AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೃತ ಮಾಲೀಕನ ಮುಖ ಕೊನೆಯದಾಗಿ ನೋಡಲು ಓಡೋಡಿ ಬಂದು ಕಣ್ಣೀರಿಟ್ಟ ಕರು

ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಮುಂದೇನಾಯ್ತು ಎಂದು ತಿಳಿಯಲು ವಿಡಿಯೋ ನೋಡಿ.

Viral Video: ಮೃತ ಮಾಲೀಕನ ಮುಖ ಕೊನೆಯದಾಗಿ ನೋಡಲು ಓಡೋಡಿ ಬಂದು ಕಣ್ಣೀರಿಟ್ಟ ಕರು
ಮೃತ ಮಾಲೀಕನಿಗೆ ಕಣ್ಣೀರಿನ ವಿದಾಯ ಹೇಳಿದ ಕರು
TV9 Web
| Edited By: |

Updated on:Sep 22, 2022 | 4:21 PM

Share

ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಜನರೆಲ್ಲರೂ ಮೃತ ವ್ಯಕ್ತಿಯ ದೇಹವನ್ನು ಅಂತ್ಯಸಂಸ್ಕಾರ ನಡೆಸಲು ಜಮೀನಿಗೆ ಕರೆದುಕೊಂಡು ಹೋದರು. ಇತ್ತ ಬೇಸರಲ್ಲೇ ಓಡೋಡಿ ಬಂದ ಕರು ಜಮೀನಿನಲ್ಲಿ ತನ್ನ ಮಾಲೀಕನನ್ನು ಹುಡುಕಾಡಲು ಪ್ರಾರಂಭಿಸಿತು. ಇದನ್ನು ಅರಿತ ಅಲ್ಲಿದ್ದ ಜನರು ಕರುವನ್ನು ಮೃತದೇಹದ ಬಳಿ ಹೋಗಲು ದಾರಿ ಮಾಡಿಕೊಟ್ಟರು. ಹೀಗೆ ಚಟ್ಟದ ಮೇಲೆ ಮಲಗಿದ್ದ ಮೃತ ಮಾಲೀಕನ ಬಳಿ ಹೋಗಿ ಜೋರಾಗಿ ಬೊಬ್ಬಿಡುತ್ತಾ ಕಣ್ಣೀರಿಟ್ಟಿತು. ಈ ಕ್ಷಣವನ್ನು ನೋಡಿದರೆ ಎಂಥವರಿಗಾದರೂ ಕಣ್ಣಿನಲ್ಲಿ ನೀರು ಉಕ್ಕಿ ಹರಿಯದೆ ಇರದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ, ಕರುವಿನ ಮಾಲೀಕ ಸಾವನ್ನಪ್ಪಿರುತ್ತಾರೆ. ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವ ನಿಟ್ಟಿನಲ್ಲಿ ಸಮಸ್ತರು ಜಮೀನಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವೇಳೆ ಜಮೀನಿಗೆ ಬಂದ ಹಸು, ಮೃತಪಟ್ಟ ತನ್ನ ಮಾಲೀಕನನ್ನು ನೋಡಲು ಪರಿತಪಿಸುತ್ತಿತ್ತು. ಇದನ್ನು ನೋಡಿದ ಜನರು ಹಸುವನ್ನು ಮೃತದೇಹದತ್ತ ಹೋಗಲು ದಾರಿ ಮಾಡಿಕೊಟ್ಟರು. ಅದರಂತೆ ಮೃತದೇಹದ ಬಳಿ ಹೋದ ಹಸು ಬೇಸರದಲ್ಲಿ ಬೊಬ್ಬಿಡುತ್ತಾ ದೇಹವನ್ನು ಮುದ್ದಿಸಿ ಕಣ್ಣೀರಿಡುವುದನ್ನು ನೋಡಬಹುದು.

ತನ್ನನ್ನು ಸಲಹಿದ ಮಾಲೀಕನಿಗೆ ಹಸು ಕಣ್ಣೀರಿನ ವಿದಾಯ ಹೇಳುವಂತಹ ಮನಕಲಕುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದಿದೆ. ಅಲ್ಲದೆ ಹಸುವಿನ ಉಪಸ್ಥಿತಿಯಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಿದೆ. ಈ ವಿಡಿಯೋವನ್ನು ಶಕ್ತಿ ಓಜಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾರ್ಖಂಡ್​ನ ಹಜಾರಿಬಾಗ್​ನಲ್ಲಿ ಮಾಲೀಕನ ಸಾವಿನಿಂದಾಗಿ ಚಿತಾಗಾರ ತಲುಪಿದ ಸಾಕು ಹಸು” ಎಂದು ಶೀರ್ಷಿಕೆ ಬರೆದಿದ್ದಾರೆ. ಅಲ್ಲದೆ ಮಾಲೀಕನ ಮುಖವನ್ನು ಕೊನೆಯದಾಗಿ ನೋಡಲು ಹೊದಿಕೆಯನ್ನು ತೆಗೆಯಲಾಗಿತ್ತು ಎಂದೂ ಬರೆದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Thu, 22 September 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ