AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಕಾಲಿಟ್ಟ ಕೂಡಲೇ ಈ ಕೊರಿಯನ್​ ಬ್ಲಾಗರ್ ಮಾಡಿದ್ದು…

Korean : ವಿಮಾನದಲ್ಲಿ ಬಂದಿಳಿದು, ಬಸ್ಸು, ದ್ವಿಚಕ್ರವಾಹವನ್ನೇರಿ ನಮ್ಮ ದೇಶದ ಒಂದು ಗಲ್ಲಿಗೆ ಬರುತ್ತಾಳೆ ಕೊರಿಯನ್​ ಬ್ಲಾಗರ್​. ಆನಂತರ ಆಕೆ ಮಾಡುವ ಮೊದಲ ಕೆಲಸ ಏನೆಂದು ತಿಳಿದುಕೊಳ್ಳಲು ನೀವೇ ಈ ವಿಡಿಯೋ ನೋಡಿಬಿಡಿ.

ಭಾರತಕ್ಕೆ ಕಾಲಿಟ್ಟ ಕೂಡಲೇ ಈ ಕೊರಿಯನ್​ ಬ್ಲಾಗರ್ ಮಾಡಿದ್ದು...
ಕೊರಿಯನ್ ಬ್ಲಾಗರ್ ಕಿಮ್
TV9 Web
| Updated By: ಶ್ರೀದೇವಿ ಕಳಸದ|

Updated on:Jan 28, 2023 | 12:48 PM

Share

Viral Video : ವಿದೇಶಿಗರಿಗೆ ಭಾರತವೆಂದರೆ ಅನೇಕ ಕಾರಣಗಳಿಂದ ಆಕರ್ಷಣೆ. ಅದರಲ್ಲಿಯೂ ಇಲ್ಲಿಯ ಆಹಾರ ಸಂಸ್ಕೃತಿಯ ಬಗ್ಗೆ ಮಾರುಹೋಗದವರಿಲ್ಲ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಕೊರಿಯಾದ ಬ್ಲಾಗರ್ ಮತ್ತು ಕೇಶವಿನ್ಯಾಸಕಿ ಕಿಮ್​ ಜೇಯಿಯಾನ್ ಭಾರತಕ್ಕೆ ಕಾಲಿಡುತ್ತಿದ್ದಂತೆ ಮಾಡಿದ ತಮ್ಮ ಮೊದಲ ಕೆಲಸವೇನು ಎನ್ನುವುದನ್ನು ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by 김재현 • Kim Jaehyeon ?? (@jaehyeon_0610)

ವಿಡಿಯೋ ನೋಡುವ ತನಕ ಇದು ಯಾರ ಊಹೆಗೂ ನಿಲುಕಿರಲಿಲ್ಲವಲ್ಲ? ವಿಮಾನದಲ್ಲಿ, ಬಸ್ಸಿನಲ್ಲಿ, ದ್ವಿಚಕ್ರವಾಹನದಲ್ಲಿ ಚಲಿಸಿ ಅವರು ಬರುವುದು ಕಬ್ಬಿನ ಹಾಲಿನ ಅಂಗಡಿಗೆ. ಅಲ್ಲಿ ತಾಜಾ ಕಬ್ಬಿನ ಹಾಲನ್ನು ಕುಡಿದು, ಕಬ್ಬಿನ ತುಂಡನ್ನು ಕಚ್ಚಿ ರಸ ಹೀರಲು ಪ್ರಯತ್ನಿಸುತ್ತಾರೆ. ಈ ವಿಡಿಯೋ ಅನ್ನು ನೋಡಿದ ಎಲ್ಲರಿಗೂ ಕಬ್ಬನಹಾಲು ಅಚ್ಚುಮೆಚ್ಚೇ. ಅನೇಕರು ಈ ವಿಡಿಯೋ ನೋಡಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ನಿದ್ದೆ ಬರ್ತಿದೆ ಅದಕ್ಕೆ ರೈಡ್​ ಕ್ಯಾನ್ಸಲ್​ ಮಾಡಿ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ಮೆಚ್ಚುತ್ತಿರುವ ನೆಟ್ಟಿಗರು

ಮಿಲಿಯನ್​ಗಟ್ಟಲೆ ಜನರು ಈ ವಿಡಿಯೋ ನೋಡಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಮೆಚ್ಚಿದ್ದಾರೆ. 600ಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ? ಇದು ಜೈಪುರದಲ್ಲಿ? ಎಂದು ಅನೇಕರು ಕೇಳಿದ್ದಾರೆ. ಬಾಲ್ಯದ ಈ ಪಾನೀಯ ಯಾರಿಗೆ ತಾನೆ ಇಷ್ಟವಿಲ್ಲ. ನನಗೀಗಲೇ ಈ ಬಿಸಿಲಿನಲ್ಲಿ ಕುಡಿಯಬೇಕೆಂಬ ಆಸೆಯುಂಟಾಗುತ್ತಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ : ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡತಿ; ತುಂಡಾಗಿ ಕೆಳಗೆ ಬಿದ್ದ ನಾಲಗೆ

ಬಾಲ್ಯದಲ್ಲಿ ಅಪ್ಪ ಅಮ್ಮನ ಜೊತೆ ಶಹರಕ್ಕೆ, ಪೇಟೆಗೆ ಹೋದಾಗೆಲ್ಲ ಮೊದಲು ಬಾಯಾರಿಸಿಕೊಳ್ಳುವುದು ಮತ್ತು ನಾಲಗೆ ರುಚಿ ತಣಿಸುವ ತಂಪುಪಾನೀಯ ಇದೇ ಆಗಿತ್ತಲ್ಲವೆ? ಮತ್ತೀಗ ನಿಮಗೆ ಅದೇ ಬಾಲ್ಯ ಮರಳಬಾರದೆ ಎಂದೆನ್ನಿಸುತ್ತಿರಬೇಕು. ರುಚಿ ಎಂದರೆ ಹಾಗೇ. ಸ್ಮೃತಿಕೋಶದಲ್ಲಿ ಅದು ಶಾಶ್ವತವಾಗಿ ನೆಲೆಯೂರಿರುತ್ತದೆ. ನೆನಪುಗಳು ಗರಿಗೆದರಿ ಮನಸ್ಸು ಉಲ್ಲಸಿತವಾಗಲು ರುಚಿಯ ಪಾತ್ರ ಬಹಳ ದೊಡ್ಡದು. ಈ ರುಚಿಯೇ ಮನುಷ್ಯ ಬಂಧಗಳನ್ನು ಬೆಸೆಯುವಂಥದ್ದು. ಅದಕ್ಕೇ ದೇಶವಿದೇಶಿಗರು ನಮ್ಮ ದೇಸೀಯ ಆಹಾರವಿಧಾನಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:48 pm, Sat, 28 January 23

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?