AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !

ಯುಎಸ್​ನ ಮದ್ಯಪ್ರಿಯರು ಉಕ್ರೇನ್​ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಉಪಕ್ರಮವನ್ನು ಶುರುಮಾಡಿದ್ದು ಲಾಸ್​ ವೇಗಾಸ್​​ನಲ್ಲಿರುವ ಒಂದು ಬಾರ್​.

Video: ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುಎಸ್​​ನಲ್ಲಿ ಭರ್ಜರಿ ಮಾರಾಟವಾಗ್ತಿದೆ ರಷ್ಯಾ ವೋಡ್ಕಾ; ಚರಂಡಿ ತುಂಬಿ ಹರಿಯುತ್ತಿದೆ !
ರಷ್ಯಾದ ವೋಡ್ಕಾ
TV9 Web
| Edited By: |

Updated on: Feb 28, 2022 | 5:14 PM

Share

ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದ ಬೆನ್ನಲ್ಲೇ ಯುನೈಟೆಡ್​ ಸ್ಟೇಟ್ಸ್​​ನ (United States) ಲಾಸ್​ ವೇಗಾಸ್​​ನಲ್ಲಿ ರಷ್ಯಾ ತಯಾರಿತ ವೋಡ್ಕಾ ಖರೀದಿಸುವವರ ಸಂಖ್ಯೆ ಮಿತಿಮೀರಿದೆ. ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರುವುದನ್ನು ಯುಎಸ್​ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದೆ. ಹೀಗಿದ್ದ ಮೇಲೆ ಅಲ್ಲಿನ ಜನರು ಯಾಕೆ ರಷ್ಯಾ ವೋಡ್ಕಾವನ್ನು ಈ ಪರಿ ಖರೀದಿಸುತ್ತಿದ್ದಾರೆ? ಖುಷಿಗಾಗಿ ವೋಡ್ಕಾ ಖರೀದಿ ಮಾಡ್ತಿದ್ದಾರಾ? ಎಂಬಿತ್ಯಾದಿ ಪ್ರಶ್ನೆ ಮೂಡ್ತಿರಬಹುದು. ಆದರೆ ವಾಸ್ತವ ಎಂದರೆ, ಜನರು ತಾವು ಖರೀದಿಸಿದ ವೋಡ್ಕಾವನ್ನು ಚರಂಡಿಗೆ ಸುರಿಯುತ್ತಿದ್ದಾರೆ. ಈ ಮೂಲಕ ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣವನ್ನು ವಿರೋಧಿಸುತ್ತಿದ್ದಾರೆ.

ಯುಎಸ್​ನ ಮದ್ಯಪ್ರಿಯರು ಉಕ್ರೇನ್​ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ಉಪಕ್ರಮವನ್ನು ಶುರುಮಾಡಿದ್ದು ಲಾಸ್​ ವೇಗಾಸ್​​ನಲ್ಲಿರುವ ಒಂದು ಬಾರ್​. ಮತ್ತೇನೂ ಅಲ್ಲ, ಇವರೆಲ್ಲ ಪುಕ್ಕಟೆಯಾಗಿ ರಷ್ಯಾ ವೋಡ್ಕಾವನ್ನು ಹಾಳುಗೆಡವುತ್ತಿಲ್ಲ. ಹಣಕೊಟ್ಟು ಖರೀದಿ ಮಾಡಿ, ನಂತರ ಅದನ್ನು ತೆಗೆದುಕೊಂಡು ಹೋಗಿ ಚರಂಡಿಗೆ ಸುರಿಯುತ್ತಿದ್ದಾರೆ. ನಂತರ ಇವರೆಲ್ಲ ಪಾವತಿಸಿದ ಹಣವನ್ನು ಉಕ್ರೇನ್​​ಗೆ ಮಾನವೀಯ ನೆರವಿನ ರೂಪದಲ್ಲಿ ಕಳಿಸಲು ಬಾರ್ ನಿರ್ಧಾರ ಮಾಡಿದೆ. ಪುಟಿನ್​ ಉಕ್ರೇನ್​​ನ್ನು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅವರು ಅಲ್ಲಿಂದ ಹೋಗುವವರೆಗೂ ಹೀಗೆ ರಷ್ಯಾದ ವೋಡ್ಕಾ ಖರೀದಿಸಿ, ಚೆಲ್ಲುವ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಲಾಸ್​ ವೇಗಾಸ್ ಬಾರ್ ಮಾಲೀಕರು ಹೇಳಿದ್ದಾಗಿ ಫಾಕ್ಸ್​ ನ್ಯೂಸ್ ವರದಿ ಮಾಡಿದೆ. ಅಷ್ಟೇ ಅಲ್ಲ, ಯುಎಸ್​ನಲ್ಲಿ ರಷ್ಯಾ ವೋಡ್ಕಾ ನಿರ್ಬಂಧಿಸಿ ಎಂಬ ಅಭಿಯಾನ ಟ್ವಿಟರ್​​ನಲ್ಲೂ ಶುರುವಾಗಿದೆ.

ಇದನ್ನೂ ಓದಿ: ಬೆನ್ನತ್ತಿ ಬಂತು ಯುದ್ಧ; ಅಫ್ಘಾನ್​​ನಿಂದ ತಪ್ಪಿಸಿಕೊಂಡು ಉಕ್ರೇನ್​ಗೆ ಬಂದಿದ್ದ ವ್ಯಕ್ತಿಯ ದುರದೃಷ್ಟದ ಕತೆ ಇದು

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್