AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?

Alligator : ನಿಮಗೆ ತಿಳಿದಂತೆ ನೀವು ಮಾಡಲು ಹೋದರೆ, ಕಾಡುಪ್ರಾಣಿಗಳು ತಮಗೆ ತಿಳಿದಂತೆಯೇ ಮಾಡುತ್ತವೆ. ನೋಡಿ ಈ ಭಯಾನಕ ವಿಡಿಯೋ.

ಮೊಸಳೆಯ ಮುಖಕ್ಕೆ ಶರ್ಟ್​ ಎಸೆಯುತ್ತಿದ್ದಂತೆ ಮುಂದೇನಾಗುತ್ತದೆ?
ಏನಾಗುತ್ತದೆ ಮುಂದೆ? ವಿಡಿಯೋ ನೋಡಿ.
TV9 Web
| Edited By: |

Updated on:Nov 23, 2022 | 2:41 PM

Share

Viral Video : ಇದೊಂದು ಅತ್ಯಂತ ಅಪಾಯಕಾರಿ ವಿಡಿಯೋ. ನೆಟ್ಟಿಗರಂತೂ ಪದೇಪದೆ ನೋಡುತ್ತ ಬೆಚ್ಚಿಬೀಳುತ್ತಿದ್ದಾರೆ. ಮೊಸಳೆಗಳು ಒಮ್ಮೆ ಹಿಡಿದರೆ ಗೊತ್ತಲ್ಲ? ಬಾಯಿಗೆ ಸಿಕ್ಕವರು ಜೀವ ಬಿಡುವುದೇ. ಆದರೆ ಈ ವಯಸ್ಸಾದ ಮನುಷ್ಯ ಮಾತ್ರ ಧೈರ್ಯ ಮಾಡಿ ಅದನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ದೊಡ್ಡ ಭಯಂಕರ ಮೊಸಳೆ ಮುಖಕ್ಕೆ ಮೊದಲು ಶರ್ಟ್​ ಎಸೆಯುತ್ತಾನೆ. ನಂತರ ನಿಧಾನಕ್ಕೆ ಅದರ ಬಳಿ ನಡೆದು ಅದನ್ನು ಹಿಡಿಯಲು ಹೋಗುತ್ತಾನೆ. ಮುಂದೇನಾಗುತ್ತದೆ ನೋಡಿ ಈ ವಿಡಿಯೋದಲ್ಲಿ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವೃದ್ಧ ಭಯವೇ ಇಲ್ಲವೆಂಬಂತೆ ಇದನ್ನು ಹಿಡಿದು ಬಲೆಗೆ ಹಾಕಲು ಪ್ರಯತ್ನಿಸುತ್ತಾನೆ. ಆದರೆ ಮೊಸಳೆ ಅವನ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಕಂಡೂಕಂಡೂ ತನ್ನ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಾನೆ ಈ ಮನುಷ್ಯ. ಹೇಗೋ ಉರುಳಾಡಿ ಬಿದ್ದು ಆ ದೈತ್ಯ ಮೊಸಳೆಯಿಂದ ಬಿಡಿಸಿಕೊಂಡು ಸದ್ಯ ಪಾರಾಗುತ್ತಾನೆ.

ಇದನ್ನೂ ಓದಿ
Image
ಕನ್ನಡವನ್ನೇ ಜಪಿಸುತ್ತಿರುವ ಜರ್ಮನ್​ನ ಬೆಡಗಿ ಜೆನ್ನಿಫರ್
Image
1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು
Image
6 ಜನ 2 ನಾಯಿಗಳೊಂದಿಗೆ ಬೈಕ್​ ಪ್ರಯಾಣ; ದಂಡಕಟ್ಟಲು ಸಾಲ ಮಾಡಬೇಕಾಗುತ್ತದೆ ಎಂದ ನೆಟ್ಟಿಗರು
Image
‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

ತರಬೇತಿಗೆ ಒಳಪಡಿಸಿದ್ದರೆ ಮಾತ್ರ ಇಂಥ ಅಪಾಯಕಾರಿ ಪ್ರಾಣಿಗಳ ಹತ್ತಿರ ಹೋಗಬಹುದು. ಆದರೆ ಇಂಥ ಅಪರಿಚಿತ ಪ್ರಾಣಿಗಳನ್ನು ಬಲೆಗೆ ಬೀಳಿಸಲು ನುರಿತ ತಜ್ಞರೇ ಬೇಕು. ಅಂಗಿಯನ್ನು ಯಾಕೆ ಅದರ ಮೇಲೆ ಎಸೆದ ಈ ವ್ಯಕ್ತಿ ಎನ್ನುವುದೇ ತಿಳಿಯುತ್ತಿಲ್ಲವಲ್ಲ ಎಂದಿದ್ದಾರೆ ನೆಟ್ಟಿಗರು. ಈ ವ್ಯಕ್ತಿ ಅದೃಷ್ಟಶಾಲಿ. ಕಾಲೋ ಕೈಯನ್ನೋ ಅದು ಎಳೆದುಕೊಂಡಿದ್ದರೆ ಅಷ್ಟೇ ಅವನ ಕಥೆ! ಎಂದಿದ್ದಾರೆ ಕೆಲವರು.

ಪರಿಣತರ ಮಾರ್ಗದರ್ಶನ ಮತ್ತು ಪರಿಣತಿ ಹೊಂದಿಲ್ಲದೆ ಎಂದೂ ಇಂಥ ಕೆಲಸಗಳಿಗೆ ಕೈಹಾಕಬೇಡಿ. ಇದು ಜೀವಕ್ಕೇ ಅಪಾಯ.

ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:34 pm, Wed, 23 November 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ