನೆಗೆ ಆಗಮಿಸಿದ ವಧು: ವಿಡಿಯೋ ವೈರಲ್​

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್