AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ದರೋಡೆಗೆ ಬಂದು ಬ್ಯಾಂಕನ್ನು ಹೊಗಳಿ ಹೋದ ಕಳ್ಳ!

ಬಾಗಿಲು ತೆರೆದು ಕಳ್ಳ ಒಳಗೆ ಹೋಗಿದ್ದರೂ ಲಾಕರ್‌ಗಳನ್ನು ಒಡೆಯಲಾಗಿಲ್ಲ. ಬ್ಯಾಂಕ್​ನಲ್ಲಿ ತನ್ನ ಬೆರಳಚ್ಚುಗಳು ಎಲ್ಲಿಯೂ ಸಿಗದಂತೆ ಎಚ್ಚರ ವಹಿಸಿರುವ ಆತ ಬ್ಯಾಂಕ್ ಭದ್ರತೆಯನ್ನು ಮೆಚ್ಚಿ, ಗುಡ್ ಬ್ಯಾಂಕ್ ಎಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಾನೆ.

Viral News: ದರೋಡೆಗೆ ಬಂದು ಬ್ಯಾಂಕನ್ನು ಹೊಗಳಿ ಹೋದ ಕಳ್ಳ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on:Sep 02, 2023 | 12:29 PM

Share

ಬ್ಯಾಂಕ್​ನಲ್ಲಿ ದರೋಡೆ ಮಾಡಲು ಹೋದ ಕಳ್ಳನೊಬ್ಬನಿಗೆ ಆ ಬ್ಯಾಂಕ್​ನ ಲಾಕರ್​​ಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಇದರಿಂದ ಬೇಸರಗೊಂಡರೂ ಬ್ಯಾಂಕ್​ನ ಭದ್ರತಾ ವ್ಯವಸ್ಥೆಯನ್ನು ಮೆಚ್ಚಿದ ಆತ ಒಳ್ಳೆಯ ಬ್ಯಾಂಕ್ ಎಂದು ಹೊಗಳಿ ಬ್ಯಾಂಕ್​ನ ಮೇಜಿನ ಮೇಲೆ ಚೀಟಿ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಬೆಳಗ್ಗೆ ಬಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗುರುವಾರ ರಾತ್ರಿ ನೆನ್ನಲ್ ಮಂಡಲದಲ್ಲಿರುವ ತೆಲಂಗಾಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಸಿಬ್ಬಂದಿ ಬ್ಯಾಂಕ್​ಗೆ ಬಂದಾಗ ರಾತ್ರಿ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ‘ಆಲಿಯಾ ಭಟ್​ ಬೇಕು’ ಎಂದ ಶಾರುಖ್​ ಖಾನ್​; ವಿಡಿಯೋ ವೈರಲ್​ ಆದ ಬಳಿಕ ನಟಿ ನೀಡಿದ ಪ್ರತಿಕ್ರಿಯೆ ಏನು?

ರಾತ್ರಿ ಬ್ಯಾಂಕ್‌ಗೆ ನುಗ್ಗಿದ ಕಳ್ಳ ಲಾಕರ್‌ಗಳನ್ನು ತೆರೆಯಲು ವಿಫಲವಾಗಿದ್ದಾನೆ. ಬ್ಯಾಂಕ್​ನಲ್ಲಿ ತನ್ನ ಬೆರಳಚ್ಚುಗಳು ಎಲ್ಲಿಯೂ ಸಿಗದಂತೆ ಎಚ್ಚರ ವಹಿಸಿರುವ ಆತ ಬ್ಯಾಂಕ್ ಭದ್ರತೆಯನ್ನು ಮೆಚ್ಚಿ, ಗುಡ್ ಬ್ಯಾಂಕ್ ಎಂದು ಒಂದು ಚೀಟಿ ಬರೆದಿಟ್ಟು ಹೋಗಿದ್ದಾನೆ.

ಬ್ಯಾಂಕ್ ಸಿಬ್ಬಂದಿ ಮರುದಿನ ಬೆಳಗ್ಗೆ ಕಚೇರಿಗೆ ಬಂದಾಗ ಬ್ಯಾಂಕ್​ನ ಮುಖ್ಯ ಬಾಗಿಲನ್ನು ಯಾರೋ ಬಲವಂತವಾಗಿ ತೆರೆಯಲು ಯತ್ನಿಸಿರುವುದು ಗೊತ್ತಾಗಿದೆ. ಬಾಗಿಲು ತೆರೆದು ಕಳ್ಳ ಒಳಗೆ ಹೋಗಿದ್ದರೂ ಲಾಕರ್‌ಗಳನ್ನು ಒಡೆಯಲಾಗಿಲ್ಲ. ಆ ಲಾಕರ್​ನಲ್ಲಿ ಇದ್ದ ಬೆಲೆಬಾಳುವ ವಸ್ತುಗಳು ಹಾಗೇ ಇದ್ದವು. ಮೇಜಿನ ಮೇಲೊಂದು ಚೀಟಿ ಇಟ್ಟು ಹೋಗಿರುವ ಕಳ್ಳ, ನಿಮಗೆ ನನ್ನ ಫಿಂಗರ್‌ಪ್ರಿಂಟ್‌ಗಳು ಸಿಗುವುದಿಲ್ಲ. ನಿಮ್ಮದು ಉತ್ತಮ ಬ್ಯಾಂಕ್. ನಿಮ್ಮ ಬ್ಯಾಂಕ್​ನಿಂದ ನನಗೆ 1 ರೂಪಾಯಿಯನ್ನೂ ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ನನ್ನನ್ನು ಹಿಡಿಯಬೇಡಿ ಎಂದು ಆತ ಬರೆದಿಟ್ಟಿದ್ದಾನೆ.

ಕಳ್ಳನ ಚಲನವಲನಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಹಚ್ಚಬಾರದೆಂದು ಅವನು ತನ್ನ ಮುಖವನ್ನು ಮುಚ್ಚಿಕೊಂಡಿದ್ದ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:21 pm, Sat, 2 September 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ