‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Turkish ice cream : ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ನೆಟ್ಟಿಗರೊಬ್ಬರು. ನನ್ನ ತಂದೆತಾಯಿ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ ಮತ್ತೊಬ್ಬರು.

‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಟರ್ಕಿಷ್​ ಐಸ್ಕ್ರೀಮ್​ ತಂತ್ರಕ್ಕೆ ಕೋಪಗೊಂಡ ಬಾಲಕಿ
Follow us
| Updated By: ಶ್ರೀದೇವಿ ಕಳಸದ

Updated on:Nov 23, 2022 | 4:12 PM

Viral Video : ಪ್ರದರ್ಶನ ಮೇಳದಲ್ಲಿ, ಐಸ್ಕ್ರೀಮ್​ ಪಾರ್ಲರ್​ಗಳೆದುರಲ್ಲಿ, ಉತ್ಸವಗಳಲ್ಲಿ ಹೀಗೆ ಅನೇಕ ಕಡೆ ಐಸ್ಕ್ರೀಮ್​ವಾಲಾಗಳ ಈ ಟ್ರಿಕ್​ ನೋಡಿರುತ್ತೀರಿ. ಕೆಲವೊಮ್ಮೆ ಈ ಟ್ರಿಕ್​ಗೆ ನೀವು ಮುಖಾಮುಖಿಯಾಗಿರುತ್ತೀರಿ. ಇಲ್ಲೊಬ್ಬ ಟರ್ಕಿಷ್​ ಐಸ್ಕ್ರೀಮ್​ವಾಲಾ ಪುಟ್ಟ ಪೋರಿಯೊಬ್ಬಳಿಗೆ ಮಜಾ ಮಾಡಲು ಹೋಗಿ ನೆಟ್ಟಿಗರಿಂದ ಸರಿಯಾಗಿ ಬಯ್ಯಿಸಿಕೊಂಡಿದ್ದಾನೆ. ಎಲ್ಲ ಮಕ್ಕಳ ಮನಸ್ಸೂ ಒಂದೇ ಥರ ಇರುವುದಿಲ್ಲ ಅಲ್ಲವಾ? ಅದರಲ್ಲೂ ಐಸ್ಕ್ರೀಮ್ ಮುಂದೆ ಇಟ್ಟುಕೊಂಡು ಹೀಗೆ ಆಟವಾಡಿಸಲು ಹೋದರೆ ಏನಾಗುತ್ತದೆ? ನೋಡಿ ವಿಡಿಯೋ.

ಸಾಮಾನ್ಯವಾಗಿ ಈ ಟರ್ಕಿಷ್​  ಐಸ್ಕ್ರೀಮ್​ ಟ್ರಿಕ್​ ದೊಡ್ಡವರ ತಾಳ್ಮೆಯನ್ನೇ ಕಂಗೆಡಿಸುತ್ತದೆ. ಇನ್ನು ಪಂಚಪ್ರಾಣದಂತೆ ಪ್ರೀತಿಸುವ ಮಕ್ಕಳ ಮನಸ್ಸನ್ನು ಗಾಸಿ ಗೊಳಿಸದೇ ಇದ್ದೀತೆ? ಈ ವಿಡಿಯೋ ಅನ್ನು 84,000 ಜನರು ನೋಡಿದ್ದಾರೆ. ಇವರಲ್ಲಿ ಅನೇಕರ ಕೆಂಗಣ್ಣಿಗೆ ಐಸ್ಕ್ರೀಮ್​ವಾಲಾ ಗುರಿಯಾಗಿದ್ದಾನೆ.

ತಮಾಷೆ ಎನ್ನುವುದು ಒಂದೋ ಎರಡೋ ಸಲ. ಅದು ಜಾಸ್ತಿಯಾದರೆ ಇನ್ನೇನಾಗುತ್ತದೆ? ಚಿಕ್ಕಮಗುವನ್ನು ಇಷ್ಟೊಂದು ಅಳಿಸುತ್ತೀರಲ್ಲ, ಇದು ತಮಾಷೆ ಅಲ್ಲವೇ ಅಲ್ಲ ಎಂದಿದ್ದಾರೆ ಕೆಲವರು. ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ಇನ್ನೊಬ್ಬರು. ನನ್ನ ಅಪ್ಪ ಅಮ್ಮ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಈತನಕ ಎಂದಿದ್ದಾರೆ ಮಗದೊಬ್ಬರು. ಇದು ಸರಿಯಲ್ಲ ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Wed, 23 November 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್