AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಕ್​ನೊಳಗೆ ಉಂಗುರವಿಟ್ಟು ಆತ ಪ್ರಪೋಸ್​ ಮಾಡಿದ್ರೆ, ಆಕೆ ಉಂಗುರವನ್ನೇ ತಿಂದುಬಿಡೋದಾ!

ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸ್ವಲ್ಪ ಬೇರೆ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ ಅದರ ಪ್ರಕಾರ, ಆಕೆಯನ್ನು ರೆಸ್ಟೋರೆಂಟ್​ವೊಂದರಲ್ಲಿ ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ, ಆಕೆ ತಿನ್ನುವಾಗ ಕೈಯಲ್ಲಿ ಉಂಗುರ ಸಿಗುತ್ತೆ ಆಕೆ ಖುಷಿಯಿಂದ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದೆಲ್ಲಾ ಆತ ಕನಸು ಕಂಡಿದ್ದ ಆದರೆ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.

ಕೇಕ್​ನೊಳಗೆ ಉಂಗುರವಿಟ್ಟು ಆತ ಪ್ರಪೋಸ್​ ಮಾಡಿದ್ರೆ, ಆಕೆ ಉಂಗುರವನ್ನೇ ತಿಂದುಬಿಡೋದಾ!
ಕೇಕ್ Image Credit source: ಕೇಕ್
ನಯನಾ ರಾಜೀವ್
|

Updated on:Feb 04, 2025 | 12:42 PM

Share

ಪ್ರೇಮ ನಿವೇದನೆಯನ್ನು ಹೀಗೆಯೇ ಮಾಡಬೇಕೆಂದೇನಿಲ್ಲ, ಈಗಂತೂ ಸಾಮಾಜಿಕ ಜಾಲತಾಣಗಳು ಸಾಕಷ್ಟು ಟಿಪ್ಸ್​ಗಳನ್ನು ಪ್ರೇಮಿಗಳಿಗೆ ನೀಡುತ್ತದೆ. ಹಾಗೆಯೇ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಸ್ವಲ್ಪ ಬೇರೆ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದು ಬಯಸಿದ್ದ ಅದರ ಪ್ರಕಾರ, ಆಕೆಯನ್ನು ರೆಸ್ಟೋರೆಂಟ್​ವೊಂದರಲ್ಲಿ ಕುಳ್ಳಿರಿಸಿ, ಕೇಕ್​ ಒಳಗೆ ಉಂಗುರವಿಟ್ಟು ಆಕೆಗೆ ತಿನ್ನಲು ಕೊಟ್ಟಿದ್ದ, ಆಕೆ ತಿನ್ನುವಾಗ ಕೈಯಲ್ಲಿ ಉಂಗುರ ಸಿಗುತ್ತೆ ಆಕೆ ಖುಷಿಯಿಂದ ತನ್ನನ್ನು ಒಪ್ಪಿಕೊಳ್ಳುತ್ತಾಳೆ ಎಂದೆಲ್ಲಾ ಆತ ಕನಸು ಕಂಡಿದ್ದ ಆದರೆ ಆಗಿದ್ದೇ ಬೇರೆ, ಇದ್ಯಾವುದನ್ನೂ ಅರಿಯದ ಯುವತಿ ಕೇಕ್ ಜತೆಗೆ ಬಹುತೇಕ ಉಂಗುರವನ್ನೇ ತಿಂದಿದ್ದಾಳೆ.

ಈ ಘಟನೆ ಚೀನಾದಲ್ಲಿ ನಡೆದಿದೆ. ಆಕೆಯ ಹಲ್ಲಿಗೆ ಏನೋ ಸಿಕ್ಕಿದಂತಾಗಿತ್ತು ಆಗ ಆಕೆ, ಕೇಕ್​ನ ಗುಣಮಟ್ಟವೇ ಸರಿಯಿಲ್ಲದಿರಬಹುದು ಎಂದು ಭಾವಿಸಿದ್ದಳು. ಈ ಬಗ್ಗೆ ಬೇಕರಿಗೆ ದೂರು ಕೊಡಬೇಕೆಂದುಕೊಂಡಿದ್ದಳು. ಆ ವಿಚಾರವನ್ನು ಆಕೆ ಗೆಳೆಯನ ಬಳಿಯೂ ಹೇಳಿಕೊಂಡಳು. ಆಕೆ ಆ ಉಂಗುರವನ್ನು ಹಲ್ಲಿನಲ್ಲಿ ಕಚ್ಚಿದ್ದರಿಂದ ಅದು ಎರಡು ತುಂಡುಗಳಾಗಿ ಬಿದ್ದಿತ್ತು. ತಕ್ಷಣ ಆಕೆ ಕೇಕ್​ ಅನ್ನು ಹೊರಗೆ ಉಗುಳಿದ್ದಳು. ಇದು ಚೀನಾದ ಸಿಚುವಾನ್ ರಾಜ್ಯದಲ್ಲಿ ನಡೆದ ಘಟನೆ.

ಗುವಾಂಗ್ ಆನ್ ನಗರದ ನಿವಾಸಿ ಲಿಯು ರೆಡ್ ನೋಟ್ ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ:Memorable Love Proposal: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ

ಎಲ್ಲಾ ಪುರುಷರ ಗಮನಕ್ಕೆ ಆಹಾರದೊಂದಿಗೆ ಎಂದಿಗೂ ಪ್ರೊಪೋಸ್ ರಿಂಗ್ ಇರಿಸಬೇಡಿ, ಸಂಜೆ ಹಸಿವಿನಿಂದ ಬಂದಿದ್ದೆ, ಗೆಳೆಯ ಕೊಟ್ಟಿದ್ದ ಕೇಕ್​ ತಿಂದುಬಿಟ್ಟೆ. ಎಂದು ಆಕೆ ಹೇಳಿಕೊಂಡಿದ್ದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ ವರದಿ ಮಾಡಿದೆ.

ಇಷ್ಟೆಲ್ಲಾ ನಡೆದರೂ ಕೂಡ ಬಳಿಕ ಆಕೆ ತನ್ನ ಗೆಳೆಯನನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಆದರೆ ಈ ಪ್ರಪೋಸ್​ ಮಾಡುವ ವಿಧಾನ ತುಂಬಾ ಅಪಾಯಕಾರಿಯಾಗಿತ್ತು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:40 pm, Tue, 4 February 25

ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?