AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಸಾಫ್ಟ್​ವೇರ್​ ಎಂಜಿನಿಯರ್ ವರಗಳ ಬೇಡಿಕೆ ಕುಸಿಯುತ್ತಿದೆಯೇ? ‘ಎತ್ತ ಸಾಗುತ್ತಿದೆ ಐಟಿ ಭವಿಷ್ಯ!’

Groom : 'ವರನು ಐಎಎಸ್​, ಐಪಿಎಸ್​, ವೈದ್ಯ, ಕೈಗಾರಿಕೋದ್ಯಮಿಯಾಗಿರಬೇಕು. ದಯವಿಟ್ಟು ಸಾಫ್ಟ್​ವೇರ್​ ಎಂಜನಿಯರುಗಳು ಬೇಡ’ ಪತ್ರಿಕೆಯಲ್ಲಿ ನೀಡಿದ ಜಾಹೀರಾತಿನ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Viral : ಸಾಫ್ಟ್​ವೇರ್​ ಎಂಜಿನಿಯರ್ ವರಗಳ ಬೇಡಿಕೆ ಕುಸಿಯುತ್ತಿದೆಯೇ? ‘ಎತ್ತ ಸಾಗುತ್ತಿದೆ ಐಟಿ ಭವಿಷ್ಯ!'
ವೈರಲ್ ಆದ ಜಾಹೀರಾತು
TV9 Web
| Edited By: |

Updated on:Sep 21, 2022 | 11:29 AM

Share

Viral : ಡಿಜಿಟಲ್​ ಯುಗದಲ್ಲಿ ತಮ್ಮ ಜೀವನ ಸಂಗಾತಿಗಳನ್ನು ಹುಡುಕಿಕೊಳ್ಳುವ ವಿಧಾನ ಇತ್ತೀಚೆಗೆ ಗಮನ ಸೆಳೆಯುವಂತಿರುತ್ತವೆ; ಹಿಂದೂ ಪಿಳ್ಳೈ, ಮಾಂಸಾಹಾರಿ, ಶ್ರೀಮಂತ ಮನೆತನದ ಸೌಂದರ್ಯವತಿಯಾಗಿರುವ, ಎಂಬಿಎ ಓದಿರುವ 24 ವಯಸ್ಸಿನ ವಧುವಿಗೆ ಇದೇ ಜಾತಿಯ ವರ ಬೇಕಾಗಿದೆ. ಐಪಿಎಸ್​, ಐಎಎಸ್​, ವೈದ್ಯ (ಪಿಜಿ) ಉದ್ಯಮಿ, ಕೈಗಾರಿಕೋದ್ಯಮಿಗಳು ಸಂಪರ್ಕಿಸಬಹುದು. ಆದರೆ ದಯವಿಟ್ಟು ಸಾಫ್ಟ್​ವೇರ್​ ಎಂಜನಿಯರುಗಳು ಫೋನ್ ಮಾಡಬೇಡಿ-ಪತ್ರಿಕೆಯಲ್ಲಿ ಬಂದ ಜಾಹೀರಾತಿನ ತುಣುಕೊಂಡು ವೈರಲ್ ಆಗಿದೆ. ಹಾಗಿದ್ದರೆ ಸಾಫ್ಟ್​ವೇರ್​ ಎಂಜಿನಿಯರ್ ವರಗಳಿಗೆ ಬೇಡಿಕೆ ಕುಸಿಯುತ್ತಿದೆಯೇ?

ಒಟ್ಟಾರೆಯಾಗಿ ಸಾಫ್ಟ್​ವೇರ್​ ಕ್ಷೇತ್ರದ ಭವಿಷ್ಯದ ಬಗ್ಗೆ ಅನುಮಾನ ಹುಟ್ಟುಹಾಕುವಂತೆ ಪನ್ ಮಾಡಿ ಈ ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಇಂಥ ವಿಚಿತ್ರ ಜಾಹೀರಾತುಗಳ ಕಾಲೆಳೆಯಲು ಆಗಾಗ ಕಾಯುತ್ತಿರುತ್ತಾರೆ. ಸದ್ಯ ಈ ಜಾಹೀರಾತು ನೆಟ್ಟಿಗರನ್ನು ಬಗೆಬಗೆಯಲ್ಲಿ ಯೋಚಿಸುವಂತೆ, ಪ್ರತಿಕ್ರಿಯಿಸುವಂತೆ ಮಾಡಿದೆ.

‘ಮೆಕ್ಯಾನಿಕಲ್ ಎಂಜಿನಿಯರುಗಳು​ ಫೋನ್ ಮಾಡಬಹುದಾ?’ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ‘ಈ ಜಾಹೀರಾತು ನೋಡುತ್ತಿದ್ದಂತೆ, ಇಡೀ ದೇಶದ ಭವಿಷ್ಯ ಅಷ್ಟೊಂದು ಚೆನ್ನಾಗಿಲ್ಲ ಎಂದೆನ್ನಿಸುತ್ತಿದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಚಿಂತೆ ಮಾಡಬೇಡಿ, ಸಾಫ್ಟ್​ವೇರ್​ ಎಂಜಿನಿಯರುಗಳು ಪತ್ರಿಕೆಯ ಜಾಹೀರಾತುಗಳನ್ನು ಅವಲಂಬಿಸಿರುವುದಿಲ್ಲ. ತಮಗೆ ಬೇಕಾದುದನ್ನು ಸ್ವತಃ ಹುಡುಕಿಕೊಳ್ಳುತ್ತಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿಮಗೇನೆನ್ನಿಸುತ್ತಿದೆ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:20 am, Wed, 21 September 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್