AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಆರ್ಡರ್​; ಸ್ಯಾನಿಟರಿ ಪ್ಯಾಡ್​ ಜೊತೆ ಚಾಕೊಲೇಟ್​ ಕುಕೀಸ್​ ಪಡೆದ ಮಹಿಳೆ

Swiggy : ಏನೋ ಆರ್ಡರ್ ಮಾಡಿದರೆ ಇನ್ನೇನೋ ತಲುಪುವುದು ಮಾಮೂಲಿ. ಆದರೆ ನೀವು ಆರ್ಡರ್ ಮಾಡಿದ್ದರ ಜೊತೆ ನಿಮಗಿಷ್ಟವಾದ ಗಿಫ್ಟ್ ಸರ್​​ಪ್ರೈಝ್ ಆಗಿ ದೊರೆತರೆ? ಓದಿ ಸ್ವಿಗ್ಗಿ ಇನ್​ಸ್ಟಾಮಾರ್ಟ್​ನ ಈ ಚಾಕೊಲೇಟ್​ ಕುಕೀಸ್​ ಕಥೆ.

ಆನ್​ಲೈನ್​ ಆರ್ಡರ್​; ಸ್ಯಾನಿಟರಿ ಪ್ಯಾಡ್​ ಜೊತೆ ಚಾಕೊಲೇಟ್​ ಕುಕೀಸ್​ ಪಡೆದ ಮಹಿಳೆ
ಪ್ರಾತಿನಿಧಿಕ ಚಿತ್ರ
TV9 Web
| Edited By: ಶ್ರೀದೇವಿ ಕಳಸದ|

Updated on:Jan 27, 2023 | 11:47 AM

Share

Viral Video : ಮೊಬೈಲ್, ಜೀನ್ಸ್​ ಪ್ಯಾಂಟ್​ ಇನ್ನೊಂದೇನೋ ಆರ್ಡರ್ ಮಾಡಿದರೆ ಆಲೂಗಡ್ಡೆ, ಈರುಳ್ಳಿ, ಸಾಬೂನು ಹೀಗೆ ಏನೇನೋ ಸಾಮಾನುಗಳನ್ನು ಗ್ರಾಹಕರು ಪಡೆದ ವರದಿಯನ್ನು ಈ ಹಿಂದೆ ಓದಿದ್ದೀರಿ. ಇದೀಗ ಸ್ವಿಗ್ಗಿ ಇನ್​ಸ್ಟಾಮಾರ್ಟ್​ನಿಂದ ಮಹಿಳೆಯೊಬ್ಬರು ಸ್ಯಾನಿಟರಿ ಪ್ಯಾಡ್​​ಗಾಗಿ ಆರ್ಡರ್ ಮಾಡಿದಾಗ ಅವರಿಗೆ ಪ್ಯಾಡ್​ ಜೊತೆ ಚಾಕೊಲೇಟ್​ ಕುಕೀಸ್ ಕೂಡ ದೊರೆತಿದೆ. ​ನೆಟ್ಟಿಗರೆಲ್ಲ ಆಫರ್ ಬಹಳ ಚೆನ್ನಾಗಿದೆ ಎನ್ನುತ್ತಿದ್ದಾರೆ.

ಆರ್ಡರ್ ಮಾಡಿದ 15 ನಿಮಿಷದಲ್ಲಿ ಗ್ರಾಹಕರನ್ನು ತಲುಪುತ್ತದೆ ಸ್ವಿಗ್ಗಿ ಇನ್​ಸ್ಟಾಮಾರ್ಟ್​. ಹಾಗಾಗಿ ದೇಶದಾದ್ಯಂತ ಇದು ಇಂದು ಜನಪ್ರಿಯ ಡೆಲಿವರಿ ಕಂಪೆನಿಗಳಲ್ಲಿ ಒಂದಾಗಿದೆ. ಸಮೀರಾ ಎನ್ನುವವರು ಈ ಕಂಪೆನಿಯ ಮೂಲಕ ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದಾಗ ಅವರಿಗೆ ಪ್ಯಾಡ್ ಜೊತೆ ಚಾಕೋಲೇಟ್​ ಕುಕೀಸ್​ ಕೂಡ ಸಿಕ್ಕಿದೆ. ಆ ವಿಷಯವನ್ನು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ : ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಜೀನ್ಸ್ ಪ್ಯಾಂಟ್​, ಮಹಿಳೆಯ ಕೈಗೆ ಸಿಕ್ಕಿದ್ದು ಈರುಳ್ಳಿ

‘ನಾನು ಸ್ಯಾನಿಟರಿ ಪ್ಯಾಡ್ ಮಾಡಿದೆ. ಆದರೆ ಚೀಲದಡಿ ಕುಕೀಸ್​ ಕೂಡ ಇತ್ತು. ಇದು ಅಂಗಡಿಯವರಿಂದ ಆದ ಸಿಹಿಪ್ರಮಾದವೋ ಅಥವಾ ಸ್ವಿಗ್ಗಿಯವರದೋ?’ ಎಂದಿದ್ದಾರೆ ಸಮೀರಾ. ಈ ಟ್ವೀಟ್​ ಅನ್ನು ಸ್ವಿಗ್ಗಿ ಇನ್​ಸ್ಟಾಮಾರ್ಟ್​ನವರಿಗೆ ಟ್ಯಾಗ್ ಮಾಡಿದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕೇರ್, ‘ನೀವ ಆಹ್ಲಾದಕರವಾದ ದಿನವನ್ನು ಕಳೆಯಬೇಕೆಂದು ನಾವು ಇಚ್ಛಿಸುತ್ತೇವೆ ಸಮೀರಾ’ ಎಂದು ಪ್ರತಿಕ್ರಿಯಿಸಿದೆ.

ಇದನ್ನೂ ಓದಿ : ಯಾರಿಗೆ ಬೇಕು ರುಚಿರುಚಿ ಗರಿಗರಿಯಾದ ಮಿನಿಯೇಚರ್ ಜಿಲೇಬಿ

ನಿಮಗೆ ಕುಕೀಸ್​ ಸಿಕ್ಕಿದ್ದು ಒಳ್ಳೆಯದೇ, ಸ್ವಿಗ್ಗಿ ತನ್ನ ಪ್ರಚಾರಕ್ಕಾಗಿ  ಮತ್ತು ಗ್ರಾಹಕರನ್ನು ಖುಷಿಪಡಿಸಲು ಹೀಗೆ ಉಚಿತ ಉಡುಗೊರೆಗಳನ್ನು ಕೊಡುತ್ತಿರುತ್ತದೆ ಎಂದಿದ್ದಾರೆ ನೆಟ್ಟಿಗರು. ನಾನು ಹಿಂದೆ ಆರ್ಡರ್ ಮಾಡಿದಾಗೆಲ್ಲ ಬಿಸ್ಕೆಟ್​, ಚಾಕೊಲೇಟ್​, ವೇಫರ್​ಗಳನ್ನು ಸ್ವಿಗ್ಗಿ ಕಳಿಸಿದೆ ಎಂದಿದ್ದಾರೆ ಕೆಲವರು. ಇದು ಒಳ್ಳೆಯ ನಡೆ ಎಂದಿದ್ದಾರೆ ಹಲವರು.

ಯಾವುದೇ ಕಂಪೆನಿಯು ತನ್ನ ಗುರಿಯನ್ನು ತಲುಪಲು ಹೀಗೆ ಗ್ರಾಹಕಸ್ನೇಹಿಯಾಗಿ ವರ್ತಿಸಲು ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿರುತ್ತದೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:46 am, Fri, 27 January 23

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ