AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?

Alligator : ನಿಮಗೆ ತಿಳಿದಂತೆ ನೀವು ಮಾಡಲು ಹೋದರೆ, ಕಾಡುಪ್ರಾಣಿಗಳು ತಮಗೆ ತಿಳಿದಂತೆಯೇ ಮಾಡುತ್ತವೆ. ನೋಡಿ ಈ ಭಯಾನಕ ವಿಡಿಯೋ.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?
ಏನಾಗುತ್ತದೆ ಮುಂದೆ? ವಿಡಿಯೋ ನೋಡಿ.
TV9 Web
| Edited By: ಶ್ರೀದೇವಿ ಕಳಸದ|

Updated on:Nov 23, 2022 | 2:41 PM

Share

Viral Video : ಇದೊಂದು ಅತ್ಯಂತ ಅಪಾಯಕಾರಿ ವಿಡಿಯೋ. ನೆಟ್ಟಿಗರಂತೂ ಪದೇಪದೆ ನೋಡುತ್ತ ಬೆಚ್ಚಿಬೀಳುತ್ತಿದ್ದಾರೆ. ಮೊಸಳೆಗಳು ಒಮ್ಮೆ ಹಿಡಿದರೆ ಗೊತ್ತಲ್ಲ? ಬಾಯಿಗೆ ಸಿಕ್ಕವರು ಜೀವ ಬಿಡುವುದೇ. ಆದರೆ ಈ ವಯಸ್ಸಾದ ಮನುಷ್ಯ ಮಾತ್ರ ಧೈರ್ಯ ಮಾಡಿ ಅದನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ದೊಡ್ಡ ಭಯಂಕರ ಮೊಸಳೆ ಮುಖಕ್ಕೆ ಮೊದಲು ಶರ್ಟ್​ ಎಸೆಯುತ್ತಾನೆ. ನಂತರ ನಿಧಾನಕ್ಕೆ ಅದರ ಬಳಿ ನಡೆದು ಅದನ್ನು ಹಿಡಿಯಲು ಹೋಗುತ್ತಾನೆ. ಮುಂದೇನಾಗುತ್ತದೆ ನೋಡಿ ಈ ವಿಡಿಯೋದಲ್ಲಿ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವೃದ್ಧ ಭಯವೇ ಇಲ್ಲವೆಂಬಂತೆ ಇದನ್ನು ಹಿಡಿದು ಬಲೆಗೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ಮೊಸಳೆ ಅವನ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಕಂಡೂಕಂಡೂ ತನ್ನ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಾನೆ ಈ ಮನುಷ್ಯ. ಹೇಗೋ ಉರುಳಾಡಿ ಬಿದ್ದು ಆ ದೈತ್ಯ ಮೊಸಳೆಯಿಂದ ಬಿಡಿಸಿಕೊಂಡು ಸದ್ಯ ಪಾರಾಗುತ್ತಾನೆ.

ಇದನ್ನೂ ಓದಿ
Image
ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್
Image
1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು
Image
6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
Image
‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

ತರಬೇತಿಗೆ ಒಳಪಡಿಸಿದ್ದರೆ ಮಾತ್ರ ಇಂಥ ಅಪಾಯಕಾರಿ ಪ್ರಾಣಿಗಳ ಹತ್ತಿರ ಹೋಗಬಹುದು. ಆದರೆ ಇಂಥ ಅಪರಿಚಿತ ಪ್ರಾಣಿಗಳನ್ನು ಬಲೆಗೆ ಬೀಳಿಸಲು ನುರಿತ ತಜ್ಞರೇ ಬೇಕು. ಅಂಗಿಯನ್ನು ಯಾಕೆ ಅದರ ಮೇಲೆ ಎಸೆದ ಈ ವ್ಯಕ್ತಿ ಎನ್ನುವುದೇ ತಿಳಿಯುತ್ತಿಲ್ಲವಲ್ಲ ಎಂದಿದ್ದಾರೆ ನೆಟ್ಟಿಗರು. ಈ ವ್ಯಕ್ತಿ ಅದೃಷ್ಟಶಾಲಿ. ಕಾಲೋ ಕೈಯನ್ನೋ ಅದು ಎಳೆದುಕೊಂಡಿದ್ದರೆ ಅಷ್ಟೇ ಅವನ ಕಥೆ! ಎಂದಿದ್ದಾರೆ ಕೆಲವರು.

ಪರಿಣತರ ಮಾರ್ಗದರ್ಶನ ಮತ್ತು ಪರಿಣತಿ ಹೊಂದಿಲ್ಲದೆ ಎಂದೂ ಇಂಥ ಕೆಲಸಗಳಿಗೆ ಕೈಹಾಕಬೇಡಿ. ಇದು ಜೀವಕ್ಕೇ ಅಪಾಯ.

ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:34 pm, Wed, 23 November 22

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ