AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆಯಲ್ಲಿ ಮಲಗಿ ಊರು ಬಿಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?

ಚೀನಾದಲ್ಲಿ ಕುಡಿದು ವಾಹನ ಚಲಾಯಿಸಿದ ವ್ಯಕ್ತಿ ಜೈಲು ಶಿಕ್ಷೆ ತಪ್ಪಿಸಲು, ಶವಪೆಟ್ಟಿಗೆಯಲ್ಲಿ ಸತ್ತಂತೆ ನಟಿಸಿ ನೂರಾರು ಕಿ.ಮೀ. ಪ್ರಯಾಣಿಸಿದ್ದ. ಕುಟುಂಬದವರ ಸಹಾಯದಿಂದ ಸಾವಿನ ನಾಟಕವಾಡಿದರೂ, ಪೊಲೀಸರ ತನಿಖೆಯಿಂದ ಆತನ ನಕಲಿ ಸಾವು ಬಯಲಾಯಿತು. ಕೊನೆಗೆ ಪೊಲೀಸರು ಆತನನ್ನು ಬಂಧಿಸಿ, ಜೈಲು ಶಿಕ್ಷೆ ವಿಧಿಸಿದರು. ಕುಟುಂಬದ ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆಯಲ್ಲಿ ಮಲಗಿ ಊರು ಬಿಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?
ಶವ ಪೆಟ್ಟಿಗೆ
ನಯನಾ ರಾಜೀವ್
|

Updated on: Jul 22, 2026 | 2:05 PM

Share

ಬೀಜಿಂಗ್, ಜುಲೈ 22: ಕುಡಿದು ವಾಹನ ಚಲಾಯಿಸಿದ್ದ ವ್ಯಕ್ತಿ ಜೈಲು(Jail) ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚೀನಾದ ವ್ಯಕ್ತಿಯೊಬ್ಬ ತಾನೇ ಸತ್ತಂತೆ ನಟಿಸಿ, ಶವ ಪೆಟ್ಟಿಗೆಯೊಳಗೆ ಮಲಗಿ ನೂರಾರು ಕಿ.ಮೀ ದೂರ ಅದರಲ್ಲಿ ಹೋಗಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಹೆನಾನ್ ಪ್ರಾಂತ್ಯದ ಅನ್ಯಾಂಗ್​ನಲ್ಲಿ ನಡೆದಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ.

ಈ ವ್ಯಕ್ತಿ ಹಿಂದೆ ಎರಡು ಬಾರಿ ಚಾಲನಾ ಪರವಾನಗಿ ಇಲ್ಲದೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ. ಕಳೆದ ವರ್ಷದ ಜನವರಿಯಲ್ಲಿ ಮೂರನೇ ಬಾರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಪೊಲೀಸರು ಈತನನ್ನು ಬಂಧಿಸಿದ್ದರು. ಚೀನಾದ ಕಠಿಣ ಕಾನೂನಿನ ಪ್ರಕಾರ, ಕುಡಿದು ವಾಹನ ಚಲಾಯಿಸುವುದು ಗುರುತರ ಅಪರಾಧವಾಗಿದ್ದು, 6 ತಿಂಗಳ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗುತ್ತದೆ. ಸಾಲದ ಸುಳಿಯಲ್ಲಿದ್ದ ಈ ವ್ಯಕ್ತಿ ಮತ್ತೊಮ್ಮೆ ಜೈಲು ಶಿಕ್ಷೆಯಾದರೆ ತನ್ನ ಜೀವನವೇ ನಾಶವಾಗುತ್ತದೆ ಎಂದು ಹೆದರಿ ಈ ಯೋಜನೆ ರೂಪಿಸಿದ್ದ.

ಸ್ವತಃ ಶವಪೆಟ್ಟಿಗೆಯನ್ನು ಮುಂಚಿತವಾಗಿಯೇ ಖರೀದಿಸಿದ ಈತ, ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿ ಸತ್ತಂತೆ ನಟಿಸಲು ಖಾಲಿ ಔಷಧ ಬಾಟಲಿಗಳನ್ನು ಹರಡಿದ್ದ. ದೇಹ ತಣ್ಣಗಾಗಿಸಲು ಕೂಲಿಂಗ್ ಉಪಕರಣಗಳನ್ನು ಬಳಸಿ, ಉಸಿರು ಬಿಗಿಹಿಡಿದು ಶವಪೆಟ್ಟಿಗೆಯಲ್ಲಿ ಮಲಗಿದ್ದ.

ಆತನ ಮುಖ ವಿರೂಪಗೊಂಡಿದೆ ಎಂದು ಹೇಳಿ ತಾಯಿ ಮತ್ತು ಅಜ್ಜಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರು. ರಾತ್ರಿಯಾಗುತ್ತಿದ್ದಂತೆ ಯಾರೂ ನೋಡದಂತೆ ಆತನನ್ನು ರಹಸ್ಯವಾಗಿ ಎಬ್ಬಿಸಿ, ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯಕ್ಕೆ ಕಳುಹಿಸಿಕೊಟ್ಟರು. ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ತಿಳಿದು ಪೊಲೀಸರು ತನಿಖೆಗೆ ಬಂದಾಗ ಅನುಮಾನ ಹುಟ್ಟಿತ್ತು.

ಮತ್ತಷ್ಟು ಓದಿ: ಅರೆಸ್ಟ್​​ ಆಗಿದ್ದ ಆರೋಪಿ 6 ಗಂಟೆಯಲ್ಲೇ ಪೊಲೀಸ್​ ಠಾಣೆಯಿಂದ ಎಸ್ಕೇಪ್! ನಿರ್ಲಕ್ಷ್ಯ ಆರೋಪ

ವ್ಯಕ್ತಿ ಸತ್ತಾಗ ಕುಟುಂಬದವರು ಯಾವುದೇ ವೈದ್ಯರಿಗಾಗಲಿ, ತುರ್ತು ಆಂಬ್ಯುಲೆನ್ಸ್‌ಗಾಗಲಿ ಕರೆ ಮಾಡಿರಲಿಲ್ಲ. ಯಾವುದೇ ಅಧಿಕೃತ ಮರಣ ಪ್ರಮಾಣಪತ್ರ ಅಥವಾ ದಹನ ದಾಖಲೆ ಇರಲಿಲ್ಲ. ತಾಯಿ ಮತ್ತು ಅಜ್ಜಿಯನ್ನು ಹೊರತುಪಡಿಸಿ ಬೇರೆ ಯಾರೂ ಶವವನ್ನು ನೋಡಿರಲಿಲ್ಲ. ಪೋಲಿಸರು ಸಿಸಿಟಿವಿ ದೃಶ್ಯಾವಳಿ, ಬ್ಯಾಂಕ್ ವಹಿವಾಟು ಹಾಗೂ ಫೋನ್ ಡೇಟಾವನ್ನು ಆಧರಿಸಿ ತನಿಖೆ ನಡೆಸಿದಾಗ ಆತ ಜೀವಂತವಾಗಿರುವುದು ಖಾತ್ರಿಯಾಯಿತು.

ಸಿಕ್ಕಿಬಿದ್ದ ಆರೋಪಿ: ತಾಯಿ-ಅಜ್ಜಿ ವಿರುದ್ಧವೂ ಕ್ರಿಮಿನಲ್ ಕೇಸ್ ದೀರ್ಘ ಶೋಧದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು. ನ್ಯಾಯಾಲಯ ಆತನಿಗೆ 5 ತಿಂಗಳ ಜೈಲು ಶಿಕ್ಷೆ ಹಾಗೂ 20,000 ಯುವಾನ್ ( ಅಂದರೆ ಸುಮಾರು 2.35 ಲಕ್ಷ ರೂ.) ದಂಡ ವಿಧಿಸಿದೆ.

ಅಷ್ಟೇ ಅಲ್ಲದೆ, ಅಪರಾಧಿಗೆ ರಕ್ಷಣೆ ನೀಡಿ, ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಜೂನ್ 11 ರಂದು ಆತನ ತಾಯಿ ಮತ್ತು ಅಜ್ಜಿಯ ವಿರುದ್ಧವೂ ಕ್ರಿಮಿನಲ್ ತನಿಖೆ ಆರಂಭಿಸಲಾಗಿದೆ. “ಸಣ್ಣ ತಪ್ಪನ್ನು ಮುಚ್ಚಿಡಲು ಹೋಗಿ ಇಡೀ ಕುಟುಂಬವೇ ಜೈಲು ಸೇರುವಂತಾಯಿತು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ