AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್

Leopard Video: 7 ತಿಂಗಳ ಒಟ್ಟೋ ಎಂಬ ಪುಟ್ಟ ಮಗು ಸಫಾರಿ ಲಾಡ್ಜ್‌ನ ಕೋಣೆಯೊಳಗೆ ನೆಲದ ಮೇಲೆ ತೆವಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವಿಡಿಯೋದಲ್ಲಿ ಚಿರತೆಯೊಂದು ಮಗುವಿನ ಮೇಲೆ ನುಗ್ಗಲು ಪ್ರಯತ್ನಿಸಿದೆ.

Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್
ಮಗುವಿನ ಮೇಲೆ ಚಿರತೆಯ ದಾಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 17, 2022 | 3:59 PM

ಇಂಗ್ಲೆಂಡ್​ನ ವೋರ್ಸೆಸ್ಟರ್‌ಶೈರ್‌ನಲ್ಲಿ ಚಿರತೆಯೊಂದು (Leopard) ಅಂಬೆಗಾಲಿಡುವ 7 ತಿಂಗಳ ಮಗುವಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿರುವ ಆಘಾತಕಾರಿ ವಿಡಿಯೋ (Shocking Video) ವೈರಲ್ ಆಗಿದೆ. ಬೆವ್ಡ್ಲಿಯಲ್ಲಿರುವ ವೆಸ್ಟ್ ಮಿಡ್‌ಲ್ಯಾಂಡ್ಸ್ ಸಫಾರಿ ಪಾರ್ಕ್‌ನಲ್ಲಿರುವ ಚೀತಾ ಸಫಾರಿ ಲಾಡ್ಜ್‌ನಲ್ಲಿ ಈ ಆಘಾತಕಾರಿ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

7 ತಿಂಗಳ ಒಟ್ಟೋ ಎಂಬ ಪುಟ್ಟ ಮಗು ಸಫಾರಿ ಲಾಡ್ಜ್‌ನ ಕೋಣೆಯೊಳಗೆ ನೆಲದ ಮೇಲೆ ತೆವಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವಿಡಿಯೋದಲ್ಲಿ ಚಿರತೆಯೊಂದು ಮಗುವಿನ ಮೇಲೆ ನುಗ್ಗಲು ಪ್ರಯತ್ನಿಸಿದೆ. ಆದರೆ, ಆ ಚಿರತೆ ಸುತ್ತಲೂ ಗಾಜಿನ ಬಾಕ್ಸ್​ ಇದ್ದುದರಿಂದ ಚಿರತೆಯ ಮುಖ ಗಾಜಿನ ಬಾಕ್ಸ್​ಗೆ ಬಡಿದು ಅದು ಕೆಳಗೆ ಬಿದ್ದಿದೆ. ಇದರಿಂದ ಮಗುವಿನ ಮೇಲೆರಗಲು ಬಂದ ಚಿರತೆಯ ಪ್ರಯತ್ನ ವಿಫಲವಾಗಿದೆ.

ಡೈಲಿಮೇಲ್ ವರದಿಯ ಪ್ರಕಾರ, ಒಟ್ಟೊ ಅವರ ತಂದೆ ಬೆನ್ ಮಿಲ್ಲರ್ ಈ ಆಘಾತಕಾರಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ನಾವು ಬಾಡಿಗೆಗೆ ಪಡೆದಿದ್ದ ಸಫಾರಿ ಲಾಡ್ಜ್‌ನಲ್ಲಿ ನನ್ನ ಮಗು ಪ್ರಾಣಿಗಳನ್ನು ಇರಿಸಿದ್ದ ಬಾಕ್ಸ್​ ಕಡೆಗೆ ಅಂಬೆಗಾಲಿಟ್ಟುಕೊಂಡು ಹೋಗುತ್ತಿತ್ತು. ರಾತ್ರಿಯ ಕತ್ತಲೆಯಿಂದ ಚಿರತೆಯೊಂದು ತನ್ನ ಮುಂದೆ ಅಂಬೆಗಾಲಿಟ್ಟುಕೊಂಡು ಬರುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದೆ. ಆದರೆ, ಎದುರಲ್ಲಿ ಗಾಜಿನ ಬಾಕ್ಸ್​ ಇದ್ದುದರಿಂದ ಆ ಚಿರತೆಗೆ ಮಗುವಿನ ಮೇಲೆ ಎರಗಲು ಸಾಧ್ಯವಾಗಿಲ್ಲ.

ಇಸ್ರೇಲ್ ಮತ್ತು ಎಂಬಪ್ಪೆ ವೆಸ್ಟ್ ಮಿಡ್‌ಲ್ಯಾಂಡ್ಸ್ ಸಫಾರಿ ಪಾರ್ಕ್‌ನಲ್ಲಿ ಎರಡು ಚಿರತೆಗಳನ್ನು ಇರಿಸಲಾಗಿದೆ. ಲಾಡ್ಜ್‌ನಲ್ಲಿ ತಂಗುವ ಪ್ರವಾಸಿಗರು ಅವುಗಳನ್ನು ನಿಯಮಿತವಾಗಿ ವೀಕ್ಷಿಸಬಹುದು. ಇದೇ ಸಫಾರಿ ಲಾಡ್ಜ್‌ನಲ್ಲಿ ಏಳು ತಿಂಗಳ ಮಗುವಿನ ಮೇಲೆ ದಾಳಿ ಮಾಡಲು ಯತ್ನಿಸಿದ ಚಿರತೆಯೊಂದು ಗಾಜಿನ ಬಾಕ್ಸ್​ಗೆ ಅಪ್ಪಳಿಸಿದೆ.

ಇದನ್ನೂ ಓದಿ: Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!

Shocking News: ಪ್ರಾಣಿ ಬಲಿ ವೇಳೆ ಕುರಿಯ ಬದಲು ಮನುಷ್ಯನ ತಲೆ ಕತ್ತರಿಸಿದ ಕುಡುಕ!

Published On - 3:58 pm, Thu, 17 February 22

ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!