AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ

ಅತ್ತೆ ಸೊಸೆಯ ಮಧ್ಯೆ ಮನಸ್ತಾಪಗಳು ಇದ್ದಿದ್ದೆ ಅಲ್ವಾ.  ಅಡುಗೆ, ಮನೆ ಕೆಲಸ ಇತ್ಯಾದಿ ಸಣ್ಣಪುಟ್ಟ ಕಾರಣಗಳಿಗೆ ಅತ್ತೆ ಸೊಸೆ ಮಧ್ಯೆ ಜಗಳಗಳು ಏರ್ಪಡುತ್ತವೆ.  ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮೊಬೈಲ್ ಡೇಟಾ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಮತ್ತು ಸೊಸೆಯ ನಡುವೆ ಜಗಳ ಏರ್ಪಟ್ಟಿದೆ. ಹೌದು ಅತ್ತೆ ಪ್ರತಿದಿನ ರೀಲ್ಸ್ ವಿಡಿಯೋಗಳನ್ನು ನೋಡುತ್ತ ನನ್ನ ಮೊಬೈಲ್ ಡೇಟಾವನ್ನೆಲ್ಲಾ ಖಾಲಿ ಮಾಡುತ್ತಾರೆ ಎಂದು ಸೊಸೆಯು ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾರೆ. 

Viral: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Dec 26, 2023 | 6:14 PM

Share

ಅತ್ತೆ ಸೊಸೆಯ ನಡುವಿನ ಜಗಳ ಸಾಮಾನ್ಯ.  ಅಡುಗೆ, ಮನೆಕೆಲಸ, ವರದಕ್ಷಿಣೆ ಇತ್ಯಾದಿ ಕಾರಣಗಳಿಗೆ ಅತ್ತೆ ಮತ್ತು ಸೊಸೆಯ ಮಧ್ಯೆ ಜಗಳಗಳು ಏರ್ಪಡುತ್ತವೆ. ಈ ವಿಚಾರಗಳ ಕಾಣದಿಂದ ಸೊಸೆಯಂದಿರು ತಮ್ಮ ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆಯ ಮೆಟ್ಟಿಲೇರಿದ ಹಲವು ಘಟನೆಗಳನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಅತ್ತೆ ಮತ್ತು ಸೊಸೆಯ ನಡುವೆ ಮೊಬೈಲ್ ಡೇಟಾ ವಿಚಾರದಲ್ಲಿ ಜಗಳ ಏರ್ಪಟ್ಟು, ಸೊಸೆಯು ಅತ್ತೆಯ ವಿರುದ್ಧ ದೂರು ನೀಡಲು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.  ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.  ಹೌದು ನನ್ನ ಅತ್ತೆ ಪ್ರತಿದಿನ ನನ್ನ ಮೊಬೈಲ್ ಅಲ್ಲಿ ರೀಲ್ಸ್ ವಿಡಿಯೋ, ಫೇಸ್ಬುಕ್ ನೋಡುತ್ತಾ ಮೊಬೈಲ್  ಡೇಟಾವನ್ನೆಲ್ಲಾ ಖಾಲಿ ಮಾಡುತ್ತಿದ್ದಾರೆ. ನಾನು ಕೆಲಸವನ್ನೆಲ್ಲಾ ಮುಗಿಸಿ ಸ್ವಲ್ಪ ಹೊತ್ತು ಮೊಬೈಲ್ ನೋಡೋಣ ಅಂತಾ ಕೂತ್ಕೊಂಡ್ರೆ, ಡೇಟಾ ಎಲ್ಲಾ ಖಾಲಿಯಾಗಿರುತ್ತಿತ್ತು ಎಂದು ಅತ್ತೆಯ ವಿರುದ್ಧ ಸೊಸೆಯೊಬ್ಬರು ದೂರನ್ನು ದಾಖಲಿಸಿದ್ದಾರೆ.  ಅಲ್ಲದೆ ಅತ್ತೆಯ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆ ಮಹಿಳೆ ಒತ್ತಾಯಿಸಿದ್ದು, ಪೋಲಿಸರು ಸೊಸೆ ಹಾಗೂ ಅತ್ತೆ ಇಬ್ಬರನ್ನೂ ಸಮಧಾನಪಡಿಸಿ, ರಾಜಿ ಸಂಧಾನ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

ಉತ್ತರ ಪ್ರದೇಶದ ಕೋತ್ವಾಲಿ ಸದರ್ ಬಜಾರ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಈ ಪ್ರದೇಶದಲ್ಲಿ ವಾಸವಿರುವಂತಹ  ನವವಿವಾಹಿತೆ ಮಹಿಳೆಯೊಬ್ಬರು ನನ್ನ ಅತ್ತೆ ಪ್ರತಿದಿನ ನನ್ನ ಮೊಬೈಲ್ ಅಲ್ಲಿ ರೀಲ್ಸ್ ವೀಡಿಯೋಗಳು ಹಾಗೂ ಫೇಸ್ಬುಕ್ ನೋಡುತ್ತಾ ಸಮಯ ಕಳೆಯುವ  ಮೂಲಕ ಪ್ರತಿದಿನವೂ  ದೈನಂದಿನ ಡೇಟಾವನ್ನೆಲ್ಲಾ ಖಾಲಿ ಮಾಡಿಬಿಡುತ್ತಾರೆ. ಬೆಳಗ್ಗೆ ನಾನು ಕೆಲಸದಲ್ಲಿ ನಿರತಳಾಗಿರುತ್ತಿದ್ದೆ,  ಆ ಸಂದರ್ಭದಲ್ಲಿ ಮೊಬೈಲ್ ನೋಡಲು ನನಗೆ ಸಮಯವಿರುತ್ತಿರಲಿಲ್ಲ, ರಾತ್ರಿ ಸ್ವಲ್ವ ಬಿಡುವಿನ ಸಮಯದಲ್ಲಿ ಮೊಬೈಲ್ ನೋಡೋಣಾ ಅಂದ್ರೆ ಮೊಬೈಲ್ ಅಲ್ಲಿ ಪೂರ್ತಿ ಡೇಟಾ ಖಾಲಿಯಾಗಿರುತ್ತಿತ್ತು,  ಈ ಬಗ್ಗೆ ತನ್ನ ಪತಿಗೂ ದೂರು ನೀಡಿದ್ದೆ ಎಂದು ಮಹಿಳೆ ಹೇಳಿದ್ದಾರೆ, ಅಲ್ಲದೆ ಇದೇ ವಿಚಾರವಾಗಿ ಪತಿಯೊಂದಿಗೂ ಜಗಳವಾಡಿದ್ದರು.

ಇದನ್ನೂ ಓದಿ: ಬೇಗ ರಸ್ತೆ ದಾಟ್ರೋ, ತನ್ನ ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿ ಪಟ್ಟಪಾಡು ನೋಡಿ 

ಇದಾದ ಬಳಿಕವೂ ಅತ್ತೆಯ ಸ್ವಭಾವದಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ, ಮಹಿಳೆಯು ಪೋಲಿಸ್ ಠಾಣೆ ಮೆಟ್ಟಿಲೇರಿ  ಅತ್ತೆ ಹಾಗೂ ಪತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಮಹಿಳೆಯು ನನ್ನ  ಅತ್ತೆ ನನ್ನ ಮೊಬೈಲ್ ಡೇಟಾವನ್ನು ಖಾಲಿ ಮಾಡುತ್ತಾರೆ  ಎಂದು ಪೋಲಿಸರಿಗೆ ದೂರು ನೀಡಿದ್ದಾರೆ. ಅಲ್ಲದೆ   ತನ್ನ ಅತ್ತೆ ಮತ್ತು ಪತಿ ವರದಕ್ಷಿಣೆಗಾಗಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಪೋಲಿಸರು ಮಹಿಳೆ, ಆಕೆಯ ಪತಿ ಮತ್ತು ಅತ್ತೆಗೆ ಕೌನ್ಸೆಲಿಂಗ್ ನಡೆಸಿ ಅತ್ತೆ ಸೊಸೆಯನ್ನು ಸಮಧಾನಪಡಿಸಿ, ಸಂಧಾನ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ