Viral Video: ‘ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?’ ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​

Traffic Police: ಸಂಚಾರ ನಿಯಮ ಮುರಿದವರಿಗೆ ಶಿಕ್ಷಿಸಲು ಪರ್ಯಾಯ ಮಾರ್ಗಗಳಿದ್ದವು. ಆದರೆ ಪೊಲೀಸ್ ಹೀಗೆ ಕಾರಿನಲ್ಲಿರುವ ವ್ಯಕ್ತಿಗೆ ಹೊಡೆದಿರುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಹಾಗೆಯೇ ಈ ವಿಡಿಯೋ ಚಿತ್ರೀಕರಿಸಿರುವ ಬೈಕ್​ ಸವಾರನಿಗೆ ಶಿಕ್ಷೆಯಾಯಿತೆ? ಎಂದು ಕೆಲವರು ಕೇಳಿದ್ದಾರೆ. ಈ ಘಟನೆ ಎಲ್ಲಿಯದು ಎಂದು ತಿಳಿದುಬಂದಿಲ್ಲ.

Viral Video: 'ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?' ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​
ಹಿಂದೆ ಆ್ಯಂಬುಲೆನ್ಸ್​ ಬರುತ್ತಿದ್ದರೂ ಲೇನ್ ಕಟ್ ಮಾಡಿದ ಕಾರ್ ಸವಾರ. ಅವನ ಕೆನ್ನೆಗೆ ಹೊಡೆದ ಪೊಲೀಸ್​.
Follow us
|

Updated on: Oct 06, 2023 | 3:17 PM

Ambulance : ಆಂಬ್ಯುಲೆನ್ಸ್ ಬರದಿದ್ದರೂ ಈ ರೀತಿಯ ಟ್ರಾಫಿಕ್​ನಲ್ಲಿ (Traffic) ಮಾರ್ಗವನ್ನು ತುಂಡರಿಸಬಾರದು. ಬಹುತೇಕ ಭಾರತೀಯರಿಗೆ ನೇರಮಾರ್ಗದಲ್ಲಿ ಚಲಿಸುವುದು ಅಸಾಧ್ಯ. ನೀವು ನಿಮ್ಮ ಮಾರ್ಗದಲ್ಲಿ ಹೋಗುತ್ತಿದ್ದರೂ ಹಿಂದಿರುವ ಮೂರ್ಖರು ಹಾರ್ನ್ ಮಾಡಿ ಶಾಂತಿಭಂಗ ಮಾಡುತ್ತಾರೆ. ಅಷ್ಟೇ ಏಕೆ, ನಿಮ್ಮನ್ನು ಹಿಂದಿಕ್ಕಿ ತಾವು ಹೀಗೆ ಮುಂದೆ ಹೋಗುತ್ತಾರೆ. ಆ್ಯಂಬುಲೆನ್ಸ್​ ತಡೆದರೆ ರೂ. 10,000 ದಂಡವಿದೆ. ಪೊಲೀಸರಿಂದ  ಒಂದು ಏಟು ತಿಂದು ಪಾರಾಗಿದ್ದಾನೆ ಈ ಚಾಲಕ. ಆದರೂ ಪೊಲೀಸ್​ ದಂಡವನ್ನು ಹಾಕಬೇಕಿತ್ತು. ಈ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಬೈಕ್ ಸವಾರ ಕೂಡ ಲೇನ್​ ಕಟ್ ಮಾಡಿಲ್ಲವೆ, ಅವನಿಗೆ ದಂಡ ಇಲ್ಲವೇ… ಈ ವಿಡಿಯೋ ನೋಡಿದ ರೆಡ್ಡಿಟ್​ನ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಸಿಡ್ನಿ; ಹಾಸ್ಟೆಲ್​ನಲ್ಲಿ ಎಲೆಕ್ಟ್ರಿಕ್​ ಬೈಕ್​ ಬ್ಯಾಟರಿ ಸ್ಫೋಟ, ಪಾರಾದ ಪ್ರವಾಸಿಗರು

4 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 800ಕ್ಕೂ ಹೆಚ್ಚು ಜನರು ನೋಡಿದ್ದಾರೆ. 120 ಜನರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್​ ಹೀಗೆ ಅವನನ್ನು ಹೊಡೆದದ್ದು ತಪ್ಪು ಎಂದು ಕೆಲವರು. ಬೈಕ್​ ಸವಾರನಿಗೂ ಇದೇ ಗತಿ ಕಾಣಿಸಬೇಕಿತ್ತು ಅವನೂ ಲೇನ್ ಕಟ್ ಮಾಡಿದ್ಧಾನೆ ಎಂದು ಕೆಲವರು. ಏನೇ ಆಗಲಿ ಇಬ್ಬರಿಗೂ ದಂಡ ಹಾಕಬೇಕಿತ್ತು ಎಂದು ಹಲವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಿಂದೆ ಆ್ಯಂಬುಲೆನ್ಸ್​ ಇದ್ದರೂ ಲೇನ್ ಕಟ್ ಮಾಡಿದ ಕಾರಿನ ವಿಡಿಯೋ

Ambulance was coming and the car tried to cut lane. byu/kuzutrash7 inCarsIndia

ಪೊಲೀಸ್​ ದಕ್ಷತೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು, ಅವನನ್ನು ನಿಯಂತ್ರಿಸಲು ಮತ್ತು ಶಿಕ್ಷಿಸಲು ಕಾನೂನಿನಲ್ಲಿ ಮಾರ್ಗಗಳಿವೆ ಎಂದಿದ್ದಾರೆ ಒಬ್ಬರು. ಗದರಿಸಬಹುದಿತ್ತು, ಭಾರೀ ದಂಡ ವಿಧಿಸಬಹುದಿತ್ತು. ಆದರೆ ಹೀಗೆ ಮಾಡಿರುವುದು ಅಪರಾಧ ಎಂದಿದ್ದಾರೆ ಇನ್ನೊಬ್ಬರು. ಇದು ಯಾವ ಊರಿನ ವಿಡಿಯೋ ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ವಿಡಿಯೋ ಎಡಿಟ್ ಮಾಡಿ ಹಾಕಲಾಗಿದೆ, ನಾನು ಪೂರ್ತಿ ವಿಡಿಯೋ ನೋಡಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ‘ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ’

ಈ ವಿಡಿಯೋ ಚಿತ್ರೀಕರಿಸುತ್ತಿರುವ ಬೈಕ್​ ಸವಾರ ಮುಂದಿನ ಏಟು ತನಗೇ ಎಂದುಕೊಂಡು ತಕ್ಷಣವೇ ರೆಕಾರ್ಡ್ ಮಾಡುವುದನ್ನು ನಿಲ್ಲಿಸಿರಬೇಕು ಎಂದಿದ್ಧಾರೆ ಒಬ್ಬರು. ಈ ಬೈಕ್​ನವನಿಗೂ ಶಿಕ್ಷೆಯಾಗಬೇಕು, ಪೊಲೀಸರಿಗೂ ಮತ್ತು ಕಾರಿನವರಿಗೂ ಎಂದಿದ್ದಾರೆ ಇನ್ನೊಬ್ಬರು. ಆ್ಯಂಬುಲೆನ್ಸ್​ನಲ್ಲಿದ್ದವರ ಗತಿ ಏನಾಯಿತೋ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ