AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್

ಹುಲಿರಾಯ ಪರಭಕ್ಷಕ ಎಂದು ಗುರುತಿಸಿಕೊಂಡಿರಬಹುದು. ಆದರೆ ಮನುಷ್ಯನಾಗಲೀ ಅಥವಾ ತಾಯಿಯಾಗಲೀ ಎಲ್ಲಾ ಮಕ್ಕಳಿಗೂ ತಾಯಿ ಅಂದರೆ ಅಚ್ಚು-ಮೆಚ್ಚು.

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್
ಸದ್ದಿಲ್ಲದೆ ತಾಯಿಯೊಡನೆ ಬೆಚ್ಚಗೆ ಮಲಗಿವೆ ಹುಲಿಮರಿಗಳು
Follow us
TV9 Web
| Updated By: shruti hegde

Updated on:Jun 03, 2021 | 12:09 PM

ಹುಲಿ ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಿಂದ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ವನ್ಯ ಜೀವಿಗಳ ಕೆಲವು ವಿಡಿಯೋಗಳು ಮನಗೆಲ್ಲುತ್ತವೆ. ಅದರಲ್ಲಿಯೂ ಹುಲಿರಾಯ ಗಾಂಭೀರ್ಯದ ನಡಿಗೆ ನೋಡುವುದೇ ಒಂದು ರೀತಿಯ ಖುಷಿಯಾದರೆ, ಹುಲಿ ಮರಿಗಳ ತುಂಟಾಟಗಳು ಇಷ್ಟವಾಗುತ್ತವೆ.

ಇದೀಗ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಹುಲಿಮರಿಗಳು ಶಾಂತವಾಗಿ ಮಲಗಿವೆ. ತನ್ನ ತಾಯಿ ಬಂದು ಅವರ ಪಕ್ಕದಲ್ಲಿ ಮಲಗಿದಾಕ್ಷಣವೇ ಸುತ್ತಲಿರುವ ಎಲ್ಲಾ ಹುಲಿ ಮರಿಗಳೂ ಓಡೋಡಿ ಬರುತ್ತಿವೆ. ಒಂದಾದ ಮೇಲೊಂದು ಬಂದು ತಾಯಿಯ ಮಡಿಲಲ್ಲಿ ಮಲಗುತ್ತಿವೆ. ಬೆಜ್ಜಗೆ ತಾಯಿಯನ್ನು ತಪ್ಪಿ ಮಲಗಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಹುಲಿರಾಯ ಪರಭಕ್ಷಕ ಎಂದು ಗುರುತಿಸಿಕೊಂಡಿರಬಹುದು. ಆದರೆ ಮನುಷ್ಯನಾಗಲೀ ಅಥವಾ ಪ್ರಾಣಿಯಾಗಲಿ ಎಲ್ಲಾ ಮಕ್ಕಳಿಗೂ ತನ್ನ ತಾಯಿ ಅಂದರೆ ಅಚ್ಚು-ಮೆಚ್ಚು. ತಾಯಿಯ ಮಡಿಲಿನಲ್ಲಿ ಮಲಗಲು ಎಲ್ಲಾ ಮಕ್ಕಳೂ ಹೆಚ್ಚು ಇಷ್ಟಪಡುತ್ತಾರೆ. ಮನುಷ್ಯನಾಗಲೀ ಅಥವಾ ಪ್ರಾಣಿಯಾಗಲೀ ತಾಯಿಯ ಮೇಲಿನ ಮಮತೆಯ ಭಾವನೆ ಒಂದೇ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 57,000 ಕ್ಕೂ ಹೆಚ್ಚು ವೀಕ್ಷಣೆಗಳು ಗಳಿಸಿಕೊಂಡಿದೆ. 3000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ‘ಕೊನೆಗೆ ಎಲ್ಲ ಮರಿಗಳೂ ತಾಯಿಯ ಬಳಿಗೇ ಬರುತ್ತಾರೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್​ ಮಾಡಲಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜಗತ್ತಿಗೆ ಅಪಾಯಕಾರಿ ಎನಿಸಿಕೊಳ್ಳುತ್ತದೆ ಹುಲಿ, ಆದರೆ ಮಕ್ಕಳಿಗೆ ಪ್ರೀತಿಯ ತಾಯಿ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಹಳ ಸುಂದರ ದೃಶ್ಯವಿದು! ಎಂದು ಇನ್ನೋರ್ವರು ಹೇಳಿದ್ದಾರೆ. ಪೃಕ್ರತಿಯ ಕೆಲವು ಅದ್ಭುತ ನೋಟಗಳು ಮನಗೆಲ್ಲುತ್ತದೆ ಎಂಬುದು ನೆಟ್ಟಿಗರ ಅನಿಸಿಕೆ.

ಇದನ್ನೂ ಓದಿ: 

Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್​ ಏನಾಯ್ತು?​

Published On - 12:08 pm, Thu, 3 June 21

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ