Viral Video: ದೀಪಾವಳಿ ಬೋನಸ್​; ತಮಿಳುನಾಡಿನ ಟೀ ಎಸ್ಟೇಟ್​ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್​

Royal Enfield: ತಮಿಳುನಾಡಿನ ಪಿ ಶಿವಕುಮಾರ ಎಂಬ ಚಹಾತೋಟದ ಮಾಲಿಕ ತನ್ನ ಉದ್ಯೋಗಿಗಳಿಗೆ ರಾಯಲ್​ ಎನ್​ಫೀಲ್ಡ್​ ಬೈಕ್​ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ದೀಪಾವಳಿ ಬೋನಸ್​ ಪಡೆದ ಉದ್ಯೋಗಿಗಳು ಖುಷಿಯಿಂದ ಬೈಕ್ ಓಡಿಸುತ್ತಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ನೀವೂ ಈ ವಿಡಿಯೋ ನೋಡಬೇಕೆ?

Viral Video: ದೀಪಾವಳಿ ಬೋನಸ್​; ತಮಿಳುನಾಡಿನ ಟೀ ಎಸ್ಟೇಟ್​ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್​
ತನ್ನ ಉದ್ಯೋಗಿಗಳಿಗೆ ದೀಪಾವಳಿಗೆ ರಾಯಲ್ ಎನ್​ಫೀಲ್ಡ್​ ಉಡುಗೊರೆಯಾಗಿ ಕೊಟ್ಟ ತಮಿಳುನಾಡಿನ ಟೀ ಎಸ್ಟೇಟ್ ಮಾಲಿಕ ಪಿ. ಶಿವಕುಮಾರ್
ಶ್ರೀದೇವಿ ಕಳಸದ

Updated on: Nov 09, 2023 | 1:52 PM

Diwali Bonus : ಸಾಕಷ್ಟು ಕಂಪೆನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಕೊಡಲಾಗುತ್ತದೆ. ವರ್ಷವಿಡೀ ಕಷ್ಟಪಟ್ಟು ದುಡಿಯುವ ಉದ್ಯೋಗಿಗಳನ್ನು ಸಂತುಷ್ಪಡಿಸಲು ಮತ್ತು ಮುಂದಿನ ಯೋಜನೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಲು ಈ ಕ್ರಮವನ್ನು ಅನುಸರಿಸಿಕೊಂಡು ಬರಲಾಗುತ್ತದೆ. ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಈಗಾಗಲೇ ಉಡುಗೊರೆಗಳು ದೊರೆತಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಅತ್ಯಪರೂಪದ್ದು. ತಮಿಳುನಾಡಿನ (Tamil Nadu) ಟೀ ಎಸ್ಟೇಟ್ ಮಾಲಿಕರೊಬ್ಬರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್​ಫೀಲ್ಡ್​ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ನೆಟ್ಟಿಗರು ಈ ಉಡುಗೊರೆಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ : Viral: ಹಾಂಗ್​ಕಾಂಗ್​; ಸ್ನೇಕ್​ ಪಿಝಾ ತಿನ್ನಲು ಯಾರಿಗೆಲ್ಲ ಧೈರ್ಯವಿದೆ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೀಲಗಿರಿ ಜಿಲ್ಲೆಯ ಕೋಟಗಿರಿ ನಗರದಲ್ಲಿರುವ ಟೀ ಎಸ್ಟೇಟ್‌ನ ಮಾಲಿಕ ಪಿ. ಶಿವಕುಮಾರ ತಮ್ಮ 15 ಉದ್ಯೋಗಿಗಳಿಗೆ ದೀಪಾವಳಿಗಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ವೈರಲ್ ಆಗಿರುವ ವಿಡಿಯೋ ಮೂಲತಃ ಪಿಟಿಐನದ್ದು. ವಿವಿಧ ಆಟಗಳಲ್ಲಿ ಉದ್ಯೋಗಿಗಳನ್ನು ತೊಡಗಿಸಿಕೊಂಡ 42 ವರ್ಷದ ಎಸ್ಟೇಟ್ ಮಾಲಿಕರು ಅವರುಗಳಿಗೆ ಬೈಕ್​ ಕೀಗಳನ್ನು ಕೊಡುತ್ತಾರೆ.

ರಾಯಲ್ ಎನ್​ಫೀಲ್ಡ್​ ಬೈಕ್​ ಇವರ ದೀಪಾವಳಿ ಬೋನಸ್​

ಇತ್ತೀಚೆಗೆ ಹರಿಯಾಣಾದ ಪಂಚಕುಲದ ಫಾರ್ಮಾ ಕಂಪನಿ ಮಾಲಿಕರೊಬ್ಬರು ದೀಪಾವಳಿ ಉಡುಗೊರೆಯಾಗಿ ಹೊಸ ಕಾರುಗಳನ್ನು ತಮ್ಮ ಉದ್ಯೋಗಿಗಳಿಗೆ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು. ಮಿಟ್ಸ್‌ಕಾರ್ಟ್ ಅಧ್ಯಕ್ಷ ಎಂಕೆ ಭಾಟಿಯಾ 12 ಉದ್ಯೋಗಿಗಳಿಗೆ ಹೊಚ್ಚಹೊಸ ಟಾಟಾ ಪಂಚ್ ಕಾರುಗಳ ಕೀಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

ಆಹಾ ಇಂಥ ಮಾಲಿಕರ ಸಂತತಿ ಹೆಚ್ಚಲಿ. ಇಂತ ಮಾಲಿಕರು ನಮಗೂ ಬೇಕು. ನಿಜಕ್ಕೂ ಈ ವಿಡಿಯೋ ನೋಡಿ ಖುಷಿಯಾಯಿತು ಎಂದು ಅನೇಕ ನೆಟ್ಟಿಗರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us