AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Turkish ice cream : ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ನೆಟ್ಟಿಗರೊಬ್ಬರು. ನನ್ನ ತಂದೆತಾಯಿ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಎಂದಿದ್ದಾರೆ ಮತ್ತೊಬ್ಬರು.

‘ನಿಮ್ಮ ಐಸ್ಕ್ರೀಮೇ ಬೇಡ’ ಎಲ್ಲ ಮಕ್ಕಳಿಗೂ ತಮಾಷೆ ಇಷ್ಟವಾಗುವುದಿಲ್ಲ ಐಸ್ಕ್ರೀಮಣ್ಣ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಟರ್ಕಿಷ್​ ಐಸ್ಕ್ರೀಮ್​ ತಂತ್ರಕ್ಕೆ ಕೋಪಗೊಂಡ ಬಾಲಕಿ
TV9 Web
| Edited By: |

Updated on:Nov 23, 2022 | 4:12 PM

Share

Viral Video : ಪ್ರದರ್ಶನ ಮೇಳದಲ್ಲಿ, ಐಸ್ಕ್ರೀಮ್​ ಪಾರ್ಲರ್​ಗಳೆದುರಲ್ಲಿ, ಉತ್ಸವಗಳಲ್ಲಿ ಹೀಗೆ ಅನೇಕ ಕಡೆ ಐಸ್ಕ್ರೀಮ್​ವಾಲಾಗಳ ಈ ಟ್ರಿಕ್​ ನೋಡಿರುತ್ತೀರಿ. ಕೆಲವೊಮ್ಮೆ ಈ ಟ್ರಿಕ್​ಗೆ ನೀವು ಮುಖಾಮುಖಿಯಾಗಿರುತ್ತೀರಿ. ಇಲ್ಲೊಬ್ಬ ಟರ್ಕಿಷ್​ ಐಸ್ಕ್ರೀಮ್​ವಾಲಾ ಪುಟ್ಟ ಪೋರಿಯೊಬ್ಬಳಿಗೆ ಮಜಾ ಮಾಡಲು ಹೋಗಿ ನೆಟ್ಟಿಗರಿಂದ ಸರಿಯಾಗಿ ಬಯ್ಯಿಸಿಕೊಂಡಿದ್ದಾನೆ. ಎಲ್ಲ ಮಕ್ಕಳ ಮನಸ್ಸೂ ಒಂದೇ ಥರ ಇರುವುದಿಲ್ಲ ಅಲ್ಲವಾ? ಅದರಲ್ಲೂ ಐಸ್ಕ್ರೀಮ್ ಮುಂದೆ ಇಟ್ಟುಕೊಂಡು ಹೀಗೆ ಆಟವಾಡಿಸಲು ಹೋದರೆ ಏನಾಗುತ್ತದೆ? ನೋಡಿ ವಿಡಿಯೋ.

ಸಾಮಾನ್ಯವಾಗಿ ಈ ಟರ್ಕಿಷ್​  ಐಸ್ಕ್ರೀಮ್​ ಟ್ರಿಕ್​ ದೊಡ್ಡವರ ತಾಳ್ಮೆಯನ್ನೇ ಕಂಗೆಡಿಸುತ್ತದೆ. ಇನ್ನು ಪಂಚಪ್ರಾಣದಂತೆ ಪ್ರೀತಿಸುವ ಮಕ್ಕಳ ಮನಸ್ಸನ್ನು ಗಾಸಿ ಗೊಳಿಸದೇ ಇದ್ದೀತೆ? ಈ ವಿಡಿಯೋ ಅನ್ನು 84,000 ಜನರು ನೋಡಿದ್ದಾರೆ. ಇವರಲ್ಲಿ ಅನೇಕರ ಕೆಂಗಣ್ಣಿಗೆ ಐಸ್ಕ್ರೀಮ್​ವಾಲಾ ಗುರಿಯಾಗಿದ್ದಾನೆ.

ತಮಾಷೆ ಎನ್ನುವುದು ಒಂದೋ ಎರಡೋ ಸಲ. ಅದು ಜಾಸ್ತಿಯಾದರೆ ಇನ್ನೇನಾಗುತ್ತದೆ? ಚಿಕ್ಕಮಗುವನ್ನು ಇಷ್ಟೊಂದು ಅಳಿಸುತ್ತೀರಲ್ಲ, ಇದು ತಮಾಷೆ ಅಲ್ಲವೇ ಅಲ್ಲ ಎಂದಿದ್ದಾರೆ ಕೆಲವರು. ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್​ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ಇನ್ನೊಬ್ಬರು. ನನ್ನ ಅಪ್ಪ ಅಮ್ಮ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಈತನಕ ಎಂದಿದ್ದಾರೆ ಮಗದೊಬ್ಬರು. ಇದು ಸರಿಯಲ್ಲ ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:12 pm, Wed, 23 November 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ