AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೈಕ್ ಆ್ಯಕ್ಸಿಡೆಂಟ್​; ಇವನ ತಪ್ಪಿಗೆ ಅವನಿಗೆ ಶಿಕ್ಷೆ, ಈ ಹುಡುಗರಿಗೆ ಸೈಡ್​ಮಿರರ್​ ಯಾಕೆ ಬೇಡ?

Highway : ಹೈವೇಯಲ್ಲಿ ಬೈಕ್​ಗಳು ಅಪಘಾತಕ್ಕೆ ಒಳಗಾಗುವುದು ಇದೇ ಕಾರಣಕ್ಕೇ. ಯಾಕೆ ಅವರು ಇಷ್ಟೊಂದು ವೇಗದಲ್ಲಿ ಸವಾರಿ ಮಾಡುತ್ತಾರೆ, ರೋಡ್ ಕಟ್ ಮಾಡುತ್ತಾರೆ ಎನ್ನುವುದೇ ತಿಳಿಯುತ್ತಿಲ್ಲ. ಪಾಪ ಆ ಇನ್ನೊಬ್ಬ ಬೈಕ್​ಸವಾರನದು ತಪ್ಪೇನಿತ್ತು? ಖಂಡಿತ ಅವ ಗಂಭೀರವಾಗಿ ಗಾಯಗೊಂಡಿರುತ್ತಾನೆ, ಪ್ರಾಣಾಪಾಯವಾಗದಿದ್ದರೆ ಸಾಕು... ಅಂತೆಲ್ಲ ಹೇಳುತ್ತಿದ್ದಾರೆ ನೆಟ್ಟಿಗರು.

Viral Video: ಬೈಕ್ ಆ್ಯಕ್ಸಿಡೆಂಟ್​; ಇವನ ತಪ್ಪಿಗೆ ಅವನಿಗೆ ಶಿಕ್ಷೆ, ಈ ಹುಡುಗರಿಗೆ ಸೈಡ್​ಮಿರರ್​ ಯಾಕೆ ಬೇಡ?
ಬೈಕ್ ಆ್ಯಕ್ಸಿಡೆಂಟ್​
ಶ್ರೀದೇವಿ ಕಳಸದ
|

Updated on: Oct 06, 2023 | 4:09 PM

Share

Bike Accident: ಬೈಕ್​ಗೆ ಸೈಡ್ ಮಿರರ್ ಇಲ್ಲ, ಇನ್ನೇನು ನಿರೀಕ್ಷಿಸಲು ಸಾಧ್ಯ? ಸೈಡ್​ ಮಿರರ್ ಹೆಣ್ಣುಮಕ್ಕಳಿಗೆ ಮಾತ್ರ, ಗಂಡುಮಕ್ಕಳಿಗಲ್ಲ ಎಂದು ನನ್ನ ಸ್ನೇಹಿತನೊಬ್ಬರ ಹೇಳಿದ್ದು ನೆನಪಾಗುತ್ತಿದೆ. ಇದು ದಂಡನಾರ್ಹ ಅಪರಾಧ. ಹೆದ್ದಾರಿಯಲ್ಲಿ ಬೈಕ್​ಗಳನ್ನು ಸಾಮಾನ್ಯವಾಗಿ ಹೀಗೆಯೇ ತಿರುಗಿಸಿಕೊಳ್ಳುತ್ತಾರೆ, ಆದ್ದರಿಂದಲೇ ಹೆಚ್ಚು ಅಪಘಾತಗಳಾಗುತ್ತವೆ. ಹೈಸ್ಪೀಡ್​ ಮತ್ತು ಎಕ್ಸ್ಪ್ರೆಸ್​ವೇಯಲ್ಲಿ ಈ ಮೂರ್ಖ ಅದು ಹೇಗೆ ಹೀಗೆ ತನ್ನ ದಾರಿಯನ್ನು ಬದಲಾಯಿಸಿದ? ಓವರ್ಟೇಕ್​ ಮಾಡಲು ಕೂಡ ನಿಯಮಗಳಿವೆಯಲ್ಲವೆ. ಇದು ಮಹಾಪರಾಧ, ಇವನಿಗೆ ಶಿಕ್ಷೆಯಾಗಬೇಕು. ಎಲ್ಲ ಸರಿ ಆ ಇನ್ನೊಬ್ಬ ಬೈಕ್​ ಸವಾರನ (Biker) ಕಥೆ ಏನಾಯಿತು? ಈ ಘಟನೆ ನಡೆದಿದ್ದು ಎಲ್ಲಿ? ಅಂತೆಲ್ಲ ನೆಟ್ಟಿಗರು ರೆಡ್ಡಿಟ್​ನ ವಿಡಿಯೋದಡಿ ಚರ್ಚಿಸಿದ್ದಾರೆ.

ಇದನ್ನೂ ಓದಿ : Viral Video: ‘ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?’ ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​

6 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 400 ಜನರು ಲೈಕ್ ಮಾಡಿದ್ದಾರೆ. ಸುಮಾರು 80 ಜನರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಅಪಘಾತ ಭಯಂಕರವಾಗಿದೆ. ಬಹುಶಃ ಆ ಇನ್ನೊಬ್ಬ ಬೈಕ್ ಸವಾರ ನಾನಾಗಿದ್ದರೆ ಖಂಡಿತ ಈ ಭೂಮಿಯ ಮೇಲೆ ಇರುತ್ತಿರಲೇ ಇಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೈವೇ ಮೇಲೆ ಹೈಸ್ಪೀಡಿನಲ್ಲಿ ಬೈಕ್​ ಸವಾರ ರೋಡ್​ ಕಟ್ ಮಾಡಿದಾಗ

Sad that other guy had to pay the price (might have got injured bad) for this man’s stupidity. byu/Construction1ne inindianbikes

ದ್ವಿಚಕ್ರವಾಹನಗಳಿಂದ ಎರಡೂ ಕನ್ನಡಿಗಳನ್ನು ತೆಗೆಯುವ ಜನರನ್ನು ನೋಡಿ ನೋಡಿ ನಾನಂತೂ ಸುಸ್ತಾಗಿ ಹೋಗಿದ್ದೇನೆ, ಏನು ಹುಚ್ಚುತನವೋ? ಎಂದಿದ್ದಾರೆ ಒಬ್ಬರು. ಹೀಗೆ ಮಾಡುವ ಜನರು ತಮ್ಮ ಜೀವವನ್ನು ತಾವೇ ಕಳೆದುಕೊಳ್ಳುವುದು ಹೆಚ್ಚು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಕಾರ್ಮಿಕನೀಗ ಏಷ್ಯನ್ ಗೇಮ್ಸ್ ಪದಕ ವಿಜೇತ; ರಾಮ್ ಬಾಬೂ ಸ್ಫೂರ್ತಿಪಯಣ

ಈ ವಿಡಿಯೋದಲ್ಲಿ ಇನ್ನೊಬ್ಬರ ಜೀವಕ್ಕೆ ಅಪಾಯ ತಂದಿದ್ದಾನಲ್ಲ ಈ ಬೈಕ್​ ಸವಾರ ಇದಕ್ಕೇನು ಹೇಳುತ್ತೀರಿ? ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬ ಬೈಕ್ ಸವಾರ ಖಂಡಿತ ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದಿದ್ಧಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ