AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ

Sambar Deer : ಐಎಫ್‌ಎಸ್ ಅಧಿಕಾರಿ ಸಾಮ್ರಾಟ್, ‘ಕಾಡುಪ್ರಾಣಿಗಳು ಮನುಷ್ಯ ವಾಸಿಸುವಲ್ಲಿ ಓಡಾಡುತ್ತಿರುವುದನ್ನು ರೂಢಿಸಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣವಲ್ಲ’ ಎಂದು ಎಚ್ಚರಿಸಿದ್ದಾರೆ.

ಯಾರಿದೀರಿ? ‘ಸಾಂಬಾರ್’ ಅಂತೂ ಬಂದಿದೆ, ಇಡ್ಲಿನೋ ವಡಾನೋ ಕೊಟ್ಬಿಡಿ
Sambar Deer Visits A Tea Stall
TV9 Web
| Edited By: |

Updated on:Nov 18, 2022 | 3:10 PM

Share

Viral Video : ಸಾಂಬಾರ್ ಜಿಂಕೆಯೊಂದು ಚಹಾದ ಅಂಗಡಿಗೆ ಬಂದು ಏನಾದರೂ ತಿನ್ನಲು ಕೊಡಿ ಎಂದು ಕೇಳಿದೆ. ಚಹಾದ ಅಂಗಡಿಗೆ ಬಂದ ಮೇಲೆ ಚಹಾ ತಾನೇ ಕೊಡಬೇಕು ಅಂಗಡಿಯವರು? ಕಪ್​ನಲ್ಲಿ ಕೊಡಲು ನೋಡಿದ್ದು ಚಹಾನೇ ಇರಬಹುದು. ಆದರೆ ಹೇಗೆ ಕುಡಿದೀತು? ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ಐಎಫ್ಎಸ್​ ಅಧಿಕಾರಿ ಡಾ. ಸಾಮ್ರಾಟ್​ ಗೌಡ ಟ್ವೀಟ್ ಮಾಡಿದ್ದಾರೆ.

ಅಂಗಡಿಯೆದುರು ಹೋಗಿ ಅಲ್ಲಿ ತನಗೇನು ತಿನ್ನಲು ಸಿಗಬಹುದು ಎಂದು ನೋಡುತ್ತದೆ ಈ ಸಾಂಬಾರ ಜಿಂಕೆ. ಇತ್ತ ಬಂದರೆ ತಿನ್ನಲು ಕೊಡುವೆ ಎಂದು ಒಬ್ಬ ಅಜ್ಜ ಕರೆಯುತ್ತಾರೆ. ಬಹುಶಃ ಬನ್ ಕೊಟ್ಟಿರಬಹುದು. ಎಲ್ಲಿ ಸಾಲಬೇಕು? ರುಚಿಯಾಗಿದ್ದನ್ನು ಬಾಯಾಡಿಸಿದಾಗ ಮತ್ತಷ್ಟು ಬೇಕು ಎನ್ನಿಸುವುದು ಸಹಜ ಅಲ್ಲವೆ? ಹಾಗಂತ ಎಷ್ಟು ಕೊಡುತ್ತಾನೆ ಆ ಅಜ್ಜ? ಕೊನೆಗೆ ಅಲ್ಲಿದ್ದ ಗ್ರಾಹಕರು ಚಹಾ ಕೊಡಲು ನೋಡುತ್ತಾರೆ, ನಿರಾಕರಿಸುತ್ತದೆ.

ಐಎಫ್‌ಎಸ್ ಅಧಿಕಾರಿ ಸಾಮ್ರಾಟ್, ‘ಕಾಡುಪ್ರಾಣಿಗಳು ಮನುಷ್ಯನ ವಸತಿ ಪ್ರದೇಶಗಳಲ್ಲಿ ಓಡಾಡುವುದನ್ನು ರೂಢಿಸಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣವಲ್ಲ’ ಎಂದು ಎಚ್ಚರಿಸಿದ್ದಾರೆ. 6,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅದಕ್ಕೆ ಸಾಂಬಾರ್ ವಡಾ ಬೇಕಂತೆ ಎಂದಿದ್ದಾರೆ ಒಬ್ಬರು. ಇಡ್ಲಿ ವಡಾ ಹುಡುಕಿಕೊಂಡು ಬಂದಿತ್ತೋ ಏನೋ ಎಂದಿದ್ದಾರೆ ಇನ್ನೂ ಒಬ್ಬರು. ಅದು ಹೇಗೂ ಸಾಂಬಾರು, ನೀವು ವಡಾ ಕೊಡಿ ಎಂದಿದ್ದಾರೆ ಇನ್ನೂ ಒಬ್ಬರು. ಹೀಗೆ ಪ್ರಾಣಿಗಳಿಗೆ ನಮ್ಮ ಆಹಾರವನ್ನು ಕೊಟ್ಟು ಪ್ರೋತ್ಸಾಹಿಸುವುದು ತಪ್ಪು ಎಂದಿದ್ದಾರೆ ಹಲವರು. ಪಾಪ ಎಷ್ಟು ಬೇಗ ಮನುಷ್ಯರನ್ನು ನಂಬುತ್ತವೆ ಈ ಮುಗ್ಧ ಪ್ರಾಣಿಗಳು ಎಂದಿದ್ದಾರೆ ಒಬ್ಬರು.

ನಿಮ್ಮ ಮನೆಯ ಬಳಿ ಹೀಗೆ ವನ್ಯಜೀವಿಗಳು ಬಂದರೆ ನೀವೇನು ಮಾಡುತ್ತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:00 pm, Fri, 18 November 22

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ