AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಶಿಕ್ಷಕರಿಂದ ಮೂರೂವರೆ ಅಂಕ ಪಡೆದ ವಿದ್ಯಾರ್ಥಿಯ ಪ್ರಬಂಧಕ್ಕೆ ನೆಟ್ಟಿಗರಿಂದ ಫುಲ್ ಮಾರ್ಕ್ಸ್

ತಾಯಿಯ ಬಗ್ಗೆ ಬರೆದ ಪ್ರಬಂಧಕ್ಕೆ ಶಿಕ್ಷಕರು ಮೂರುವರೆ ಅಂಕ ಕೊಟ್ಟರೂ ನೆಟ್ಟಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ಪ್ರಬಂಧವನ್ನು ನೀವೂ ಓದಿದರೆ ಪೂರ್ಣ ಅಂಕ ಕೊಡುವಿರಿ.

Viral: ಶಿಕ್ಷಕರಿಂದ ಮೂರೂವರೆ ಅಂಕ ಪಡೆದ ವಿದ್ಯಾರ್ಥಿಯ ಪ್ರಬಂಧಕ್ಕೆ ನೆಟ್ಟಿಗರಿಂದ ಫುಲ್ ಮಾರ್ಕ್ಸ್
ವಿದ್ಯಾರ್ಥಿ ಬರೆದ ಪ್ರಬಂಧದ ಫೋಟೋ ವೈರಲ್Image Credit source: Twitter and pixabay.com
TV9 Web
| Updated By: Rakesh Nayak Manchi|

Updated on:Aug 20, 2022 | 11:04 AM

Share

ಬಾಹ್ಯ ವ್ಯಕ್ತಿಗಳಿಗಿಂತ ಮನೆಯ ಸದಸ್ಯರ ಅದರಲ್ಲೂ ತಂದೆ ತಾಯಿಯರು ಬೆಂಬಲ, ಪ್ರೋತ್ಸಾಹ ನೀಡಿದರೆ ಅದೆಂತಹ ಕಷ್ಟಕರವಾದ ಸಾಧನೆ ಮಾಡಲೂ ಸ್ಪೂರ್ತಿ ತುಂಬುತ್ತದೆ. ಇದೀಗ ಸಣ್ಣ ತರಗತಿಯ ವಿದ್ಯಾರ್ಥಿಯೊಬ್ಬರು ಪರೀಕ್ಷೆಯಲ್ಲಿ ತನ್ನ ತಾಯಿಯನ್ನು ಹೊಗಳಿ ಪ್ರಬಂಧವನ್ನು ಬರೆದಿದ್ದಾರೆ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಬಂಧ ಓದಿದ ಕೆಲವು ನೆಟ್ಟಿಗರು ಕಣ್ಣೀರು ಹಾಕಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಪ್ರಬಂಧಕ್ಕೆ ಐದರಲ್ಲಿ ಮೂರೂವರೆ ಅಂಕ ಕೊಟ್ಟರೂ ನೆಟ್ಟಿಗರು ಮಾತ್ರ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗಾದರೆ ಆ ಪ್ರಬಂಧದಲ್ಲಿ ಬರೆದದ್ದಾದರೂ ಏನು? ಇಲ್ಲಿದೆ ನೋಡಿ:

“ನನ್ನ ತಾಯಿಯನ್ನು ನಾನು ಮೆಚ್ಚುತ್ತೇನೆ ಏಕೆಂದರೆ ಅವಳು ನನಗೆ ದಯೆ ಮತ್ತು ಕಾಳಜಿಯನ್ನು ಕಲಿಸಿದವಳು. ಅವಳು ತುಂಬಾ ತಮಾಷೆಯ ವ್ಯಕ್ತಿ ಮತ್ತು ಒಳ್ಳೆಯ ಹಾಸ್ಯ ಮಾಡುವವಳು. ಅವಳು ಚೆನ್ನಾಗಿ ಅಡುಗೆ ಮಾಡಬಲ್ಲಳು. ಅವಳು ನನಗೆ ನಡೆಯಲು ಕಲಿಸಿದಳು. ಅವಳು ಅದ್ಭುತವಾದ ಆಹಾರವನ್ನು ತಯಾರಿಸುತ್ತಾಳೆ, ಅವಳು ಕೆಲವೊಮ್ಮೆ ನನಗೆ ತಿನ್ನಿಸುತ್ತಾಳೆ, ಅವಳು ನನ್ನನ್ನು ಯಾವಾಗಲೂ ನಗಿಸುತ್ತಾಳೆ, ಅವಳು ಮನೆಯಲ್ಲಿ ಕೆಲಸ ಮಾಡುತ್ತಾಳೆ ಮತ್ತು ನನ್ನನ್ನು ನೋಡಿಕೊಳ್ಳುತ್ತಾಳೆ, ಅವಳು ನನ್ನನ್ನು ದಿನಕ್ಕೆ ಎರಡು ಗಂಟೆ ಓದುವಂತೆ ಮಾಡುತ್ತಾಳೆ, ನನ್ನನ್ನು ಟ್ಯೂಷನ್‌ಗೆ ಸೇರಿಸುತ್ತಾಳೆ, ಅವಳು ನನ್ನನ್ನು ವಾರಕ್ಕೆ ಎರಡು ಬಾರಿ ಈಜಲು ಕರೆದುಕೊಂಡು ಹೋಗುತ್ತಾಳೆ, ನನಗೆ ನನ್ನ ತಾಯಿ ತುಂಬಾ ಇಷ್ಟ, ಅವಳು ಜಗತ್ತಿನಲ್ಲಿ ಅತ್ಯುತ್ತಮವಾದವಳು” ಎಂದು ಪ್ರಬಂಧದಲ್ಲಿ ಬರೆಯಲಾಗಿದೆ.

ಇದರ ಫೋಟೋವನ್ನು ಟ್ವಿಟರ್​ಲ್ಲಿ ಹಂಚಿಕೊಂಡ ರಿತುಪರ್ಣಾ ಚಟರ್ಜಿ ಅವರು, “ನಾನು ಅಳುತ್ತೇನೆ” ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋ ವೈರಲ್ ಪಡೆದು, ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಅನೇಕರು ಈ ಹೃದಯಸ್ಪರ್ಷಿ ಪ್ರಬಂಧವನ್ನು ಮೆಚ್ಚಿಕೊಂಡಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:04 am, Sat, 20 August 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?