AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ನೆಟ್ಟಿಗರು ನನ್ನನ್ನು ಕಳ್ಳಕರಡಿ ಎನ್ನುತ್ತಿರುವುದು ಸರಿಯೇ?

Bear Shoplifts Candies : ಕರಡಿಯೊಂದು ರಾತ್ರಿ ಅಂಗಡಿಗೆ ನುಗ್ಗಿ ತನಗೆ ಬೇಕಾದ ಕ್ಯಾಂಡಿ, ತಿಂಡಿಗಳನ್ನೆಲ್ಲ ತಿನ್ನುವಾಗ ಕ್ಯಾಶಿಯರ್​ ಸುಮ್ಮನೆ ವಿಡಿಯೋ ಮಾಡುತ್ತ ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು!

Viral Video : ನೆಟ್ಟಿಗರು ನನ್ನನ್ನು ಕಳ್ಳಕರಡಿ ಎನ್ನುತ್ತಿರುವುದು ಸರಿಯೇ?
ಏನು ತಿನ್ನಲಿ ಏನು ಬಿಡಲಿ ಎನ್ನುತ್ತಿರುವ ಕರಡಿ
TV9 Web
| Updated By: ಶ್ರೀದೇವಿ ಕಳಸದ|

Updated on:Sep 21, 2022 | 1:47 PM

Share

Viral Video : ಕ್ಯಾಲಿಫೋರ್ನಿಯಾದ ಈ ಕರಡಿಗೆ ತುಂಬಾ ಹಸಿವಾಗಿದೆ. ಆಹಾರ ಹುಡುಕುತ್ತ ರಾತ್ರೋರಾತ್ರಿ  ಅಲೆದುಕೊಂಡು ಹೋಗಿದೆ. ಹೀಗೆ ಹೋಗುತ್ತಿರುವಾಗ ಒಂದು ಅಂಗಡಿ ಸಿಕ್ಕಿದೆ. ಅಂಗಡಿ ಎಂದು ಗೊತ್ತಾದ ಮೇಲೆ ಸುಮ್ಮನಿರುವುದು ಅಪರಾಧ ತಾನೆ? ಮೆಲ್ಲ ಒಳಹೋಗಿ ತನಗೆ ಬೇಕಾದ ಕ್ಯಾಂಡಿ, ಸಿಹಿತಿಂಡಿಗಳನ್ನು ತಿನ್ನಲು ಶುರುಮಾಡಿದೆ! ಕರಡಿ ಹೀಗೆ ತಿನ್ನುವ ವಿಡಿಯೋ ಅನ್ನು ನೈಟ್​ ಶಿಫ್ಟ್​ನಲ್ಲಿದ್ದ ಕ್ಯಾಶಿಯರ್ ಕ್ರಿಸ್ಟೋಫರ್​ ಕಿನ್ಸನ್ ವಿಡಿಯೋ ಮಾಡಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ​

ಈ ಘಟನೆ ಸೆ. 6ರಂದು ನಡೆದಿದೆ. ‘ನಾನು ಬಾಗಿಲು ಹಾಕಿಹೋಗಿದ್ದೆ, ಆದರೆ ವಾಪಾಸ್​ ಬಂದಾಗ ಬಾಗಿಲು ತೆರೆದುಕೊಂಡಿದ್ದನ್ನು ನೋಡಿ ಅಚ್ಚರಿಯಾಯಿತು. ಯಾರೋ ಒಳಗಿದ್ದಾರೆ ಎನ್ನಿಸಿ ನೋಡಿದರೆ ತಲೆ ಕಂಡ ಹಾಗಾಯಿತು. ನೋಡಿದರೆ ಕರಡಿ. ಎಂಥಾ ದೊಡ್ಡ ಕರಡಿ!’ ಕ್ರಿಸ್ಟೋಫರ್ ಈ ವಿಷಯವನ್ನು ಡೈಲಿ ಮೇಲ್​ನೊಂದಿಗೆ ಹಂಚಿಕೊಂಡಿದ್ದಾರೆ. .

ಅಂಗಡಿಯೊಳಗೆ ತನಗೆ ಬೇಕಾದ ತಿಂಡಿ ತಿನಿಸುಗಳನ್ನು ಕರಡಿ ತೆಗೆದುಕೊಳ್ಳುತ್ತಿರುವಾಗ ಕ್ರಿಸ್ಟೋಫರ್ ಅಸಾಯಕರಾಗಿ ನಿಲ್ಲಬೇಕಾಯಿತು.

‘ನಾನಂತೂ ಕರಡಿಯಿಂದ ದೂರವೇ ನಿಂತಿದ್ದೆ. ಅಕಸ್ಮಾತ್ ಕರಡಿ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲು ಸುಲಭ ಎಂಬ ಕಾರಣಕ್ಕೆ ಬಾಗಿಲಿನ ಬಳಿಯೇ ನಿಂತುಕೊಂಡಿದ್ದೆ. ಆರಂಭದಲ್ಲಿ ಭಯವಾಯಿತು. ತನಗೆ ಬೇಕಾದ್ದನ್ನು ಎಳೆದುಕೊಂಡು ತಿನ್ನುತ್ತಲೇ ಇತ್ತು. ಅದು ನನಗೇನೂ ಹಾನಿ ಮಾಡಲಾರದು ಎಂದೆನ್ನಿಸಿದಾಗ ಸ್ವಲ್ಪ ನಿರಾಳವಾದೆ’ ಎಂದಿದ್ದಾರೆ ಕ್ರಿಸ್ಟೋಫರ್.

ಅಂಗಡಿಯೊಳಗೆ ಬಂದು ಬೇಕಾದ್ದನ್ನೆಲ್ಲ ತಿನ್ನುವುದು ಮತ್ತೆ ಹೊರಹೋಗುವುದು. ಹೀಗೆಲ್ಲ ಮೂರು ನಾಲ್ಕು ಸಲ ಮಾಡಿದೆ ಕರಡಿ. ಕೊನೆಗೆ ಅರ್ಧಗಂಟೆಯಾದರೂ ಹೊರಗೆ ಹೋದದ್ದು ವಾಪಾಸು ಬಾರದೇ ಇದ್ದಾಗ ಕ್ರಿಸ್ಟೋಫರ್ ಅಂಗಡಿಯ ಬಾಗಿಲನ್ನು ಹಾಕಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:47 pm, Wed, 21 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್