AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?’ ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​

Traffic Police: ಸಂಚಾರ ನಿಯಮ ಮುರಿದವರಿಗೆ ಶಿಕ್ಷಿಸಲು ಪರ್ಯಾಯ ಮಾರ್ಗಗಳಿದ್ದವು. ಆದರೆ ಪೊಲೀಸ್ ಹೀಗೆ ಕಾರಿನಲ್ಲಿರುವ ವ್ಯಕ್ತಿಗೆ ಹೊಡೆದಿರುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಹಾಗೆಯೇ ಈ ವಿಡಿಯೋ ಚಿತ್ರೀಕರಿಸಿರುವ ಬೈಕ್​ ಸವಾರನಿಗೆ ಶಿಕ್ಷೆಯಾಯಿತೆ? ಎಂದು ಕೆಲವರು ಕೇಳಿದ್ದಾರೆ. ಈ ಘಟನೆ ಎಲ್ಲಿಯದು ಎಂದು ತಿಳಿದುಬಂದಿಲ್ಲ.

Viral Video: 'ಆ್ಯಂಬುಲೆನ್ಸ್​ ಬರುತ್ತಿರುವುದು ಕಾಣುತ್ತಿಲ್ಲವಾ?' ಕಾರಿನವನ ಕಪಾಳಿಗೆ ಹೊಡೆದ ಪೊಲೀಸ್​
ಹಿಂದೆ ಆ್ಯಂಬುಲೆನ್ಸ್​ ಬರುತ್ತಿದ್ದರೂ ಲೇನ್ ಕಟ್ ಮಾಡಿದ ಕಾರ್ ಸವಾರ. ಅವನ ಕೆನ್ನೆಗೆ ಹೊಡೆದ ಪೊಲೀಸ್​.
ಶ್ರೀದೇವಿ ಕಳಸದ
|

Updated on: Oct 06, 2023 | 3:17 PM

Share

Ambulance : ಆಂಬ್ಯುಲೆನ್ಸ್ ಬರದಿದ್ದರೂ ಈ ರೀತಿಯ ಟ್ರಾಫಿಕ್​ನಲ್ಲಿ (Traffic) ಮಾರ್ಗವನ್ನು ತುಂಡರಿಸಬಾರದು. ಬಹುತೇಕ ಭಾರತೀಯರಿಗೆ ನೇರಮಾರ್ಗದಲ್ಲಿ ಚಲಿಸುವುದು ಅಸಾಧ್ಯ. ನೀವು ನಿಮ್ಮ ಮಾರ್ಗದಲ್ಲಿ ಹೋಗುತ್ತಿದ್ದರೂ ಹಿಂದಿರುವ ಮೂರ್ಖರು ಹಾರ್ನ್ ಮಾಡಿ ಶಾಂತಿಭಂಗ ಮಾಡುತ್ತಾರೆ. ಅಷ್ಟೇ ಏಕೆ, ನಿಮ್ಮನ್ನು ಹಿಂದಿಕ್ಕಿ ತಾವು ಹೀಗೆ ಮುಂದೆ ಹೋಗುತ್ತಾರೆ. ಆ್ಯಂಬುಲೆನ್ಸ್​ ತಡೆದರೆ ರೂ. 10,000 ದಂಡವಿದೆ. ಪೊಲೀಸರಿಂದ  ಒಂದು ಏಟು ತಿಂದು ಪಾರಾಗಿದ್ದಾನೆ ಈ ಚಾಲಕ. ಆದರೂ ಪೊಲೀಸ್​ ದಂಡವನ್ನು ಹಾಕಬೇಕಿತ್ತು. ಈ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ಬೈಕ್ ಸವಾರ ಕೂಡ ಲೇನ್​ ಕಟ್ ಮಾಡಿಲ್ಲವೆ, ಅವನಿಗೆ ದಂಡ ಇಲ್ಲವೇ… ಈ ವಿಡಿಯೋ ನೋಡಿದ ರೆಡ್ಡಿಟ್​ನ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಸಿಡ್ನಿ; ಹಾಸ್ಟೆಲ್​ನಲ್ಲಿ ಎಲೆಕ್ಟ್ರಿಕ್​ ಬೈಕ್​ ಬ್ಯಾಟರಿ ಸ್ಫೋಟ, ಪಾರಾದ ಪ್ರವಾಸಿಗರು

4 ಗಂಟೆಗಳ ಹಿಂದೆ ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 800ಕ್ಕೂ ಹೆಚ್ಚು ಜನರು ನೋಡಿದ್ದಾರೆ. 120 ಜನರು ಪ್ರತಿಕ್ರಿಯಿಸಿದ್ದಾರೆ. ಪೊಲೀಸ್​ ಹೀಗೆ ಅವನನ್ನು ಹೊಡೆದದ್ದು ತಪ್ಪು ಎಂದು ಕೆಲವರು. ಬೈಕ್​ ಸವಾರನಿಗೂ ಇದೇ ಗತಿ ಕಾಣಿಸಬೇಕಿತ್ತು ಅವನೂ ಲೇನ್ ಕಟ್ ಮಾಡಿದ್ಧಾನೆ ಎಂದು ಕೆಲವರು. ಏನೇ ಆಗಲಿ ಇಬ್ಬರಿಗೂ ದಂಡ ಹಾಕಬೇಕಿತ್ತು ಎಂದು ಹಲವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಿಂದೆ ಆ್ಯಂಬುಲೆನ್ಸ್​ ಇದ್ದರೂ ಲೇನ್ ಕಟ್ ಮಾಡಿದ ಕಾರಿನ ವಿಡಿಯೋ

Ambulance was coming and the car tried to cut lane. byu/kuzutrash7 inCarsIndia

ಪೊಲೀಸ್​ ದಕ್ಷತೆಯಿಂದ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು, ಅವನನ್ನು ನಿಯಂತ್ರಿಸಲು ಮತ್ತು ಶಿಕ್ಷಿಸಲು ಕಾನೂನಿನಲ್ಲಿ ಮಾರ್ಗಗಳಿವೆ ಎಂದಿದ್ದಾರೆ ಒಬ್ಬರು. ಗದರಿಸಬಹುದಿತ್ತು, ಭಾರೀ ದಂಡ ವಿಧಿಸಬಹುದಿತ್ತು. ಆದರೆ ಹೀಗೆ ಮಾಡಿರುವುದು ಅಪರಾಧ ಎಂದಿದ್ದಾರೆ ಇನ್ನೊಬ್ಬರು. ಇದು ಯಾವ ಊರಿನ ವಿಡಿಯೋ ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ವಿಡಿಯೋ ಎಡಿಟ್ ಮಾಡಿ ಹಾಕಲಾಗಿದೆ, ನಾನು ಪೂರ್ತಿ ವಿಡಿಯೋ ನೋಡಬೇಕಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ‘ವರ್ಷದವಳಿದ್ದಾಗ ಅತ್ಯಾಚಾರಕ್ಕೆ ಒಳಗಾದೆ, ಮೊದಲ ಸಲ ಹುಡುಗ ಎರಡನೇ ಸಲ’

ಈ ವಿಡಿಯೋ ಚಿತ್ರೀಕರಿಸುತ್ತಿರುವ ಬೈಕ್​ ಸವಾರ ಮುಂದಿನ ಏಟು ತನಗೇ ಎಂದುಕೊಂಡು ತಕ್ಷಣವೇ ರೆಕಾರ್ಡ್ ಮಾಡುವುದನ್ನು ನಿಲ್ಲಿಸಿರಬೇಕು ಎಂದಿದ್ಧಾರೆ ಒಬ್ಬರು. ಈ ಬೈಕ್​ನವನಿಗೂ ಶಿಕ್ಷೆಯಾಗಬೇಕು, ಪೊಲೀಸರಿಗೂ ಮತ್ತು ಕಾರಿನವರಿಗೂ ಎಂದಿದ್ದಾರೆ ಇನ್ನೊಬ್ಬರು. ಆ್ಯಂಬುಲೆನ್ಸ್​ನಲ್ಲಿದ್ದವರ ಗತಿ ಏನಾಯಿತೋ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ