AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೃತ ಮಾಲೀಕನ ಮುಖ ಕೊನೆಯದಾಗಿ ನೋಡಲು ಓಡೋಡಿ ಬಂದು ಕಣ್ಣೀರಿಟ್ಟ ಕರು

ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಮುಂದೇನಾಯ್ತು ಎಂದು ತಿಳಿಯಲು ವಿಡಿಯೋ ನೋಡಿ.

Viral Video: ಮೃತ ಮಾಲೀಕನ ಮುಖ ಕೊನೆಯದಾಗಿ ನೋಡಲು ಓಡೋಡಿ ಬಂದು ಕಣ್ಣೀರಿಟ್ಟ ಕರು
ಮೃತ ಮಾಲೀಕನಿಗೆ ಕಣ್ಣೀರಿನ ವಿದಾಯ ಹೇಳಿದ ಕರು
TV9 Web
| Updated By: Rakesh Nayak Manchi|

Updated on:Sep 22, 2022 | 4:21 PM

Share

ಆತ ಕರುವನ್ನು ಪ್ರೀತಿಯಿಂದ ಸಾಕಿ ಸಲಹಿ ಕಾಣದ ಊರಿಗೆ ಹೊರಟೇ ಬಿಟ್ಟ. ಆದರೆ ತನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡ ಮಾಲೀಕ ಇನ್ನಿಲ್ಲ ಎಂಬುದನ್ನು ತಿಳಿದ ಆ ಕರು ಅರಗಿಸಿಕೊಳ್ಳುವುದಾದರೂ ಹೇಗೆ? ಜನರೆಲ್ಲರೂ ಮೃತ ವ್ಯಕ್ತಿಯ ದೇಹವನ್ನು ಅಂತ್ಯಸಂಸ್ಕಾರ ನಡೆಸಲು ಜಮೀನಿಗೆ ಕರೆದುಕೊಂಡು ಹೋದರು. ಇತ್ತ ಬೇಸರಲ್ಲೇ ಓಡೋಡಿ ಬಂದ ಕರು ಜಮೀನಿನಲ್ಲಿ ತನ್ನ ಮಾಲೀಕನನ್ನು ಹುಡುಕಾಡಲು ಪ್ರಾರಂಭಿಸಿತು. ಇದನ್ನು ಅರಿತ ಅಲ್ಲಿದ್ದ ಜನರು ಕರುವನ್ನು ಮೃತದೇಹದ ಬಳಿ ಹೋಗಲು ದಾರಿ ಮಾಡಿಕೊಟ್ಟರು. ಹೀಗೆ ಚಟ್ಟದ ಮೇಲೆ ಮಲಗಿದ್ದ ಮೃತ ಮಾಲೀಕನ ಬಳಿ ಹೋಗಿ ಜೋರಾಗಿ ಬೊಬ್ಬಿಡುತ್ತಾ ಕಣ್ಣೀರಿಟ್ಟಿತು. ಈ ಕ್ಷಣವನ್ನು ನೋಡಿದರೆ ಎಂಥವರಿಗಾದರೂ ಕಣ್ಣಿನಲ್ಲಿ ನೀರು ಉಕ್ಕಿ ಹರಿಯದೆ ಇರದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ, ಕರುವಿನ ಮಾಲೀಕ ಸಾವನ್ನಪ್ಪಿರುತ್ತಾರೆ. ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವ ನಿಟ್ಟಿನಲ್ಲಿ ಸಮಸ್ತರು ಜಮೀನಿಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ವೇಳೆ ಜಮೀನಿಗೆ ಬಂದ ಹಸು, ಮೃತಪಟ್ಟ ತನ್ನ ಮಾಲೀಕನನ್ನು ನೋಡಲು ಪರಿತಪಿಸುತ್ತಿತ್ತು. ಇದನ್ನು ನೋಡಿದ ಜನರು ಹಸುವನ್ನು ಮೃತದೇಹದತ್ತ ಹೋಗಲು ದಾರಿ ಮಾಡಿಕೊಟ್ಟರು. ಅದರಂತೆ ಮೃತದೇಹದ ಬಳಿ ಹೋದ ಹಸು ಬೇಸರದಲ್ಲಿ ಬೊಬ್ಬಿಡುತ್ತಾ ದೇಹವನ್ನು ಮುದ್ದಿಸಿ ಕಣ್ಣೀರಿಡುವುದನ್ನು ನೋಡಬಹುದು.

ತನ್ನನ್ನು ಸಲಹಿದ ಮಾಲೀಕನಿಗೆ ಹಸು ಕಣ್ಣೀರಿನ ವಿದಾಯ ಹೇಳುವಂತಹ ಮನಕಲಕುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದಿದೆ. ಅಲ್ಲದೆ ಹಸುವಿನ ಉಪಸ್ಥಿತಿಯಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಿದೆ. ಈ ವಿಡಿಯೋವನ್ನು ಶಕ್ತಿ ಓಜಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾರ್ಖಂಡ್​ನ ಹಜಾರಿಬಾಗ್​ನಲ್ಲಿ ಮಾಲೀಕನ ಸಾವಿನಿಂದಾಗಿ ಚಿತಾಗಾರ ತಲುಪಿದ ಸಾಕು ಹಸು” ಎಂದು ಶೀರ್ಷಿಕೆ ಬರೆದಿದ್ದಾರೆ. ಅಲ್ಲದೆ ಮಾಲೀಕನ ಮುಖವನ್ನು ಕೊನೆಯದಾಗಿ ನೋಡಲು ಹೊದಿಕೆಯನ್ನು ತೆಗೆಯಲಾಗಿತ್ತು ಎಂದೂ ಬರೆದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Thu, 22 September 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?