AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಷಮಿಸಿ ತುಂಬಾ ರುಚಿಯಾಗಿತ್ತು, ಎಲ್ಲಾ ತಿಂದುಬಿಟ್ಟೆ’ ಡೆಲಿವರಿ ಏಜೆಂಟ್​ ಗ್ರಾಹಕರಿಗೆ ಮೆಸೇಜ್ ಮಾಡಿದಾಗ

Delivery Agent : ಈ ವಿಷಯವನ್ನು ನೀವು ಕಂಪೆನಿಗೆ ರಿಪೋರ್ಟ್​ ಮಾಡಬಹುದು ಎಂದಿದ್ದಾನೆ ಡೆಲಿವರಿ ಏಜೆಂಟ್. ಭಯಂಕರ ಮಾರಾಯಾ ನೀ ಎಂದು ಲಿಯಾಮ್​ ಮೆಸೇಜ್ ಮಾಡಿದಾಗ, ಐ ಡೋಂಟ್ ಕೇರ್ ಎಂದುಬಿಟ್ಟಿದ್ದಾನೆ ಏಜೆಂಟ್.  

‘ಕ್ಷಮಿಸಿ ತುಂಬಾ ರುಚಿಯಾಗಿತ್ತು, ಎಲ್ಲಾ ತಿಂದುಬಿಟ್ಟೆ’ ಡೆಲಿವರಿ ಏಜೆಂಟ್​ ಗ್ರಾಹಕರಿಗೆ ಮೆಸೇಜ್ ಮಾಡಿದಾಗ
‘This food is very tasty, I ate it. Food delivery man texts the customer.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 31, 2022 | 4:53 PM

Viral Video : ಯಾರಿಗಾದರೂ ಹೀಗೊಂದು ಊಹೆ ಇತ್ತಾ? ಮುಂದೊಂದು ದಿನ ಈ ಪರಿಯಲ್ಲಿ ಈ ವೇಗದಲ್ಲಿ ಫುಡ್​ ಡೆಲಿವರಿ ಸಿಸ್ಟಮ್ ವ್ಯಾಪಿಸಿಕೊಳ್ಳುತ್ತದೆಯೆಂದು. ​ತಂತ್ರಜ್ಞಾನದ ಅಚ್ಚರಿ ಎಂದರೆ ಹೀಗೇ. ಆದರೆ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಅದರದೇ ಆದ ಸಾಧಕಬಾಧಕಗಳೂ ಇದ್ದೇ ಇರುತ್ತವೆ. ಆದರೆ ಆ ಚರ್ಚೆ ಈಗಿಲ್ಲಿ ಬೇಡ. ಏಕೆಂದರೆ ಈಗ ವೈರಲ್ ಆಗಿರುವ ಈ ಪೋಸ್ಟ್​ ನೋಡಿದಾಗ ನಿಮಗೇನು ಅನ್ನಿಸಬಹುದು ಎಂಬ ಕುತೂಹಲ ನಮಗಿದೆ.

ಓದಿದಿರಲ್ವಾ? ಲಿಯಾಮ್​ ಬಾಗ್ನಾಲ್​ ಎಂಬ ವ್ಯಕ್ತಿ ಫುಡ್​ ಡೆಲಿವರಿ ಏಜೆಂಟ್​ನೊಂದಿಗೆ ನಡೆಸಿದ ಸಂಭಾಷಣೆಗೆ ಈ ಟ್ವೀಟ್​ ಸಾಕ್ಷಿ. ಆಗಿದ್ದಿಷ್ಟೇ, ಲಿಯಾಮ್​ ಆರ್ಡರ್ ಮಾಡಿದ್ದ ಊಟವನ್ನು ಏಜೆಂಟ್​ ಆತನಿಗೆ ತಲುಪಿಸದೆ ಕ್ಷಮಿಸಿ ಎಂದು ಮೆಸೇಜ್ ಮಾಡಿದ್ದಾನೆ. ಯಾಕೆ ಏನು ಎಂದು ಲಿಯಾಮ್ ವಾಪಸ್​ ಮೆಸೇಜ್ ಮಾಡಿದ್ಧಾನೆ. ಆಗ ಡೆಲಿವರಿ ಏಜೆಂಟ್ ತಿಂಡಿ ಬಹಳ ರುಚಿಯಾಗಿತ್ತು ಹಾಗಾಗಿ ನಾನೇ ತಿಂದುಬಿಟ್ಟೆ. ಮತ್ತೆ ಈ ವಿಷಯವನ್ನು ನೀವು ಕಂಪೆನಿಗೆ ರಿಪೋರ್ಟ್​ ಮಾಡಬಹುದು ಎಂದಿದ್ದಾನೆ. ಭಯಂಕರ ಮಾರಾಯಾ ನೀ ಎಂದು ಲಿಯಾಮ್​ ಮೆಸೇಜ್ ಮಾಡಿದಾಗ, ಐ ಡೋಂಟ್ ಕೇರ್ ಎಂದುಬಿಟ್ಟಿದ್ದಾನೆ ಏಜೆಂಟ್.

ನಂತರ ಲಿಯಾಮ್​, ಅಪ್ಲಿಕೇಷನ್​ ಮೂಲಕ ಕಸ್ಟಮರ್ ಕೇರ್​ ಸಿಬ್ಬಂದಿಗೆ ಈ ಸಂಭಾಷಣೆಯ ಸ್ಕ್ರೀನ್​ ಶಾಟ್ ಕಳಿಸಿ ಹಣ ಮರುಪಾವತಿಸಲು ಕೇಳಿಕೊಂಡಿದ್ಧಾನೆ. ನೀವು ಮತ್ತೊಮ್ಮೆ ಆರ್ಡರ್ ಮಾಡುವವರೆಗೂ ಹಣವನ್ನು ಮರುಪಾವತಿ ಮಾಡಲಾಗದು ಎಂದು ಅತ್ತಕಡೆಯಿಂದ ಸಂದೇಶ ಬಂದಿದೆ. ಆಗ ಲಿಯಾಮ್ ಮತ್ತೊಮ್ಮೆ ಆರ್ಡರ್ ಮಾಡಿ ಬೇರೊಬ್ಬ ಡೆಲಿವರಿ ಏಜೆಂಟ್​ ಮೂಲಕ ಊಟ ತರಿಸಿಕೊಂಡಿದ್ದಾರೆ.

ವೃತ್ತಿಪರವಾಗಿರಬೇಕು ಎಂದು ಪ್ರತಿಯೊಬ್ಬ ಗ್ರಾಹಕರೂ ನಿರೀಕ್ಷಿಸುತ್ತಾರೆ. ಈಗ ಈ ಘಟನೆಯಿಂದ ಬೇಸರವಾಗಿದೆ ಎಂದು ಲಿಯಾಮ್​ ‘ಮಿರರ್​’ಗೆ ತಿಳಿಸಿದ್ದಾರೆ. ನಂತರ ಡೆಲಿವರಿ ಪಾರ್ಟನರ್ ಏಜನ್ಸಿಯು​ ಕ್ಷಮೆ ಕೇಳಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಕ್ಷಣವೇ ನಾವು ಮತ್ತೊಮ್ಮೆ ಲಿಯಾಮ್ ಅವರಿಗೆ ಊಟವನ್ನು ಕಳಿಸಿದ್ದೇವೆ. ಜೊತೆಗೆ ಮೊದಲ ಡೆಲಿವರಿ ಏಜೆಂಟ್​ ಕುರಿತು ವಿಚಾರಣೆಯನ್ನೂ ನಡೆಸುತ್ತಿದ್ದೇವೆ ಎಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ಪೋಸ್ಟ್​ಗೆ ವಿವಿಧ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಎಂಥ ಆಘಾತ ಇದು ಎಂದಿದ್ದಾರೆ. ಇನ್ನೂ ಕೆಲವರು, ನನಗೂ ಹೀಗೆಲ್ಲ ಆಗಿದೆ ಎಂದಿದ್ದಾರೆ. ಡೆಲಿವರಿ ಏಜೆಂಟ್​ನ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು ಎಂದಿದ್ದಾರೆ ಒಬ್ಬರು.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:51 pm, Mon, 31 October 22

ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 
VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ