Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು’

Wildlife: ಆನೆಯಿಂದಾಗಿ ಕಳೆದ ವರ್ಷ ತನ್ನ ಮನೆಯನ್ನು ಹೇಗೆ ಕಳೆದುಕೊಂಡೆ ಮತ್ತು ಆನಂತರ ಆ ದೈತ್ಯಜೀವಿಯೊಂದಿಗೆ ಹೇಗೆ ಸಹಬಾಳ್ವೆ ಮಾಡಲು ಶುರುಮಾಡಿದೆ ಎನ್ನುವುದನ್ನು ಐಎಫ್‌ಎಸ್ ಮುದಿತ್ ವರ್ಮಾ ಅವರ ವಾಹನ ಚಾಲಕ ಕಮಲ್​, ವರ್ಮಾ ಬಳಿ ಹೇಳಿಕೊಂಡಿದ್ದಾರೆ. ವರ್ಮಾ ಅದನ್ನು X ನಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿದ ನೆಟ್ಟಿಗರು ಗೊಂದಲಕ್ಕೆ ಬಿದ್ದಿದ್ದಾರೆ.

Viral: 'ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು'
ವಾಹನ ಚಾಲಕ ಕಮಲ್
Follow us
ಶ್ರೀದೇವಿ ಕಳಸದ
|

Updated on: Oct 04, 2023 | 1:50 PM

Elephant: ವನ್ಯಮೃಗಗಳನ್ನು (Wild Animals) ಈವತ್ತು ಅರ್ಥ ಮಾಡಿಕೊಳ್ಳಬೇಕಿರುವುದು ಮನುಷ್ಯನೇ ಹೊರತು ಆ ಪ್ರಾಣಿಗಳಲ್ಲ. ಅವುಗಳ ಉಳಿವಲ್ಲೇ ಮನುಷ್ಯನ ಉಳಿವೂ ಇದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಇಂದು ತಿಳಿದುಕೊಳ್ಳಬೇಕು. ಕಾಡುಪ್ರಾಣಿಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವ ಮನುಷ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಹುಲಿದಾಳಿ, ಕರಡಿದಾಳಿ, ಆನೆದಾಳಿ, ಚಿರತೆದಾಳಿ ಅಂತೆಲ್ಲ ಹೇಳುತ್ತೇವಲ್ಲ, ಆ ಪದಪುಂಜ ಸಮಂಜಸವೇ? ಸ್ವಲ್ಪ ಯೋಚಿಸಿ. ಐಎಫ್​ಎಸ್ ಅಧಿಕಾರಿ ಮುದಿತ್ ವರ್ಮಾ X ನಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಅವರ ವಾಹನಚಾಲಕ ಕಮಲ್​ಗೆ ಆನೆಯೊಂದು ಕಲಿಸಿದ ಜೀವನಪಾಠದ ಬಗ್ಗೆ ಇವರ ಪೋಸ್ಟ್​ ಇದೆ.

ಇದನ್ನೂ ಓದಿ : Viral Optical Illusion: ಮೂರನೇ ನಾಯಿ ಇಲ್ಲಿ ಎಲ್ಲಿದೆ, 7 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಕಳೆದ ವರ್ಷ ಆನೆ ತನ್ನ ಮನೆಯನ್ನು ಹೇಗೆ ಧ್ವಂಸ ಮಾಡಿತು ಎಂದು ನಮ್ಮ ಚಾಲಕ ಕಮಲ್ ಹೇಳುತ್ತಿದ್ದರು. ಅವರು ಹೇಳುತ್ತಿರುವುದನ್ನು ಕೇಳಿ ನಾನಂತೂ ಅಚ್ಚರಿಗೊಂಡೆ; ”ನನ್ನ ಮನೆಯಲ್ಲಿ ಬಾಳೆಗೊಂಚಲು ಇಡದಿದ್ದರೆ ಅದು ಬರುತ್ತಿರಲಿಲ್ಲ. ತಪ್ಪು ನನ್ನದೇ. ಆದರೂ ಒಂದು ವರ್ಷದಿಂದ ನಾವಿಬ್ಬರೂ ಪ್ರೀತಿ ಮತ್ತು ಸಹಬಾಳ್ವೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇವೆ”. ಈ ಪೋಸ್ಟ್ ಅನ್ನು ಅಕ್ಟೋಬರ್ 2 ರಂದು ಹಂಚಿಕೊಳ್ಳಲಾಗಿದೆ.

ವರ್ಮಾ ವಾಹನ ಚಾಲಕ ಕಮಲ್

ಇದರಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಅಂಶ ಎಲ್ಲಿದೆ? ಎಂದು ಕೇಳಿದ್ಧಾರೆ ಒಬ್ಬರು. ನಿಮ್ಮ ಮನೆಯ ಕಾಂಪೌಂಡಿನಲ್ಲಿ ಹಲಸಿನ ಮರವಿದ್ದರೆ ಆ ಪರಿಮಳ ಮೈಲಿಗಟ್ಟಲೆ ಪಸರಿಸುತ್ತದೆ ಎಂದಿದ್ಧಾರೆ ಇನ್ನೊಬ್ಬರು. ಅಂದರೆ ಮನೆಯೊಳಗೆ ಇಡದೇ ಮನೆಯ ಹೊರಗೆ ಬಾಳೆಗೊನೆ ಇಡಬೇಕಿತ್ತು ಎಂದು ಕಮಲ್ ಹೇಳಿದ್ದಾರಾ, ಹೇಗೆ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಅಪ್ಸರಾ ಆಲಿ: ‘ನಟರಂಗ’ದ ಅಪ್ಸರೆಯನ್ನು ಕರೆತಂದ ಆವಂತಿ ನಾಗರಾಳ ಮತ್ತು ಸಾಯೀ ಗೋಡ್ಬೋಲೆ

ಆನೆ ಹೀಗೆ ಅರಣ್ಯ ಸಿಬ್ಬಂದಿಯ ಮನೆಯನ್ನು ಹಾಳುಗೆಡವಿದ್ದು ಇದು ಮೊದಲೇನಲ್ಲ. ಈ ಹಿಂದೆ ಐಎಫ್‌ಎಸ್ ಪರ್ವೀನ್ ಕಸ್ವಾನ್ ಹಂಚಿಕೊಂಡ ಪೋಸ್ಟ್​ ನೆನಪಿರಬಹುದು. ಆನೆಯೊಂದು ಕಾರನ್ನು ಧ್ವಂಸಗೊಳಿಸಿ ಓಡಿಹೋಗಿತ್ತು!

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ