AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆ ಬರ್ತಿದೆ ಅದಕ್ಕೆ ರೈಡ್​ ಕ್ಯಾನ್ಸಲ್​ ಮಾಡಿ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು

Uber : ಎಷ್ಟೊತ್ತಾದರೂ ಬಾರದ ಕ್ಯಾಬ್​ ಬಗ್ಗೆ, ವಿನಾಕಾರಣ ಕ್ಯಾನ್ಸಲ್ ಮಾಡುವ ಡ್ರೈವರ್​ಗಳ ಬಗ್ಗೆ ಕೋಪ ಎಂದೂ ಕಡಿಮೆಯಾಗುವುದೇ ಇಲ್ಲ. ಆದರೆ ಈ ಬೆಂಗಳೂರಿನ ಕ್ಯಾಬ್​ ಡ್ರೈವರ್ ಬಗ್ಗೆ ನಿಮಗೆ ಕೋಪ ಖಂಡಿತ ಬಾರದು!

ನಿದ್ದೆ ಬರ್ತಿದೆ ಅದಕ್ಕೆ ರೈಡ್​ ಕ್ಯಾನ್ಸಲ್​ ಮಾಡಿ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು
ಡ್ರೈವರ್​ನ ಸಂದೇಶ
TV9 Web
| Edited By: ಶ್ರೀದೇವಿ ಕಳಸದ|

Updated on: Jan 28, 2023 | 10:36 AM

Share

Viral News : ನಮ್ಮ ಓಡಾಟಗಳಿಗೆ ಇಷ್ಟೆಲ್ಲ ಅನುಕೂಲಗಳು ಸೃಷ್ಟಿಯಾದರೂ ಪರದಾಡುವುದು ಮಾತ್ರ ತಪ್ಪಿಲ್ಲ. ಓಲಾ, ಉಬರ್​ ಕ್ಯಾಬ್​ಗಳನ್ನು ಕಾಯುವುದು, ಬುಕ್ ಮಾಡುವುದು, ಡ್ರೈವರ್​ಗಳು ಅದನ್ನು ಕಾನ್ಸಲ್​ ಮಾಡುವುದು ಹೀಗೆ ಏನಾದರೂ ಒಂದು ತಕರಾರು ಇದ್ದೇ ಇರುತ್ತದೆ. ಹಾಗಾಗಿ ಇಂಥ ಯಾತನೆಗಳಿಂದ ಮುಕ್ತಿಯೇ ಇಲ್ಲವೆ ಎನ್ನುವಂತೆ ಪರಿಸ್ಥಿತಿಗಳು ನಿರ್ಮಾಣವಾಗುತ್ತಾ ಹೋಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಷಯ ಏನೆಂದರೆ, ಬೆಂಗಳೂರಿನ ಮಹಿಳೆಯೊಬ್ಬರು ಉಬರ್ ಬುಕ್ ಮಾಡುತ್ತಾರೆ. ಆದರೆ ಡ್ರೈವರ್​, ತನಗೆ ನಿದ್ದೆ ಬಂದಿದೆ ಹಾಗಾಗಿ ಈ ರೈಡ್ ಕ್ಯಾನ್ಸಲ್ ಮಾಡಿ’ ಎಂದು ಮೆಸೇಜ್ ಕಳಿಸುತ್ತಾನೆ. ‘

ಆಶಿ ಎನ್ನುವ ಟ್ವಿಟರ್​ ಖಾತೆದಾರರು ಭರತ್​ ಎಂಬ ಉಬರ್ ಡ್ರೈವರ್ ಚಾಟ್​ನ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದಾನೆ ಅದರಲ್ಲೇನಿದೆ? ಎಂದು ಡ್ರೈವರ್​ನನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಜನವರಿ 26ರಂದು ಈ ಟ್ವೀಟ್​ ಮಾಡಲಾಗಿದೆ. ಈತನಕ 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಓದಿದ್ದಾರೆ. 4,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿ ಚರ್ಚಿಸಿದ್ದಾರೆ.

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಸದ್ಯ ಈ ವ್ಯಕ್ತಿ ಪ್ರಾಮಾಣಿಕನಾಗಿದ್ದಾನೆ. ಹಿಂದೊಮ್ಮೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್​ನಲ್ಲಿ ಮನೆಗೆ ಬರುತ್ತಿರುವಾಗ ಒಬ್ಬ ಡ್ರೈವರ್ ದಾರಿಮಧ್ಯೆ, ಮೇಡಮ್​ ನನಗೆ ನಿದ್ದೆ ಬರುತ್ತಿದೆ, ಇನ್ನು ಗಾಡಿ ಓಡಿಸಲಾಗದು ಎಂದುಬಿಟ್ಟ. ಆಗ ಬೆಳಗಿನ ಜಾವ 3ಗಂಟೆ. ನಾನೋ ಜೆಟ್​​ಲ್ಯಾಗ್​ನಿಂದ ನರಕವನ್ನು ಅನುಭವಿಸುತ್ತಿದ್ದೆ ಎಂದು ಒಬ್ಬರು ಹೇಳಿದ್ದಾರೆ. ​

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಹಿಂದೊಮ್ಮೆ ಆಟೋ ಡ್ರೈವರ್ ಯೂಟ್ಯೂಬ್​ ನೋಡುತ್ತಿದ್ದರು. ಅದಕ್ಕಾಗಿ ನನಗೆ ಅವರು ಡ್ರಾಪ್​ ಕೊಡಲಿಲ್ಲ ಎಂದು ಮತ್ತೊಬ್ಬರು ನೆನಪಿಸಿಕೊಂಡಿದ್ದಾರೆ. ಒಬ್ಬ ಕ್ಯಾಬ್​​ ಡ್ರೈವರ್ ರೈಡ್​ ಸ್ವೀಕರಿಸಿದರು. ಆದರೆ ಐದು ನಿಮಿಷಗಳಾದರೂ ಅವರು ಬರಲೇ ಇಲ್ಲ. ನಂತರ ಫೋನ್ ಮಾಡಿದೆ. ಅದಕ್ಕವರು, ನೀವು ಫೋನ್ ಮಾಡಲೆಂದು ಕಾಯುತ್ತಿದ್ದೆ ಎಂದರು. ಹೀಗೆ ಮಗದೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಈ ಡ್ರೈವರ್ ನಿಜವಾದ ಕಾರಣವನ್ನು ನೇರವಾಗಿ ಹೇಳಿದ್ದಾನಲ್ಲ, ಅವನು ಕರುಣೆ ತೋರಿದ್ದಕ್ಕೆ ಬಹಳ ಖುಷಿಯಾಗಿದೆ! ಎಂದಿದ್ಧಾರೆ ಇನ್ನೂ ಒಬ್ಬರು. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!