AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವವಿಲ್ಲದ ಹಾವು: ಇದರ ರಚನೆ ಮಸ್ತಾಗಿದೆ ನೋಡಿ, ನೀವು ಫುಲ್​​​ ಫಿದಾ ಆಗೋದು ಪಕ್ಕಾ

ನೀವು ಕಲಾಭಿಮಾನಿಗಳಾಗಿದ್ದರೆ ಈ ವಿಡಿಯೋ ನೋಡಲೇಬೇಕು. ಹಾವು ಯಾರಿಗೂ ಇಷ್ಟವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಹಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ನಿಜವಾದ ಹಾವಿನ ಬದಲು ಒಂದು ಚಿಕ್ಕ ಹಾವಿನ ರೀತಿ ಕಾಣುವ ರಬ್ಬರ್ ಪೀಸ್ ಕಂಡರೂ ಹಾವು ಎಂದು ತಿಳಿದು ಮಾರುದ್ದ ಹಾರುವ ಜನರಿರುವ ಕಾಲದಲ್ಲಿ ಇಲ್ಲೊಬ್ಬರ 3 ಜನರ ತಂಡ ಒಂದು ಹಾವಿನ ಆಕೃತಿಯನ್ನು ಮಾಡಿದ್ದಾರೆ. ಏನಿದು ವಿಡಿಯೋ ನೀವೇ ನೋಡಿ!.

ಜೀವವಿಲ್ಲದ ಹಾವು: ಇದರ ರಚನೆ ಮಸ್ತಾಗಿದೆ ನೋಡಿ, ನೀವು ಫುಲ್​​​ ಫಿದಾ ಆಗೋದು ಪಕ್ಕಾ
ವೈರಲ್​​ ವಿಡಿಯೋ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 17, 2023 | 3:01 PM

Share

ಕಲೆ ಮತ್ತು ಪ್ರತಿಭೆ ಯಾರ ಸೊತ್ತು ಅಲ್ಲ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಸತ್ಯ ಎನಿಸುವಂತಹ ಅನೇಕ ದೃಶ್ಯಗಳನ್ನು ನೀವು ಕಣ್ಣಾರೆ ಕಂಡಿರಬಹುದು, ತೆರೆಮರೆಯಲ್ಲಿವಿದ್ದು ಗುರುತಿಸಿಕೊಳ್ಳದಿದ್ದರೂ, ತಮ್ಮ ಅಭಿರುಚಿಯನ್ನು ಬಿಡದೆಯೇ ಸಾಧನೆಯ ಮೆಟ್ಟಿಲು ಏರಲು ಪ್ರಯತ್ನಿಸುತ್ತಿರುವವರು ಲಕ್ಷಾಂತರ ಜನರಿದ್ದಾರೆ. ಇವರೆಲ್ಲರೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಉತ್ತಮ ಸಂದೇಶ ನೀಡುವವರಾಗಿದ್ದರೆ. ಅದರಲ್ಲಿಯೂ ಯಾರ ಬಳಿ ಯಾವ ರೀತಿಯ ವಿದ್ಯೆ ಅಥವಾ ಕಲೆ ಇದೆ ಎಂಬುದು ತಿಳಿದಿರುವುದಿಲ್ಲ.

ಇಷ್ಟೆಲ್ಲಾ ಪೀಠಿಕೆ ಕೇಳಿದ ಮೇಲೆ ಅದು ಯಾವ ರೀತಿಯ ಕಲೆಯ ಬಗ್ಗೆ ಮಾತನಾಡುತ್ತಿರಬಹುದು ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ನೀವು ಕೂಡ ಕಲಾಭಿಮಾನಿಗಳಾಗಿದ್ದರೆ ಈ ವಿಡಿಯೋ ನೋಡಲೇಬೇಕು. ಹಾವು ಯಾರಿಗೂ ಇಷ್ಟವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಹಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ನಿಜವಾದ ಹಾವಿನ ಬದಲು ಒಂದು ಚಿಕ್ಕ ಹಾವಿನ ರೀತಿ ಕಾಣುವ ರಬ್ಬರ್ ಪೀಸ್ ಕಂಡರೂ ಹಾವು ಎಂದು ತಿಳಿದು ಮಾರುದ್ದ ಹಾರುವ ಜನರಿರುವ ಕಾಲದಲ್ಲಿ ಇಲ್ಲೊಬ್ಬರ 3 ಜನರ ತಂಡ ಒಂದು ಹಾವಿನ ಆಕೃತಿಯನ್ನು ಮಾಡಿದ್ದಾರೆ. ಚಿತ್ರದಲ್ಲಿ ನೀವು ಹಾವನ್ನು ನೋಡಿರಬಹುದು ಅಥವಾ ಗೋಡೆಗಳ ಮೇಲೆ ಪೇಂಟಿಗ್ ಆಗಿ ನೋಡಿರಬಹುದು ಆದರೆ ತೋಟದಲ್ಲಿ ಥೇಟ್ ಹಾವು ಮಲಗಿದ ಹಾಗೆಯೇ ಆಕೃತಿ ಮಾಡುವುದನ್ನು ನೀವು ನೋಡಿದ್ದೀರಾ? ಹಾಗಾದರೆ ಈ ವಿಡಿಯೋ ತಪ್ಪದೇ ನೋಡಿ.

ಎರಡು ಯುವಕರು ಮತ್ತು ಒಬ್ಬಳು ಯುವತಿ ಸೇರಿಕೊಂಡು ಒಂದು ತೋಟದಲ್ಲಿ ಥೇಟ್ ಹಾವಿನ ಹಾಗೆಯೇ ಕಾಣುವ ಒಂದು ಕಲಾಕೃತಿ ಮಾಡಿದ್ದಾರೆ. ಇದರಲ್ಲಿ ಏನಿದೆ ವಿಶೇಷ ಅಂತೀರಾ. ಇದು ಸಣ್ಣ ಪುಟ್ಟ ಹಾವಲ್ಲ. ಹೆಬ್ಬಾವಿಗಿಂತಲೂ ದಪ್ಪ ಮತ್ತು ಉದ್ದವಾಗಿರುವ ಹಾವು. ಈ ಹಾವಿನ ಆಕೃತಿ ಮಾಡಲು ಮಣ್ಣು, ಒಣಗಿದ ಬಾಳೆ ಎಲೆ, ಹುಲ್ಲು ಎಲ್ಲವನ್ನೂ ಸೇರಿಸಿಕೊಂಡಿದ್ದಾರೆ. ಈ ವಿಡಿಯೋ ನಿಮಗೆ ಮೊದ ಮೊದಲು ತುಂಬಾ ಫನ್ನಿ ಆಗಿದೆ ಎಂದು ಅನಿಸಿದರೂ ಕೂಡ ಮುಂದೆ ಹಾವಿನ ಆಕೃತಿ ಶುರುವಾಗುತ್ತಿದ್ದಂತೆ ಈ ವಿಡಿಯೋಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ನಿಮಗೆ ಅರಿವಾಗುತ್ತದೆ. ನೋಡ ನೋಡುತ್ತಿದ್ದಂತೆ ಹಾವಿನ ಆಕೃತಿ ಸಿದ್ದವಾಗುತ್ತದೆ ಅದಕ್ಕೆ ಹಾವಿನ ರೀತಿಯಲ್ಲಿ ಬಣ್ಣ ಬಳಿದು ಅದೇ ರೀತಿಯಲ್ಲಿ ಶೇಪ್ ನೀಡಲಾಗುತ್ತದೆ. ದೂರದಲ್ಲಿ ನಿಂತು ನೋಡಿದಾಗ ಹಾವೊಂದು ಮಲಗಿದೆ ಎಂಬ ರೀತಿಯಲ್ಲಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿ: ನೋ ವಿಡಿಯೋ ಪ್ಲೀಸ್​, ಪರ್ಸನಲ್​ ಸ್ಪೇಸ್​ ಕೊಡಿ ನಾನು ಸಂಗೀತಾಭ್ಯಾಸ ಮಾಡುತ್ತಿದ್ದೇನೆ

ಈ ವಿಡಿಯೋ ವನ್ನು g_j_mowgli__ ಎಂಬ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 1.7 ಮಿಲಿಯನ್​​​ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವು ಕಾಮೆಂಟ್ ಗಳು ಹರಿದು ಬರುತ್ತಿದೆ. ಈ ಕಲಾಕೃತಿಯನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದು ಅವರ ಸಾಹಸಕ್ಕೆ ಭೇಷ್ ಎಂದಿದ್ದಾರೆ. ಇನ್ನು ಕೆಲವರು, “ಬೆಳಿಗ್ಗೆ ಈ ಭಾಗದಲ್ಲಿ ಅಚಾನಕ್ಕಾಗಿ ವಾಕಿಂಗ್ ಅಥವಾ ಕೆಲಸಕ್ಕೆ ಬಂದವರು ಇದನ್ನು ನೋಡಿ ಬೆಚ್ಚಿ ಬೀಳದಿದ್ದರೆ ಸಾಕು!” ಎಂದಿದ್ದಾರೆ. ಮತ್ತೆ ಕೆಲವು ಮಂದಿ ಅವರ ಕಲೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಈ ರೀತಿಯ ವಿಡಿಯೋ ಹೆಚ್ಚು ಹೆಚ್ಚು ನಮ್ಮನ್ನು ತಲುಪುವಂತಾಗಲಿ ಎಂದಿದ್ದಾರೆ. ಏನೇ ಇರಲಿ ಇವರ ಪರಿಶ್ರಮಕ್ಕೆ ಮೆಚ್ಚುಗೆ ತಿಳಿಸಲೇಬೇಕು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?