AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳ ನಾಗರಾಜ; ಯಾರಿಗಾಗಿ ಚಪ್ಪಲಿ ಕದ್ದುಕೊಂಡು ಹೋಗುತ್ತಿದ್ದೀಯೋ?

King Cobra : ನೋಡನೋಡುತ್ತಿದ್ದಂತೆಯೇ ಈ ನಾಗರಹಾವು ಚಪ್ಪಲಿಯನ್ನು ಕಚ್ಚಿಕೊಂಡು ಸರಸರನೆ ಹರಿದು ಹೋಗಿಬಿಟ್ಟಿದೆ. ಎಲ್ಲಾ ಬಿಟ್ಟು ಚಪ್ಪಲಿಯನ್ನೇಕೆ ಕದ್ದೊಯ್ಯುತ್ತಿದೆ ಎನ್ನುತ್ತಿರುವ ನೆಟ್ಟಿಗರು ತಮಗೆ ತಿಳಿದಂತೆ ಕಾರಣ ಕೊಡುತ್ತಿದ್ಧಾರೆ.

ಕಳ್ಳ ನಾಗರಾಜ; ಯಾರಿಗಾಗಿ ಚಪ್ಪಲಿ ಕದ್ದುಕೊಂಡು ಹೋಗುತ್ತಿದ್ದೀಯೋ?
ಯಾರಿಗೋಸ್ಕರ ಚಪ್ಪಲಿ ಕದ್ದುಕೊಂಡು ಹೋಗ್ತಿದೆಯೋ ನಾಗರಹಾವು?
TV9 Web
| Updated By: ಶ್ರೀದೇವಿ ಕಳಸದ|

Updated on:Nov 25, 2022 | 12:43 PM

Share

Viral Video : ಮೈಸೂರಿನಲ್ಲಿ ಬೂಟಿನೊಳಗೆ ಅವಿತು ಕುಳಿತಿದ್ದ ನಾಗರಹಾವಿನ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರಹಾವಿಗೆ ಮುತ್ತು ಕೊಡಲು ಹೋಗಿ ಕಚ್ಚಿಸಿಕೊಂಡಿದ್ದನ್ನೂ ನೋಡಿದ್ದೀರಿ. ಉತ್ತರ ಪ್ರದೇಶ ಪೊಲೀಸ್ ಠಾಣೆಗೆ ಬಂದ ನಾಗರಾಜ ಪೊಲೀಸರನ್ನೇ ಗಡಗಡ ನಡುಗಿಸಿದ ವಿಡಿಯೋ ಕೂಡ ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ನಾಗರಹಾವು ಅದ್ಯಾರಿಗೆ ಚಪ್ಪಲಿ ಕದ್ದುಕೊಂಡು ಹೋಗುತ್ತಿದೆಯೋ ಗೊತ್ತಿಲ್ಲ. ನಿಮಗೇನಾದರೂ ಗೊತ್ತಾಗುತ್ತದೆಯಾ ನೋಡಿ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವೀಟ್ ಮಾಡಿದ್ಧಾರೆ. ಹೀಗೆ ನಾಗರಹಾವು ಚಪ್ಪಲಿಯನ್ನು ಬಾಯಲ್ಲಿ ಹಿಡಿದುಕೊಂಡು ನಿರಾಯಾಸವಾಗಿ ಹರಿದು ಹೋಗುವುದನ್ನು ನೋಡಿದ ಹೆಣ್ಣುಮಕ್ಕಳು ಕಿರುಚಾಡುತ್ತಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದೇ ಕದಿಯುವುದಷ್ಟೇ ನನ್ನ ಗುರಿ ಎಂಬಂತೆ ಅಷ್ಟು ದೊಡ್ಡ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಸರಸರನೆ ಹರಿದು ಹೋಗಿದೆ ಈನಾಗರಹಾವು.

ನೆಟ್ಟಿಗರು ಈ ದೃಶ್ಯವನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ಹಾವು ಚಪ್ಪಲಿಯನ್ನು ಏನು ಮಾಡುತ್ತದೆ? ಅವನಿಗಂತೂ ಕಾಲಿಲ್ಲ ಎಂದಿದ್ದಾರೆ ಒಬ್ಬರು. ರಬ್ಬರ್​ನ ರುಚಿ, ವಾಸನೆ ಹಾವುಗಳಿಗೆ ಇಷ್ಟ, ಅದಕ್ಕೆ ಇದು ಹೀಗೆ ಮಾಡಿದೆ ಎಂದಿದ್ದಾರೆ ಇನ್ನೊಬ್ಬರು. ತನ್ನ ಮರಿಗಳಿಗಾಗಿ ಬೆಚ್ಚಗಿನ ಗೂಡು ಕಟ್ಟಲು ನಾಗರಹಾವು ಹೀಗೆ ಚಪ್ಪಲಿ ಕದ್ದೊಯ್ಯುತ್ತಿರಬಹುದೇ? ಎಂದಿದ್ದಾರೆ ಮತ್ತೊಬ್ಬರು. ಅದು ಬೇಕೆಂದೇ ಚಪ್ಪಲಿ ತೆಗೆದುಕೊಂಡು ಹೋಗುತ್ತಿಲ್ಲ, ಬಹುಶಃ ಅದರ ಹಲ್ಲಿನಲ್ಲಿ ಚಪ್ಪಲಿ ಸಿಕ್ಕಿಹಾಕಿಕೊಂಡಿರಬಹುದು. ಭಯದಿಂದ ತಪ್ಪಿಸಿಕೊಳ್ಳಲು ಹಾಗೇ ಚಲಿಸುತ್ತಿರಬಹುದು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:38 pm, Fri, 25 November 22

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್