AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ: ಪಿಯಾನೋದಲ್ಲಿ ಜನಗಣಮನ ನುಡಿಸಿ ಗೌರವ ಸಲ್ಲಿಸಿದ ಇಸ್ರೇಲಿ ಕಾನ್ಸುಲ್ ಜನರಲ್

Republic Day : ಸರ್, ‘ಗಾಯೇ ತವ ಜಯ ಗಾಥಾ’ ಈ ಸಾಲನ್ನು ನೀವು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ದಕ್ಕೆ, ‘ಕ್ಷಮಿಸಿ ಮುಂದಿನ ಸಲ ಸರಿಯಾಗಿ ನುಡಿಸುವೆ. ಆದರೆ ನಿಮ್ಮ ರಾಷ್ಟ್ರಗೀತೆ ಬಹಳ ಚೆಂದವಿದೆ’ ಎಂದು ಕೊಬ್ಬಿ ಉತ್ತರಿಸಿದ್ದಾರೆ.

ಗಣರಾಜ್ಯೋತ್ಸವ: ಪಿಯಾನೋದಲ್ಲಿ ಜನಗಣಮನ ನುಡಿಸಿ ಗೌರವ ಸಲ್ಲಿಸಿದ ಇಸ್ರೇಲಿ ಕಾನ್ಸುಲ್ ಜನರಲ್
ಇಸ್ರೇಲಿ ಕಾನ್ಸುಲ್ ಜನರಲ್ ಕೊಬ್ಬಿ ಶೊಶಾನಿ ಜನಗಣ ಮನ ನುಡಿಸುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on:Jan 27, 2023 | 12:35 PM

Share

Viral Video : ಪ್ರೀತಿಸುವುದು ಎಂದರೆ ನಮ್ಮ ನೆಲ ನಮ್ಮ ಸಂಸ್ಕೃತಿಯನ್ನಷ್ಟೇ ಅಲ್ಲ. ಅನ್ಯ ನೆಲವನ್ನೂ ಸಂಸ್ಕೃತಿಗಳನ್ನೂ ಗೌರವಿಸುವುದು. ಅಂದಾಗ ಮಾತ್ರ ಮಾನವೀಯತೆ ನಮ್ಮಲ್ಲಿ ಜಾಗೃತವಾಗಿದೆ ಎಂದರ್ಥ. ನಿನ್ನೆಯಷ್ಟೇ ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ಜಗತ್ತಿನಾದ್ಯಂತ ಅನೇಕರು ಆನ್​ಲೈನ್ ಮೂಲಕ ಕೂಡ ಈ ಸಂಭ್ರಮಕ್ಕೆ ಕಾರಣೀಭೂತರಾಗಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇಸ್ರೆಲ್​ನ ಕಾನ್ಸುಲ್ ಜನರಲ್​ ಕೊಬ್ಬಿ ಶೋಶಾನಿ 74ನೇ ಗಣರಾಜ್ಯೋತ್ಸವದ ದಿನದಂದು ಪಿಯಾನೋದಲ್ಲಿ ನಮ್ಮ ರಾಷ್ಟ್ರಗೀತೆ ಜನಗಣಮನ ನುಡಿಸಿ ಗೌರವ ಸಲ್ಲಿಸಿದರು.

‘ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸುಂದರವಾದ ರಾಷ್ಟ್ರಗೀತೆ ಜನಗಣಮನ ನುಡಿಸಲು ಪ್ರಯತ್ನಿಸಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಟ್ವೀಟ್ ಮಾಡಿದ್ದಾರೆ. 12 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,600 ಜನರು ರೀಟ್ವೀಟ್ ಮಾಡಿದ್ದಾರೆ. 11, 300 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಯಾರಿಗೆ ಬೇಕು ರುಚಿರುಚಿ ಗರಿಗರಿಯಾದ ಮಿನಿಯೇಚರ್ ಜಿಲೇಬಿ

ಸರ್, ಗಾಯೇ ತವ ಜಯ ಗಾಥಾ ಈ ಸಾಲನ್ನು ನುಡಿಸುವುದನ್ನು ನೀವು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ದಾರೆ. ಕ್ಷಮಿಸಿ ಮುಂದಿನ ಸಲ ಸರಿಯಾಗಿ ನುಡಿಸುವೆ. ಆದರೆ ನಿಮ್ಮ ರಾಷ್ಟ್ರಗೀತೆ ಬಹಳ ಚೆನ್ನಾಗಿದೆ ಎಂದು ಕೊಬ್ಬಿ ಉತ್ತರಿಸಿದ್ದಾರೆ. ತುಂಬಾ ಹೃದಯಸ್ಪರ್ಶಿಯಾಗಿದೆ, ಧನ್ಯವಾದ ಇಸ್ರೇಲ್​ ಎಂದಿದ್ದಾರೆ ಒಬ್ಬರು. ಜೈಹಿಂದ್​ ಎಂದು ಅನೇಕ ಭಾರತೀಯರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಆನ್​ಲೈನ್​ ಆರ್ಡರ್​; ಸ್ಯಾನಿಟರಿ ಪ್ಯಾಡ್​ ಜೊತೆ ಚಾಕೊಲೇಟ್​ ಕುಕೀಸ್​ ಪಡೆದ ಮಹಿಳೆ

ಪರಸ್ಪರ ಸಂಬಂಧವನ್ನು ಕಾಪಾಡಿಕೊಳ್ಳಲು ಹೀಗೆ ಸಣ್ಣಪುಟ್ಟ ನಡೆಗಳಿಂದ ಗೌರವಿಸುವುದನ್ನು ಕಲಿಯಬೇಕು. ನೀವು ಸರಿಯಾದ ಹಾದಿಯಲ್ಲಿದ್ದೀರಿ ಸರ್ ಎಂದು ಕೆಲವರು ಹೇಳಿದ್ದಾರೆ. ನಿಜಕ್ಕೂ ನಮ್ಮ ರಾಷ್ಟ್ರಗೀತೆ ಬಹಳ ಚೆನ್ನಾಗಿದೆ, ನಿಮ್ಮ ಈ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:35 pm, Fri, 27 January 23

Follow Us
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!