AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು’

Wildlife: ಆನೆಯಿಂದಾಗಿ ಕಳೆದ ವರ್ಷ ತನ್ನ ಮನೆಯನ್ನು ಹೇಗೆ ಕಳೆದುಕೊಂಡೆ ಮತ್ತು ಆನಂತರ ಆ ದೈತ್ಯಜೀವಿಯೊಂದಿಗೆ ಹೇಗೆ ಸಹಬಾಳ್ವೆ ಮಾಡಲು ಶುರುಮಾಡಿದೆ ಎನ್ನುವುದನ್ನು ಐಎಫ್‌ಎಸ್ ಮುದಿತ್ ವರ್ಮಾ ಅವರ ವಾಹನ ಚಾಲಕ ಕಮಲ್​, ವರ್ಮಾ ಬಳಿ ಹೇಳಿಕೊಂಡಿದ್ದಾರೆ. ವರ್ಮಾ ಅದನ್ನು X ನಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿದ ನೆಟ್ಟಿಗರು ಗೊಂದಲಕ್ಕೆ ಬಿದ್ದಿದ್ದಾರೆ.

Viral: 'ಆನೆ ನನ್ನ ಮನೆ ಧ್ವಂಸ ಮಾಡಿ ನನಗೆ ಜೀವನ ಪಾಠ ಕಲಿಸಿತು'
ವಾಹನ ಚಾಲಕ ಕಮಲ್
ಶ್ರೀದೇವಿ ಕಳಸದ
|

Updated on: Oct 04, 2023 | 1:50 PM

Share

Elephant: ವನ್ಯಮೃಗಗಳನ್ನು (Wild Animals) ಈವತ್ತು ಅರ್ಥ ಮಾಡಿಕೊಳ್ಳಬೇಕಿರುವುದು ಮನುಷ್ಯನೇ ಹೊರತು ಆ ಪ್ರಾಣಿಗಳಲ್ಲ. ಅವುಗಳ ಉಳಿವಲ್ಲೇ ಮನುಷ್ಯನ ಉಳಿವೂ ಇದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಇಂದು ತಿಳಿದುಕೊಳ್ಳಬೇಕು. ಕಾಡುಪ್ರಾಣಿಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವ ಮನುಷ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಹುಲಿದಾಳಿ, ಕರಡಿದಾಳಿ, ಆನೆದಾಳಿ, ಚಿರತೆದಾಳಿ ಅಂತೆಲ್ಲ ಹೇಳುತ್ತೇವಲ್ಲ, ಆ ಪದಪುಂಜ ಸಮಂಜಸವೇ? ಸ್ವಲ್ಪ ಯೋಚಿಸಿ. ಐಎಫ್​ಎಸ್ ಅಧಿಕಾರಿ ಮುದಿತ್ ವರ್ಮಾ X ನಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಅವರ ವಾಹನಚಾಲಕ ಕಮಲ್​ಗೆ ಆನೆಯೊಂದು ಕಲಿಸಿದ ಜೀವನಪಾಠದ ಬಗ್ಗೆ ಇವರ ಪೋಸ್ಟ್​ ಇದೆ.

ಇದನ್ನೂ ಓದಿ : Viral Optical Illusion: ಮೂರನೇ ನಾಯಿ ಇಲ್ಲಿ ಎಲ್ಲಿದೆ, 7 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಕಳೆದ ವರ್ಷ ಆನೆ ತನ್ನ ಮನೆಯನ್ನು ಹೇಗೆ ಧ್ವಂಸ ಮಾಡಿತು ಎಂದು ನಮ್ಮ ಚಾಲಕ ಕಮಲ್ ಹೇಳುತ್ತಿದ್ದರು. ಅವರು ಹೇಳುತ್ತಿರುವುದನ್ನು ಕೇಳಿ ನಾನಂತೂ ಅಚ್ಚರಿಗೊಂಡೆ; ”ನನ್ನ ಮನೆಯಲ್ಲಿ ಬಾಳೆಗೊಂಚಲು ಇಡದಿದ್ದರೆ ಅದು ಬರುತ್ತಿರಲಿಲ್ಲ. ತಪ್ಪು ನನ್ನದೇ. ಆದರೂ ಒಂದು ವರ್ಷದಿಂದ ನಾವಿಬ್ಬರೂ ಪ್ರೀತಿ ಮತ್ತು ಸಹಬಾಳ್ವೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇವೆ”. ಈ ಪೋಸ್ಟ್ ಅನ್ನು ಅಕ್ಟೋಬರ್ 2 ರಂದು ಹಂಚಿಕೊಳ್ಳಲಾಗಿದೆ.

ವರ್ಮಾ ವಾಹನ ಚಾಲಕ ಕಮಲ್

ಇದರಲ್ಲಿ ಪ್ರೀತಿ ಮತ್ತು ಸಹಬಾಳ್ವೆಯ ಅಂಶ ಎಲ್ಲಿದೆ? ಎಂದು ಕೇಳಿದ್ಧಾರೆ ಒಬ್ಬರು. ನಿಮ್ಮ ಮನೆಯ ಕಾಂಪೌಂಡಿನಲ್ಲಿ ಹಲಸಿನ ಮರವಿದ್ದರೆ ಆ ಪರಿಮಳ ಮೈಲಿಗಟ್ಟಲೆ ಪಸರಿಸುತ್ತದೆ ಎಂದಿದ್ಧಾರೆ ಇನ್ನೊಬ್ಬರು. ಅಂದರೆ ಮನೆಯೊಳಗೆ ಇಡದೇ ಮನೆಯ ಹೊರಗೆ ಬಾಳೆಗೊನೆ ಇಡಬೇಕಿತ್ತು ಎಂದು ಕಮಲ್ ಹೇಳಿದ್ದಾರಾ, ಹೇಗೆ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಅಪ್ಸರಾ ಆಲಿ: ‘ನಟರಂಗ’ದ ಅಪ್ಸರೆಯನ್ನು ಕರೆತಂದ ಆವಂತಿ ನಾಗರಾಳ ಮತ್ತು ಸಾಯೀ ಗೋಡ್ಬೋಲೆ

ಆನೆ ಹೀಗೆ ಅರಣ್ಯ ಸಿಬ್ಬಂದಿಯ ಮನೆಯನ್ನು ಹಾಳುಗೆಡವಿದ್ದು ಇದು ಮೊದಲೇನಲ್ಲ. ಈ ಹಿಂದೆ ಐಎಫ್‌ಎಸ್ ಪರ್ವೀನ್ ಕಸ್ವಾನ್ ಹಂಚಿಕೊಂಡ ಪೋಸ್ಟ್​ ನೆನಪಿರಬಹುದು. ಆನೆಯೊಂದು ಕಾರನ್ನು ಧ್ವಂಸಗೊಳಿಸಿ ಓಡಿಹೋಗಿತ್ತು!

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ