10 ವರ್ಷದ ಬಾಲಕಿಯ ಕನಸಲ್ಲಿ ಕಂಡ ಶ್ರೀ ಕೃಷ್ಣ; ಅದೇ ಸ್ಥಳದಲ್ಲಿ ವಿಗ್ರಹ ಪತ್ತೆ

ವಿನೋದ್ ಸಿಂಗ್ ಅವರ ಪುತ್ರಿ ಪೂಜಾ, ಜಿಂದಪುರ ಗ್ರಾಮದ ಕಾಲುವೆ ಬಳಿಯ ಧಾರ್ಮಿಕ ಸ್ಥಳದ ಬಳಿಯ ನೆಲದಲ್ಲಿ ವಿಗ್ರಹವನ್ನು ಹೂಳುವ ಕನಸು ಕಂಡಿದ್ದಾಳೆ. ಜೊತೆಗೆ ತನ್ನ ಕನಸನ್ನು ಮನೆಯವರಿಗೆ ತಿಳಿಸಿದ್ದಾಳೆ. ಆದರೆ ಫೋಷಕರು ಬಾಲಕಿಯ ಮಾತಿಗೆ ತಲೆ ಕೆಡಿಸಿಕೊಂಡಿರಲ್ಲಿಲ್ಲ. ಕಡೆಗೆ ಆಕೆಯ ಮಾತನ್ನು ನಂಬಿ ಕುಟುಂಬಸ್ಥರು ಆಕೆ ಹೇಳಿರುವ ಜಾಗದಲ್ಲಿ ಸ್ವಲ್ಪ ಅಗೆದ ನಂತರ ಶ್ರೀಕೃಷನ ವಿಗ್ರಹ ಪತ್ತೆಯಾಗಿದೆ.

10 ವರ್ಷದ ಬಾಲಕಿಯ ಕನಸಲ್ಲಿ ಕಂಡ ಶ್ರೀ ಕೃಷ್ಣ; ಅದೇ ಸ್ಥಳದಲ್ಲಿ ವಿಗ್ರಹ ಪತ್ತೆ
Statue Of Lord Krishna

Updated on: Feb 18, 2024 | 12:27 PM

ಉತ್ತರ ಪ್ರದೇಶ: ಶಹಜಹಾನ್‌ಪುರ ಜಿಲ್ಲೆಯಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಗೋಹ್ ಪ್ರದೇಶದಲ್ಲಿ 10 ವರ್ಷದ ಬಾಲಕಿಯೊಬ್ಬಳು ಭಗವಂತ ಶ್ರೀಕೃಷ್ಣ ತನಗೆ ಕನಸಿನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಶ್ರೀ ಕೃಷ್ಣನ ವಿಗ್ರಹವನ್ನು ನೆಲದಡಿಯಲ್ಲಿ ಸಮಾಧಿ ಮಾಡಲಾಗಿದೆ ಎಂದು ಬಾಲಕಿ ಹೇಳಿದ್ದಾಳೆ. ಬಾಲಕಿಯ ಕನಸನ್ನು ನಂಬಿ ಮಣ್ಣು ಅಗೆದಾಗ,ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಯಾಕೆಂದರೆ ಬಾಲಕಿ ಹೇಳಿರುವ ಸ್ಥಳದಲ್ಲೇ ದೇವರ ವಿಗ್ರಹ ಪತ್ತೆಯಾಗಿದೆ.

ನಿಗೋಹಿ ಪ್ರದೇಶದ ಗ್ರಾಮದ ನಿವಾಸಿ ವಿನೋದ್ ಸಿಂಗ್ ಅವರ ಪುತ್ರಿ ಪೂಜಾ, ಜಿಂದಪುರ ಗ್ರಾಮದ ಕಾಲುವೆ ಬಳಿಯ ಧಾರ್ಮಿಕ ಸ್ಥಳದ ಬಳಿಯ ನೆಲದಲ್ಲಿ ವಿಗ್ರಹವನ್ನು ಹೂಳುವ ಕನಸು ಕಂಡಿದ್ದರು. ಜೊತೆಗೆ ತನ್ನ ಕನಸನ್ನು ಮನೆಯವರಿಗೆ ತಿಳಿಸಿದ್ದಾಳೆ. ಆದರೆ ಫೋಷಕರು ಮೊದಲಿಗೆ ಬಾಲಕಿಯ ಮಾತಿಗೆ ತಲೆ ಕೆಡಿಸಿಕೊಂಡಿರಲ್ಲಿಲ್ಲ. ಆದರೆ ಪೂಜಾ ಕಳೆದ ಏಳು ದಿನಗಳಿಂದ ಅಲ್ಲಿ ಮಣ್ಣು ಅಗೆದು ವಿಗ್ರಹ ಹೊರತೆಗೆಯುವ ವರೆಗೆ ಉಪವಾಸದಲ್ಲಿ ಕುಳಿತಿರುವುದಾಗಿ ಪಟ್ಟು ಹಿಡಿದು ಕುಳಿತ್ತಿದ್ದಾಳೆ. ಕಡೆಗೆ ಆಕೆಯ ಮಾತನ್ನು ನಂಬಿದ ವಿನೋದ್ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ದರ್ಗಾ ಬಳಿ ತಲುಪಿದ್ದಾರೆ. ಅಗೆಯುವ ಸಂದರ್ಭದಲ್ಲಿ ಇತರ ಸಮುದಾಯಗಳ ವಿರೋಧದಿಂದ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಪ್ರಾರಂಭಿಸಿತು. ಮುಂಜಾಗ್ರತಾ ಕ್ರಮವಾಗಿ ದರ್ಗಾ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ

ಎರಡೂ ಕಡೆಯಿಂದ ಜನರು ಜಮಾಯಿಸಿದಾಗಲೂ ಅಗೆಯುವ ಕಾರ್ಯ ಮುಂದುವರಿದಿತ್ತು. ಸ್ವಲ್ಪ ಅಗೆದ ನಂತರ ಶ್ರೀಕೃಷನ ವಿಗ್ರಹ ಪತ್ತೆಯಾಗಿದೆ. ಬಳಿಕ ಅಲ್ಲಿಂದ ಎರಡೂವರೆ ಕಿಲೋಮೀಟರ್ ದೂರದ ಗದ್ದೆಯಲ್ಲಿ ಗ್ರಾಮಸ್ಥರು ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ