AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಅಮ್ಮಾ ಟೆನ್ಷನ್​ ಆಗ್ತಿದೆ! ಈ ಜಗತ್ತಿನಿಂದಲೇ ನಾನು ಹೊರಟು ಹೋಗಬೇಕು

Homework : ಹೋಮ್​ವರ್ಕ್ ಹೋಮ್​ವರ್ಕ್​​ ಹೋಮ್​ವರ್ಕ್​! ಕಂಗೆಟ್ಟ ಮಗು ತನ್ನ ಅಮ್ಮನಿಗೆ ಏನೆಲ್ಲ ಹೇಳಿದೆ. ಓದಿ, ನೋಡಿ.

Viral Video : ಅಮ್ಮಾ ಟೆನ್ಷನ್​ ಆಗ್ತಿದೆ! ಈ ಜಗತ್ತಿನಿಂದಲೇ ನಾನು ಹೊರಟು ಹೋಗಬೇಕು
TV9 Web
| Edited By: |

Updated on:Aug 02, 2022 | 1:26 PM

Share

Viral Video: ಯಾರಿಗಿಷ್ಟರೀ ಹೋಮ್​ ವರ್ಕ್ ಮಾಡೋದು? ಈ ಮಗುವೂ ತನಗೆ ಹೋಮ್​ವರ್ಕ್​ ಮಾಡಲು ಮನಸಿಲ್ಲ ಎನ್ನುವುದನ್ನು ವ್ಯಕ್ತಪಡಿಸಿದ ರೀತಿ ಮೊದಲಿಗೆ ನಗು ತರಿಸುತ್ತದೆಯಾದರೂ ಕ್ರಮೇಣ ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ. ಈ ವಿಡಿಯೋ ಈಗ ವೈರಲ್ ಆಗಿದೆ. ಹೋಮ್​ವರ್ಕ್​ನಿಂದ ಕಂಗಾಲಾದ ಮಗು, ನನಗೆ ಈ ಜಗತ್ತಿನಿಂದಲೇ ಬಿಡುಗಡೆ ಬೇಕು ಎಂದು ತನ್ನ ಅಮ್ಮನೊಂದಿಗೆ ಹೇಳಿದೆ. ಮಗು ಹೀಗೆ ಎಂದಾದರೂ ಮಾತನಾಡಿದ್ದು ಕೇಳಿದ್ದೀರಾ? ಮೊದಲು ಹಿಂದಿ ನೋಟ್​ಬುಕ್​ ಎದುರಿಗಿಟ್ಟುಕೊಂಡ ಈ ಮಗು ಪರಿಪರಿಯಾಗಿ ಹೇಳಿದೆ, ತನಗೆ ಹೋಮ್​ವರ್ಕ್ ಮಾಡಲು ಇಷ್ಟವಿಲ್ಲವೆಂದು. ಕೊನೆಗೆ ರೋಸಿಹೋಗಿ, ‘ಅಮ್ಮಾ ನನಗೆ ಟೆನ್ಶನ್ ಆಗ್ತಿದೆ. ನಾನ್ಯಾಕೆ ಈ ಜಗತ್ತಿನಲ್ಲಿದ್ದೇನೆ? ಈ ಜಗತ್ತಿನಿಂದಲೇ ನಾನು ಹೊರಟು ಹೋಗಬೇಕು, ಹೊರಟು ಹೋಗಬೇಕು’ ಪೆನ್ಸಿಲ್ ಕುಟ್ಟುತ್ತಾ ಹೇಳಿದೆ. ಯಾಕೆ ಹೋಗ್ತಿದ್ದೀಯಾ ಅಂತ ಅಮ್ಮ ಪ್ರಶ್ನಿಸಿದ್ದಕ್ಕೆ, ‘ನನಗೆ ಯಾಕೋ ಈ ಜಗತ್ತಿನಲ್ಲಿರಲು ಮನಸ್ಸಾಗುತ್ತಿಲ್ಲ ಏಕೆಂದರೆ ನೀ ಬಹಳ ಅಸಹ್ಯವಾಗಿ ಆಡುತ್ತಿದ್ದೀಯಾ’ ಎಂದಿದೆ. ಇದನ್ನು ಕೇಳಿದ ಮಗುವಿನ ಅಮ್ಮ ಜೋರಾಗಿ ನಕ್ಕಿದ್ದಾಳೆ.

ಈ ವಿಡಿಯೋ ಇನ್​ಸ್ಟಾಗ್ರಾಂನ ಎಮೊಬಾಯಿಸ್ ಇಂಡಿಯಾ ಪುಟದಲ್ಲಿ (Monday motivation) ಪ್ರಕಟವಾಗಿದ್ದು, ‘ಹೋಮ್​ವರ್ಕ್​ ಮುಗಿಸು ಎಂದು ಅಮ್ಮ ಹೇಳಿದಾಗ ಏನಾಗುತ್ತದೆ ನೋಡಿ’ ಎಂಬ ಸಾಲನ್ನು ಉಲ್ಲೇಖಿಸಿದೆ. ವೈರಲ್ ಆಗಿರುವ ಈ ವಿಡಿಯೋಗೆ ನಾನಾಥರದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಂಥ ಚಿಕ್ಕವಯಸ್ಸಿನಲ್ಲಿಯೇ ಮಗು ತನ್ನ ಅಸ್ತಿತ್ವದ ಬಗ್ಗೆ ಯೋಚಿಸಲಾರಂಭಿಸಿದೆ. ಇದನ್ನೆಲ್ಲ ಹೇಗೆ ಎಲ್ಲಿಂದ ಕಲಿತಿದೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾ ಕೂಡ ಚಿಕ್ಕಂದಿನಲ್ಲಿ ಈ ಮಗುವಿನಂತೆಯೇ ವರ್ತಿಸುತ್ತಿದ್ದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಮತ್ತೊಬ್ಬರು, ಮೂಡ್​ ಬೇಟಾ ಮೂಡ್! ನಾ ಕೂಡ ಈ ಜಗತ್ತಿನಿಂದ ಹೊರಹೋಗಲು ಬಯಸುತ್ತೇನೆ ಎಂದಿದ್ದಾರೆ. ಅಮ್ಮಾ ನನ್ನನ್ನು ಮತ್ತೊಮ್ಮೆ ನಿನ್ನೊಳಗಿರಿಸಿಕೋ ಎಂದು ಇನ್ನೂ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Image
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Image
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
Image
Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

ನೀವೇನು ಯೋಚಿಸುತ್ತಿದ್ದೀರಿ?

Published On - 1:20 pm, Tue, 2 August 22

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ