AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಕಾಶದ ಬಣ್ಣ ಬದಲು! ವಿಸ್ಮಯ ವಿದ್ಯಮಾನಕ್ಕೆ ಕಾರಣ ಉಲ್ಕಾಪಾತವೋ ಅಥವಾ ಅನ್ಯಗ್ರಹ ಜೀವಿಗಳೋ?

ಟರ್ಕಿಯ ಡಾ. ಹಸನ್ ಅಲಿ ಎಂಬ ಖಗೋಲಶಾಸ್ತ್ರ ಪರಿಣಿತರೊಬ್ಬರು ಸಹ ಈ ಕುರಿತು ವಿವರಿಸಿದ್ದು, ಉಲ್ಕೆಯೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕಾರಣ ಹೊತ್ತಿ ಉರಿದಿದೆ. ಈ ಕಾರಣದಿಂದಲೇ ಆಕಾಶ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

Viral Video: ಆಕಾಶದ ಬಣ್ಣ ಬದಲು! ವಿಸ್ಮಯ ವಿದ್ಯಮಾನಕ್ಕೆ ಕಾರಣ ಉಲ್ಕಾಪಾತವೋ ಅಥವಾ ಅನ್ಯಗ್ರಹ ಜೀವಿಗಳೋ?
ಆಕಾಶದ ಬಣ್ಣ ಬದಲಾದ ದೃಶ್ಯ
TV9 Web
| Updated By: preethi shettigar|

Updated on: Aug 03, 2021 | 7:17 AM

Share

ಟರ್ಕಿ ದೇಶದ ಇಜ್ಮೀರ್ ಎಂಬ ನಗರದಲ್ಲಿ ಇಡೀ ಆಕಾಶವು ಹಸಿರು ಬಣ್ಣಕ್ಕೆ ತಿರುಗಿದಂತೆ ಒಂದು ಕ್ಷಣ ಕಾಣಿಸಿದ್ದು ಅತ್ಯಂತ ಆಶ್ಚರ್ಯ ಮೂಡಿಸಿದೆ. ಈ ಘಟನೆಯಿಂದ ನಗರವಾಸಿಗಳು ದಿಗಿಲುಗೊಂಡಿದ್ದಷ್ಟೇ ಅಲ್ಲದೇ, ಭಯಭೀತರೂ ಆಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕಾಶ ಹಸಿರು ಬಣ್ಣದಲ್ಲಿ ಕಾಣಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಸ್ಮಯ ವಿದ್ಯಮಾನದ ((Sky Colour change in Turkey) ಹಿಂದೆ ಅನ್ಯಗ್ರಹ ಜೀವಿಗಳು (UFO) ಕೈವಾಡ ಇದೆ ಎಂದು ಸಹ ಕೆಲವರು ವಾದಿಸುತ್ತಿದ್ದಾರೆ. ಇನ್ನು ಕೆಲವರು ಉಲ್ಕಾಪಾತದಿಂದ ಆಕಾಶ ಹಸಿರುಗಟ್ಟಿದೆ ಎಂದು ವಾದಿಸಿದ್ದಾರೆ.

ಜುಲೈ 31ರಂದು ಟರ್ಕಿಯ ಇಜ್ಮಿರ್ ನಗರದಲ್ಲಿ ಈ ವಿದ್ಯಮಾನ ನಡೆದಿದೆ. ಕೆಲವು ವಿಡಿಯೋಗಳಲ್ಲಿ ಉಲ್ಕೆಯೊಂದು ಭೂಮಿಯತ್ತ ಪತನ ಹೊಂದುತ್ತಿರುವುದನ್ನು ಸಹ ಕಾಣಬಹುದಾಗಿದೆ. ಉಲ್ಕೆ ವಾತಾವರಣದತ್ತ ಬಂದು ಮಿಂಚಿನಂತೆ ಮಾಯವಾಗುತ್ತದೆ. ಅದೇ ಕ್ಷಣದಲ್ಲಿ ಆಕಾಶ ಒಮ್ಮೆ ಹಸಿರಾಗಿ ಕಾಣುತ್ತದೆ. ಇದು ಉಲ್ಕಾಪಾತವಲ್ಲ, ಬದಲಿಗೆ ಯಾವುದೋ ಉಪಗ್ರಹವೊಂದು ಪತನಗೊಂಡಿರುವುದು ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಟರ್ಕಿಯ ಡಾ. ಹಸನ್ ಅಲಿ ಎಂಬ ಖಗೋಲಶಾಸ್ತ್ರ ಪರಿಣಿತರೊಬ್ಬರು ಸಹ ಈ ಕುರಿತು ವಿವರಿಸಿದ್ದು, ಉಲ್ಕೆಯೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕಾರಣ ಹೊತ್ತಿ ಉರಿದಿದೆ. ಈ ಕಾರಣದಿಂದಲೇ ಆಕಾಶ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್ 

ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ

(Sky Colour change in turkey UFO Or Satellite crash viral video)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ