AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಶಿಕ್ಷಕರಿಂದ ಮೂರೂವರೆ ಅಂಕ ಪಡೆದ ವಿದ್ಯಾರ್ಥಿಯ ಪ್ರಬಂಧಕ್ಕೆ ನೆಟ್ಟಿಗರಿಂದ ಫುಲ್ ಮಾರ್ಕ್ಸ್

ತಾಯಿಯ ಬಗ್ಗೆ ಬರೆದ ಪ್ರಬಂಧಕ್ಕೆ ಶಿಕ್ಷಕರು ಮೂರುವರೆ ಅಂಕ ಕೊಟ್ಟರೂ ನೆಟ್ಟಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ಪ್ರಬಂಧವನ್ನು ನೀವೂ ಓದಿದರೆ ಪೂರ್ಣ ಅಂಕ ಕೊಡುವಿರಿ.

Viral: ಶಿಕ್ಷಕರಿಂದ ಮೂರೂವರೆ ಅಂಕ ಪಡೆದ ವಿದ್ಯಾರ್ಥಿಯ ಪ್ರಬಂಧಕ್ಕೆ ನೆಟ್ಟಿಗರಿಂದ ಫುಲ್ ಮಾರ್ಕ್ಸ್
ವಿದ್ಯಾರ್ಥಿ ಬರೆದ ಪ್ರಬಂಧದ ಫೋಟೋ ವೈರಲ್Image Credit source: Twitter and pixabay.com
TV9 Web
| Edited By: Rakesh Nayak Manchi|

Updated on:Aug 20, 2022 | 11:04 AM

Share

ಬಾಹ್ಯ ವ್ಯಕ್ತಿಗಳಿಗಿಂತ ಮನೆಯ ಸದಸ್ಯರ ಅದರಲ್ಲೂ ತಂದೆ ತಾಯಿಯರು ಬೆಂಬಲ, ಪ್ರೋತ್ಸಾಹ ನೀಡಿದರೆ ಅದೆಂತಹ ಕಷ್ಟಕರವಾದ ಸಾಧನೆ ಮಾಡಲೂ ಸ್ಪೂರ್ತಿ ತುಂಬುತ್ತದೆ. ಇದೀಗ ಸಣ್ಣ ತರಗತಿಯ ವಿದ್ಯಾರ್ಥಿಯೊಬ್ಬರು ಪರೀಕ್ಷೆಯಲ್ಲಿ ತನ್ನ ತಾಯಿಯನ್ನು ಹೊಗಳಿ ಪ್ರಬಂಧವನ್ನು ಬರೆದಿದ್ದಾರೆ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಬಂಧ ಓದಿದ ಕೆಲವು ನೆಟ್ಟಿಗರು ಕಣ್ಣೀರು ಹಾಕಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಪ್ರಬಂಧಕ್ಕೆ ಐದರಲ್ಲಿ ಮೂರೂವರೆ ಅಂಕ ಕೊಟ್ಟರೂ ನೆಟ್ಟಿಗರು ಮಾತ್ರ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗಾದರೆ ಆ ಪ್ರಬಂಧದಲ್ಲಿ ಬರೆದದ್ದಾದರೂ ಏನು? ಇಲ್ಲಿದೆ ನೋಡಿ:

“ನನ್ನ ತಾಯಿಯನ್ನು ನಾನು ಮೆಚ್ಚುತ್ತೇನೆ ಏಕೆಂದರೆ ಅವಳು ನನಗೆ ದಯೆ ಮತ್ತು ಕಾಳಜಿಯನ್ನು ಕಲಿಸಿದವಳು. ಅವಳು ತುಂಬಾ ತಮಾಷೆಯ ವ್ಯಕ್ತಿ ಮತ್ತು ಒಳ್ಳೆಯ ಹಾಸ್ಯ ಮಾಡುವವಳು. ಅವಳು ಚೆನ್ನಾಗಿ ಅಡುಗೆ ಮಾಡಬಲ್ಲಳು. ಅವಳು ನನಗೆ ನಡೆಯಲು ಕಲಿಸಿದಳು. ಅವಳು ಅದ್ಭುತವಾದ ಆಹಾರವನ್ನು ತಯಾರಿಸುತ್ತಾಳೆ, ಅವಳು ಕೆಲವೊಮ್ಮೆ ನನಗೆ ತಿನ್ನಿಸುತ್ತಾಳೆ, ಅವಳು ನನ್ನನ್ನು ಯಾವಾಗಲೂ ನಗಿಸುತ್ತಾಳೆ, ಅವಳು ಮನೆಯಲ್ಲಿ ಕೆಲಸ ಮಾಡುತ್ತಾಳೆ ಮತ್ತು ನನ್ನನ್ನು ನೋಡಿಕೊಳ್ಳುತ್ತಾಳೆ, ಅವಳು ನನ್ನನ್ನು ದಿನಕ್ಕೆ ಎರಡು ಗಂಟೆ ಓದುವಂತೆ ಮಾಡುತ್ತಾಳೆ, ನನ್ನನ್ನು ಟ್ಯೂಷನ್‌ಗೆ ಸೇರಿಸುತ್ತಾಳೆ, ಅವಳು ನನ್ನನ್ನು ವಾರಕ್ಕೆ ಎರಡು ಬಾರಿ ಈಜಲು ಕರೆದುಕೊಂಡು ಹೋಗುತ್ತಾಳೆ, ನನಗೆ ನನ್ನ ತಾಯಿ ತುಂಬಾ ಇಷ್ಟ, ಅವಳು ಜಗತ್ತಿನಲ್ಲಿ ಅತ್ಯುತ್ತಮವಾದವಳು” ಎಂದು ಪ್ರಬಂಧದಲ್ಲಿ ಬರೆಯಲಾಗಿದೆ.

ಇದರ ಫೋಟೋವನ್ನು ಟ್ವಿಟರ್​ಲ್ಲಿ ಹಂಚಿಕೊಂಡ ರಿತುಪರ್ಣಾ ಚಟರ್ಜಿ ಅವರು, “ನಾನು ಅಳುತ್ತೇನೆ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋ ವೈರಲ್ ಪಡೆದು, ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಅನೇಕರು ಈ ಹೃದಯಸ್ಪರ್ಷಿ ಪ್ರಬಂಧವನ್ನು ಮೆಚ್ಚಿಕೊಂಡಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:04 am, Sat, 20 August 22

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್