AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Turkish ice cream : ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ನೆಟ್ಟಿಗರೊಬ್ಬರು. ನನ್ನ ತಂದೆತಾಯಿ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ ಮತ್ತೊಬ್ಬರು.

‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಟರ್ಕಿಷ್​ ಐಸ್ಕ್ರೀಮ್​ ತಂತ್ರಕ್ಕೆ ಕೋಪಗೊಂಡ ಬಾಲಕಿ
TV9 Web
| Edited By: ಶ್ರೀದೇವಿ ಕಳಸದ|

Updated on:Nov 23, 2022 | 4:12 PM

Share

Viral Video : ಪ್ರದರ್ಶನ ಮೇಳದಲ್ಲಿ, ಐಸ್ಕ್ರೀಮ್​ ಪಾರ್ಲರ್​ಗಳೆದುರಲ್ಲಿ, ಉತ್ಸವಗಳಲ್ಲಿ ಹೀಗೆ ಅನೇಕ ಕಡೆ ಐಸ್ಕ್ರೀಮ್​ವಾಲಾಗಳ ಈ ಟ್ರಿಕ್​ ನೋಡಿರುತ್ತೀರಿ. ಕೆಲವೊಮ್ಮೆ ಈ ಟ್ರಿಕ್​ಗೆ ನೀವು ಮುಖಾಮುಖಿಯಾಗಿರುತ್ತೀರಿ. ಇಲ್ಲೊಬ್ಬ ಟರ್ಕಿಷ್​ ಐಸ್ಕ್ರೀಮ್​ವಾಲಾ ಪುಟ್ಟ ಪೋರಿಯೊಬ್ಬಳಿಗೆ ಮಜಾ ಮಾಡಲು ಹೋಗಿ ನೆಟ್ಟಿಗರಿಂದ ಸರಿಯಾಗಿ ಬಯ್ಯಿಸಿಕೊಂಡಿದ್ದಾನೆ. ಎಲ್ಲ ಮಕ್ಕಳ ಮನಸ್ಸೂ ಒಂದೇ ಥರ ಇರುವುದಿಲ್ಲ ಅಲ್ಲವಾ? ಅದರಲ್ಲೂ ಐಸ್ಕ್ರೀಮ್ ಮುಂದೆ ಇಟ್ಟುಕೊಂಡು ಹೀಗೆ ಆಟವಾಡಿಸಲು ಹೋದರೆ ಏನಾಗುತ್ತದೆ? ನೋಡಿ ವಿಡಿಯೋ.

ಸಾಮಾನ್ಯವಾಗಿ ಈ ಟರ್ಕಿಷ್​  ಐಸ್ಕ್ರೀಮ್​ ಟ್ರಿಕ್​ ದೊಡ್ಡವರ ತಾಳ್ಮೆಯನ್ನೇ ಕಂಗೆಡಿಸುತ್ತದೆ. ಇನ್ನು ಪಂಚಪ್ರಾಣದಂತೆ ಪ್ರೀತಿಸುವ ಮಕ್ಕಳ ಮನಸ್ಸನ್ನು ಗಾಸಿ ಗೊಳಿಸದೇ ಇದ್ದೀತೆ? ಈ ವಿಡಿಯೋ ಅನ್ನು 84,000 ಜನರು ನೋಡಿದ್ದಾರೆ. ಇವರಲ್ಲಿ ಅನೇಕರ ಕೆಂಗಣ್ಣಿಗೆ ಐಸ್ಕ್ರೀಮ್​ವಾಲಾ ಗುರಿಯಾಗಿದ್ದಾನೆ.

ತಮಾಷೆ ಎನ್ನುವುದು ಒಂದೋ ಎರಡೋ ಸಲ. ಅದು ಜಾಸ್ತಿಯಾದರೆ ಇನ್ನೇನಾಗುತ್ತದೆ? ಚಿಕ್ಕಮಗುವನ್ನು ಇಷ್ಟೊಂದು ಅಳಿಸುತ್ತೀರಲ್ಲ, ಇದು ತಮಾಷೆ ಅಲ್ಲವೇ ಅಲ್ಲ ಎಂದಿದ್ದಾರೆ ಕೆಲವರು. ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ಇನ್ನೊಬ್ಬರು. ನನ್ನ ಅಪ್ಪ ಅಮ್ಮ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಈತನಕ ಎಂದಿದ್ದಾರೆ ಮಗದೊಬ್ಬರು. ಇದು ಸರಿಯಲ್ಲ ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Wed, 23 November 22

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್