AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹೈದರಾಬಾದಿನಲ್ಲಿ ತೇಲಿಬಂದ ಈ ಪಾತ್ರೆಗಳಲ್ಲಿ ಬಿರಿಯಾನಿ ಇರಲು ಸಾಧ್ಯವೆ?

Biriyani Vessel : ಹೈದರಾಬಾದಿನಲ್ಲಿ ಬಿದ್ದ ಮಹಾಮಳೆಯಿಂದಾಗಿ ಬೀದಿಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಡೆಗ್ಚಿ ಎಂದು ಕರೆಯುವ ಬಿರಿಯಾನಿಯ ಪಾತ್ರೆಗಳು ಬೀದಿಯಲ್ಲಿ ತೇಲಿಕೊಂಡು ಹೋಗುತ್ತಿರುವ ವಿಡಿಯೋ ಅನೇಕರ ಕುತೂಹಲಕ್ಕೆ ಕಾರಣವಾಗಿದೆ.

Viral Video: ಹೈದರಾಬಾದಿನಲ್ಲಿ ತೇಲಿಬಂದ ಈ ಪಾತ್ರೆಗಳಲ್ಲಿ ಬಿರಿಯಾನಿ ಇರಲು ಸಾಧ್ಯವೆ?
ತೇಲುವ ಬಿರಿಯಾನಿ ಪಾತ್ರೆಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 02, 2022 | 3:40 PM

ಹೈದರಾಬಾದ್ : ಹೈದರಾಬಾದ್ ಎಂದರೆ ನಿಜಾಮರ ಆಳ್ವಿಕೆಗೆ, ಕೆಲ ತಿಂಡಿಗಳಿಗೆ ಖ್ಯಾತಿ. ಅದರಲ್ಲೂ ಬಿರಿಯಾನಿ ಎಂದರೆ ಹೈದರಾಬಾದ್, ಹೈದರಾಬಾದ್ ಎಂದರೆ ಬಿರಿಯಾನಿ ಎಂಬಂಥ ಪದಗಳು ಹೊಂದಿಕೊಂಡೇ ಪ್ರಸಿದ್ಧಿಯಾಗಿರುವಂಥವು. ಪ್ರವಾಹದಿಂದ ಜನರು ಸ್ಥಳೀಯ ಆಹಾರ ಮಳಿಗೆಗಳಲ್ಲಿ ಆಶ್ರಯ ಪಡೆದರೆ ಖಾಲೀ ಪಾತ್ರೆಗಳು ದೋಣಿಯಂತೆ ಮನಬಂದತ್ತ ಬೀದಿನೀರಿನಲ್ಲಿ ತೇಲಿಕೊಂಡು ಹೋಗಿರುವ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಈ ತೇಲುವಿಕೆಯನ್ನು ಯಾರೂ ತಡೆಯುವ ಪ್ರಯತ್ನವನ್ನೇ ಮಾಡಿಲ್ಲ. ಬಹುಶಃ ಈ ಮಜಾದೃಶ್ಯವನ್ನು ನೋಡುವುದರಲ್ಲೇ ಮೈಮರೆತಿದ್ದರೋ ಅಥವಾ ಯಾರದೋ ಏನೋ ನಾವ್ಯಾಕೆ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಎಂಬ ಭಯವೋ! ಪಾತ್ರೆ ಕಳೆದುಕೊಂಡವರು ಅಳುತ್ತಿರುವವರೋ ನಗುತ್ತಿರುವವರೋ ಯಾರಿಗೆ ಗೊತ್ತು? ನೆಟ್ಟಿಗರಂತೂ ಮಳೆಯಲ್ಲಿ ಒಳಗೆ ಕುಳಿತು ಈ ದೃಶ್ಯವನ್ನು ನೋಡಿ ನಗುತ್ತಿರುವುದು ಖಾತ್ರಿ.

ಹೈದರಾಬಾದಿನಲ್ಲಿ ಬಿದ್ದ ಮಹಾಮಳೆಯಿಂದಾಗಿ ಬೀದಿಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಡೆಗ್ಚಿ ಎಂದು ಕರೆಯುವ ಬಿರಿಯಾನಿಯ ಪಾತ್ರೆಗಳು ಬೀದಿಯಲ್ಲಿ ತೇಲಿಕೊಂಡು ಹೋಗುತ್ತಿರುವ ವಿಡಿಯೋ ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೋ ಮಾಡಲು ಸಾಧ್ಯವಾಗಿರುವುದು ಹೈದರಾಬಾದಿನ ಶಾಸ್ತ್ರೀಪುರಂ ಬಳಿ ಇರುವ ಅದಿಬಾ ಹೋಟೆಲಿನೆದುರು. ತೇಲುವ ಡೆಗ್ಚಿಯನ್ನು ನೋಡಿದ ಯಾರಿಗೂ ಅರೆಕ್ಷಣ ನಗು ಬಾರದೆ ಇರದು.

ಆದರೆ ನಿಮ್ಮ ಮನಸ್ಸು ನೆನಪುಗಳಿಗೆ ಜಾರಿದಾಗ, ಕೆಲವರಿಗೆ ಈ ದೃಶ್ಯ ಬಾಲ್ಯದ ಆಟ, ಆಟಿಕೆಗಳ ತೇಲುವಿಕೆ ಮತ್ತು ಮಳೆಗಾಲವನ್ನು ಕಣ್ಮುಂದೆ ತರಬಹುದು. ಇನ್ನೂ ಕೆಲವರಿಗೆ, ನೆರೆಹಾವಳಿಗೆ ತುತ್ತಾಗಿ ಮನೆಯ ಪಾತ್ರೆಪಗಡಿಗಳು ನೀರಿನಲ್ಲಿ ತೇಲಿಹೋಗುವಾಗ ಅಸಹಾಯಕರಾಗಿ ನಿಂತ ಕ್ಷಣಗಳು ಒತ್ತರಿಸಿ ದುಃಖವನ್ನೂ ತರಬಹುದು. ಇನ್ನೂ ಹಲವರಿಗೆ ಮಳೆಗಾಲದಲ್ಲಿ ಹೈದರಾಬಾದಿನಲ್ಲಿ ಬಿರಿಯಾನಿ ತಿಂದ ನೆನಪು ಉಕ್ಕುತ್ತಿರಬಹುದು.

ಯಾವ ಹೋಟೆಲಿನ ಡೆಗ್ಚಿಯೋ? ಒಡಲಲ್ಲಿ ಬಿರಿಯಾನಿ ಇತ್ತೋ ಎಂಬ ಪ್ರಶ್ನೆಗೆ ನಿಮ್ಮಲ್ಲೇ ಉತ್ತರವಿದೆ.

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?